Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಜಪಾನೀಯರು ರಮಝಾನ್ ತಿಂಗಳಿಡೀ ಉಪವಾಸ...

ಜಪಾನೀಯರು ರಮಝಾನ್ ತಿಂಗಳಿಡೀ ಉಪವಾಸ ಆಚರಿಸುವುದು ಏಕೆ ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ13 Jun 2016 5:13 PM IST
share
ಜಪಾನೀಯರು ರಮಝಾನ್ ತಿಂಗಳಿಡೀ ಉಪವಾಸ ಆಚರಿಸುವುದು ಏಕೆ ಗೊತ್ತೇ?

ಟೋಕಿಯೊ: ಹಲವು ಕಾರಣಗಳಿಗಾಗಿ ಜಪಾನ್ ವಿಶ್ವದಲ್ಲೇ ಅತ್ಯಂತ ವಿಶಿಷ್ಟ ದೇಶ. ಮುಖ್ಯವಾಗಿ ಬೌದ್ಧ ಧರ್ಮವನ್ನು ಇಲ್ಲಿನ ಜನರು ಅನುಸರಿಸುತ್ತಾರೆ. ಆದರೆ ಇಲ್ಲಿನ ಮುಸಲ್ಮಾನೇತರ ಜನ ಕೂಡಾ ಮುಸ್ಲಿಮರಂತೆ ರಮಝಾನ್ ತಿಂಗಳಿನಲ್ಲಿಡೀ ಉಪವಾಸ ಕೈಗೊಳ್ಳುತ್ತಾರೆ. ಆದರೆ ವಿಶ್ವದ ಎಲ್ಲೂ ಇಡೀ ತಿಂಗಳು ಹೀಗೆ ಮುಸಲ್ಮಾನೇತರರು ಉಪವಾಸ ಮಾಡುವುದು ಗೊತ್ತಿಲ್ಲ. ಜಪಾನ್ ನಲ್ಲಿ ಮುಸಲ್ಮಾನೇತರರು ತಿಂಗಳಿಡೀ ಉಪವಾಸ ಇರುವುದು ಏಕೆ ಎನ್ನುವುದು ಗೊತ್ತೇ?


ಬಹುಶಃ ನಿಖರವಾದ ಕಾರಣ ಅವರಿಗೂ ಗೊತ್ತಿಲ್ಲ. ಕುತೂಹಲಕ್ಕೆ ಇಬ್ಬರು ಜಪಾನಿ ಮಹಿಳೆಯರನ್ನು ಈ ಬಗ್ಗೆ ಪ್ರಶ್ನಿಸಿದಾಗ, ವಿಭಿನ್ನ ಉತ್ತರ ದೊರಕಿತು. ಮೊದಲ ಮಹಿಳೆ ಹೇಳಿದ ಪ್ರಕಾರ, ಆಕೆ ಕಳೆದ ವರ್ಷ ಅರೇಬಿಕ್ ಕಲಿಕೆ ಆರಂಭಿಸಿದರು. ಆಗ ಸಹಜವಾಗಿಯೇ ಕೆಲ ಅರಬ್ ಹಾಗೂ ಮುಸ್ಲಿಮರ ಪರಿಚಯವಾಯಿತು. ಕಳೆದ ರಮಝಾನ್ ನಲ್ಲಿ ಒಂದು ದಿನವಷ್ಟೇ ಉಪವಾಸ ಮಾಡಿದ್ದಳು. "ಅದು ತೀರಾ ಕಠಿಣ, ನಾನು ಹೃದಯಪೂರ್ವಕವಾಗಿ ಮಾಡಲು ಸಾಧ್ಯವಾಗಲಿಲ್ಲ" ಎಂದು ಹೇಳಿದಳು. ಈ ವರ್ಷ ಮುಸ್ಲಿಮರಂತೆ ಇಡೀ ತಿಂಗಳು ಉಪವಾಸ ಕೈಗೊಂಡಿದ್ದಾಳೆ. ಇದಕ್ಕೆ ಕಾರಣ, ಕಳೆದ ವರ್ಷ ಆಕೆ ಭೇಟಿ ಮಾಡಿದ ಇಬ್ಬರು ಮುಸ್ಲಿಮರು ತೀರಾ ಒಳ್ಳೆಯವರು. ಆದ್ದರಿಂದ ರಮಝಾನ್ ತಿಂಗಳಲ್ಲಿ ಅವರ ಸುರಕ್ಷತೆ ಹಾಗೂ ಸಂತೋಷಕ್ಕಾಗಿ ಪ್ರಾರ್ಥಿಸುವ ಸಲುವಾಗಿ ಉಪವಾಸ ಕೈಗೊಂಡಿದ್ದಾಗಿ ಆಕೆ ವಿವರಿಸಿದಳು. ಜತೆಗೆ ತನ್ನ ಮಗಳ ಉತ್ತಮ ಭವಿಷ್ಯಕ್ಕಾಗಿ ಪ್ರಾರ್ಥಿಸುವುದು ಕೂಡಾ ಉಪವಾಸದ ಉದ್ದೇಶ ಎಂದು ಹೇಳಿದಳು. ನಾನು ಮುಸ್ಲಿಂ ಸಮುದಾಯಕ್ಕೆ ಸೇರಿದವಳಲ್ಲ. ಎಂದೂ ಸೇರುವುದೂ ಇಲ್ಲ. ಆದರೆ ಖುರಾನ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರಾರ್ಥನೆ ಕರೆ ಬಗ್ಗೆ ಕೇಳಿದ ಬಳಿಕ ನನ್ನ ಹೃದಯ ಹಗುರ ಎನಿಸುತ್ತದೆ ಎಂದು ಹೇಳಿದಳು.


ಮತ್ತೊಬ್ಬ ಮಹಿಳೆ ನೀಡಿದ ಉತ್ತರ ಹೀಗಿದೆ: "ನಾಲ್ಕು ವರ್ಷ ಹಿಂದೆ ನಾನು ಮುಸ್ಲಿಂ ವ್ಯಕ್ತಿಯೊಬ್ಬರನ್ನು ನಾನು ಭೇಟಿ ಮಾಡಿದೆ. ಸಾವಿನ ಬಗ್ಗೆ ನಾವು ಮಾತನಾಡಿದೆವು. ದುರದೃಷ್ಟವಶಾತ್ ಎಲ್ಲ ಜಪಾನೀಯರು ಮೃತದೇಹವನ್ನು ಕಾನೂನುಬದ್ದವಾಗಿ ಸುಡಬೇಕು. ಎಲ್ಲರಿಗೂ ಅದು ನರಕಯಾತನೆ ಎನ್ನುವುದು ನನ್ನ ನಂಬಿಕೆ. ಆದರೆ ಜಪಾನ್ ನಲ್ಲಿ  ಮುಸ್ಲಿಮರು ಮೃತಪಟ್ಟರೆ ದೇಹ ಸುಡಬೇಕಾಗಿಲ್ಲ ಎನ್ನುವುದು ನನಗೆ ತಿಳಿಯಿತು. ಆದ್ದರಿಂದ ಆ ಬಳಿಕ ನಾನು ಇಸ್ಲಾಂ ಬಗ್ಗೆಯೇ ಯೋಚಿಸುತ್ತೇನೆ. ಇದೀಗ ನಾನು ಹಂದಿ ತಿನ್ನುವುದಿಲ್ಲ; ಮದ್ಯಪಾನ ಮಾಡುವುದಿಲ್ಲ. ಆದರೆ ನಾನು ಮುಸಲ್ಮಾನೇತರರು ಖುರಾನ್ ಮುಟ್ಟಬಾರದು ಎಂದು ಹಲವು ಚಿಂತಕರು ಹೇಳಿರುವುದರಿಂದ ಅದನ್ನು ಮುಟ್ಟಿಲ್ಲ. ಫೋನ್ ಮೂಲಕ ಖುರಾನ್ ಕಲಿಯುತ್ತಿದ್ದೇನೆ" ಎಂದು ವಿವರಿಸಿದಳು.
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X