Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಟೀಮ್‌ ಇಂಡಿಯಾ ಮಡಿಲಿಗೆ ಏಕದಿನ ಸರಣಿ

ಟೀಮ್‌ ಇಂಡಿಯಾ ಮಡಿಲಿಗೆ ಏಕದಿನ ಸರಣಿ

ಝಿಂಬಾಬ್ವೆ ವಿರುದ್ಧ ಎರಡನೆ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳ ಜಯ

ವಾರ್ತಾಭಾರತಿವಾರ್ತಾಭಾರತಿ13 Jun 2016 6:03 PM IST
share
ಟೀಮ್‌ ಇಂಡಿಯಾ ಮಡಿಲಿಗೆ ಏಕದಿನ ಸರಣಿ

ಹರಾರೆ, ಜೂ.13: ಟೀಮ್ ಇಂಡಿಯಾ ಇಲ್ಲಿ ನಡೆದ ಎರಡನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.
ಹರಾರೆ ಸ್ಪೋಟ್ಸ್ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 127 ರನ್‌ಗಳ ಸವಾಲು ಪಡೆದಿದ್ದ ಭಾರತ ಇನ್ನೂ 139 ಎಸೆತಗಳು ಬಾಕಿ ಇರುವಾಗಲೇ 2 ವಿಕೆಟ್ ನಷ್ಟದಲ್ಲಿ 129 ರನ್ ದಾಖಲಿಸಿತು.
ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ಜಯಿಸಿದೆ.
ಆರಂಭಿಕ ದಾಂಡಿಗರಾದ ಕೆ.ಎಲ್.ರಾಹುಲ್ 33ರನ್, ಕರುಣ್ ನಾಯರ್ 39 ರನ್, ಅಂಬಟಿ ರಾಯುಡು ಔಟಾಗದೆ 41ರನ್, ಮನೀಷ್ ಪಾಂಡೆ ಔಟಾಗದೆ 4ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿತು. ಬಳಿಕ ಬ್ಯಾಟಿಂಗ್ ಇನಿಂಗ್ಸ್ ಆರಂಭಿಸಿದ ರಾಹುಲ್ ಮತ್ತು ನಾಯರ್ ಮೊದಲ ವಿಕೆಟ್‌ಗೆ 14.4 ಓವರ್‌ಗಳಲ್ಲಿ 58 ರನ್ ದಾಖಲಿಸುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಕಳೆದ ಪಂದ್ಯದಲ್ಲಿ ಬೇಗನೆ ಔಟಾಗಿದ್ದ ಕರುಣ್ ನಾಯರ್ ಈ ಪಂದ್ಯದಲ್ಲಿ ಅರಮಭದಲ್ಲಿ ಜೀವದಾನ ಪಡೆದಿದ್ದರು. ಟೆಂಡಾಯ್ ಚಟಾರ ಎಸೆತದಲ್ಲಿ ಔಟಾಗುವ ಅವಕಾಶ ಇದ್ದರೂ ನೋಬಾಲ್ ಕಾರಣದಿಂದಾಗಿ ಜೀವದಾನ ಪಡೆದರು. ಹೀಗಿದ್ದರೂ ಅವರಿಗೆ 39 ರನ್(112ನಿ, 68ಎ, 5ಬೌ) ಗಳಿಸಲಷ್ಟೇ ಸಾಧ್ಯವಾಯಿತು. ಮೊದಲ ಪಂದ್ಯದಲ್ಲಿ ಶತಕ ದಾಖಲಿಸಿದ್ದ ಕೆ.ಎಲ್. ರಾಹುಲ್ 14.4ನೆ ಓವರ್‌ನಲ್ಲಿ ಚಿಬಾಬ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಕರುಣ್ ನಾಯರ್ ಮತ್ತು ಅಂಬಟಿ ರಾಯುಡು ಬ್ಯಾಟಿಂಗ್ ಮುಂದುವರಿಸಿದರು. ನಾಯರ್ 112 ನಿಮಿಷಗಳ ಬ್ಯಾಟಿಂಗ್‌ನಲ್ಲಿ 68 ಎಸೆತಗಳನ್ನು ಎದುರಿಸಿದರು. 5 ಬೌಂಡರಿಗಳನ್ನು ಒಳಗೊಂಡ 39 ರನ್ ಗಳಿಸಿದರು. ಗೆಲುವಿಗೆ ಇನ್ನೆರಡು ರನ್‌ಗಳ ಆವ್ಯಶಕತೆ ಇದ್ದಾಗ ನಾಯರ್ ಅವರು ಸಿಕಂದರ್ ರಝಾ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದು ಪೆವಿಲಿಯನ್ ಸೇರಿದರು.
ಮನೀಷ್ ಪಾಂಡೆ ಅವರು ಸಿಕಂದರ್ ರಝಾ ಎಸೆತದಲ್ಲಿ ಚೆಂಡನ್ನು ಬೌಂಡರಿಗಟ್ಟುವುದರೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದ ರಾಯುಡು ಈ ಪಂದ್ಯದಲ್ಲೂ 41 ರನ್(112ನಿ, 44ಎ,7ಬೌ) ಗಳಿಸಿದರು.
  ಇದಕ್ಕೂ ಮೊದಲು ಝಿಂಬಾಬ್ವೆ ತಂಡ 34.3 ಓವರ್‌ಗಳಲ್ಲಿ 126 ರನ್‌ಗಳಿಗೆ ಆಲೌಟಾಗಿತ್ತು.ಭಾರತದ ಬೌಲರ್‌ಗಳ ಪೈಕಿ ಯಜುವೇಂದ್ರ ಚಹಾಲ್ 25ಕ್ಕೆ 3 ವಿಕೆಟ್ ಉಡಾಯಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಬಲ್ವಿಂದರ್ ಸ್ರಾನ್(17ಕ್ಕೆ 2), ಧವಳ್ ಕುಲಕಣಿ(31ಕ್ಕೆ 2) ಜಸ್‌ಪ್ರೀತ್ ಬುಮ್ರಾ(27ಕ್ಕೆ 1) ಮತ್ತು ಅಕ್ಷರ್ ಪಟೇಲ್ (22ಕ್ಕೆ 1) ಸಂಘಟಿತ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಝಿಂಬಾಭ್ವೆ ಎಡವಿತು.
ಸಿಬಾಂದ ಮಾತ್ರ ಅರ್ಧಶತಕ ಪೂರ್ಣಗೊಳಿಸಿದರು. 84 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ಅವರು 69 ಎಸೆತಗಳನ್ನು ಎದುರಿಸಿದರು. 6 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 53 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಚಿಬಾಬ (21ರನ್), ಸಿಕಂದರ್ ರಝಾ (16) ಎರಡಂಕೆಯ ಸ್ಕೋರ್ ದಾಖಲಿಸಿದರು. ಇವರನ್ನು ಹೊರತುಪಡಿಸಿದರೆ ತಂಡದ ಸಹ ಆಟಗಾರರು ವಿಫಲರಾದರು.

 ಸ್ಕೋರ್ ಪಟ್ಟಿ

 ಝಿಂಬಾಬ್ವೆ: 34.3 ಓವರ್‌ಗಳಲ್ಲಿ ಆಲೌಟ್ 126

ಮಸಕಝ ಸಿ ಬುಮ್ರಾ ಬಿ ಸ್ರಾನ್09

    ಚಿಭಾಭಾ ಎಲ್‌ಬಿಡಬ್ಲು ಬಿ ಕುಲಕರ್ಣಿ21

ಮೂರ್ ಎಲ್‌ಬಿಡಬ್ಲು ಸ್ರಾನ್ 01

ಸಿಬಾಂಡ ಸಿ ಜಾಧವ್ ಬಿ ಚಾಹಲ್53

ಸಿಕಂದರ್ ರಝಾ ಸಿ ಜಾಧವ್ ಬಿ ಚಾಹಲ್16

ಚಿಗುಂಬುರ ಎಲ್‌ಬಿಡಬ್ಲು ಬಿ ಚಾಹಲ್00

 ಮುತುಂಬಮಿ ಸಿ ಧೋನಿ ಬಿ ಬುಮ್ರಾ02

  ಕ್ರೀಮರ್ ಔಟಾಗದೆ07

 ಚಟಾರ ಬಿ ಕುಲಕರ್ಣಿ02

 ಮುಝರಬನಿ ಎಲ್‌ಬಿಡಬ್ಲು ಬಿ ಪಟೇಲ್05

 ವಿಲಿಯಮ್ಸ್ ಗಾಯಾಳು ಗೈರು-

 ಇತರ 10

ವಿಕೆಟ್ ಪತನ: 1-19, 2-21, 3-39, 4-106, 5-106, 6-107, 7-112, 8-115, 9-126

ಬೌಲಿಂಗ್ ವಿವರ:

 ಸ್ರಾನ್ 6.0-1-17-2

  ಧವಳ್ ಕುಲಕರ್ಣಿ 9.0-1-31-2

 ಬುಮ್ರಾ 6.0-0-27-1

ಅಕ್ಷರ್ ಪಟೇಲ್ 7.3-0-22-1

ಚಾಹಲ್ 6.0-2-25-3

ಭಾರತ 26.3 ಓವರ್‌ಗಳಲ್ಲಿ 129/2

ಕೆಎಲ್ ರಾಹುಲ್ ಬಿ ಚಿಭಾಬ33

 ಕರುಣ್ ನಾಯರ್ ಎಲ್‌ಬಿಡಬ್ಲು ಬಿ ರಝಾ 39

ರಾಯುಡು ಔಟಾಗದೆ 41

 ಮನೀಷ್ ಪಾಂಡೆ ಔಟಾಗದೆ04

  ಇತರ 12

ವಿಕೆಟ್ ಪತನ: 1-58, 2-125.

ಬೌಲಿಂಗ್ ವಿವರ:

 ಚಟಾರ 8.0-1-40-0

ಮುಝರಬನಿ 3.0-1-13-0

 ಚಿಭಾಭಾ 9.0-1-31-1

 ಕ್ರೀಮರ್ 3.0-0-17-0

 ಚಿಗುಂಬುರ 2.0-0-20-0

 ಸಿಕಂದರ್ ರಝಾ 1.5-0-07-1

share
ವಾರ್ತಾಭಾರತಿ
ವಾರ್ತಾಭಾರತಿ
Next Story
X