ದುಬೈ: ದಾರುನ್ನೂರ್ ಇಫ್ತಾರ್ ಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ

ದುಬೈ, ಜೂ.13: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ನ ಮೂಡುಬಿದಿರೆ ಇದರ ಯುಎಇ ರಾಷ್ಟ್ರೀಯ ಸಮಿತಿಯ ವತಿಯಿಂದ ಜುಲೈ 1ರಂದು ನಡೆಯಲಿರುವ ಬೃಹತ್ ಇಫ್ತಾರ್ ಸಂಗಮದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭವು ಇತ್ತೀಚೆಗೆ ದೇರಾ ರಾಫಿ ಹೋಟೆಲ್ ನಲ್ಲಿ ನಡೆಯಿತು.
ಆಮಂತ್ರಣ ಪತ್ರಿಕೆಯನ್ನು ದಾರುನ್ನೂರ್ ಯುಎಇ ಅಧ್ಯಕ್ಷ ಸಲೀಂ ಅಲ್ತಾಫ್ ಫರಂಗಿಪೇಟೆ ಮತ್ತು ದಾರುನ್ನೂರ್ ಗ್ರಾಂಡ್ ಇಫ್ತಾರ್ –ಕೂಟದ ಅಧ್ಯಕ್ಷ ಅನ್ಸಾಫ್ ಪಾತೂರ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಈ ಸಂದರ್ಭ ದಾರುನ್ನೂರ್ ಇಫ್ತಾರ್ ಸಮಿತಿಯ ಆಕ್ಟಿಂಗ್ ಚೇರ್ಮೇನ್ ಆಗಿ ನವಾಝ್ ಬಿ.ಸಿ.ರೋಡ್ರನ್ನು ಆರಿಸಲಾಯಿತು. ಅಬ್ದುಸ್ಸಲಾಂ ಬಪ್ಪಳಿಗೆ ಕಾರ್ಯಕ್ರಮದ ಸಿದ್ಧತೆಯ ಕುರಿತು ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ದಾರುನ್ನೂರ್ ಯುಎಇ ಅಧ್ಯಕ್ಷ ಸಲೀಂ ಅಲ್ತಾಫ್ ಫರಂಗಿಪೇಟೆ, ಜೂ. 16ರ ಕಾರ್ಯಕ್ರಮದಲ್ಲಿ ದುಬೈ ಸರಕಾರದ ಅತಿಥಿಯಾಗಿ ಆಗಮಿಸಲಿರುವ ದಾರುನ್ನೂರಿನ ಶಿಲ್ಪಿ, ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಭಾಗವಹಿಸಲಿದ್ದು, ದಾರುನ್ನೂರ್ ರಾಷ್ಟ್ರೀಯ ಸಮಿತಿಯು ದುಬೈ ಎಸ್ಕೆಎಸ್ಸೆಸ್ಸೆಫ್ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಲಿದೆ ಎಂದರು.
ಹಮೀದ್ ಮನಿಲ ಮತ್ತು ಉಸ್ಮಾನ್ ಕೆಮ್ಮಿಂಜೆಯವರ ಪ್ರಯತ್ನದ ಫಲವಾಗಿ ರೂಪುಗೊಂಡ ‘ಆಹ್ಲನ್ ಯಾ ಶಹ್ರ ರಮಳಾನ್’ ಎಂಬ ಕಿರು ಹೊತ್ತಗೆಯನ್ನು ಬಿಡುಗಡೆಗೊಳಿಸಲಾಯಿತು.
ಈ ಪುಸ್ತಕದಲ್ಲಿ ರಮಝಾನಿನ ಮಹತ್ವವನ್ನು ಪ್ರಜ್ವಲಿಸುವ ಎಲ್ಲಾ ದುಆಗಳು ಅಡಕವಾಗಿದ್ದು, ಇಂಟಲೈಝ್ ಸ್ಟೇಷನರಿಯ ಮಾಲಕ ಸಂಶುದ್ದೀನ್ ಸೂರಲ್ಪಾಡಿ ಮತ್ತು ಕ್ರಿಸ್ಟಾಲ್ ಟಚ್ ಬಿಲ್ಡಿಂಗ್ ಮೈಂಟನೆನ್ಸ್ನ ಮಾಲಕ ಮುಹಮ್ಮದ್ ಮುಸ್ತಾಕ್ ತೋಡಾರ್ ಪ್ರಾಯೋಜಕತ್ವದ ಕೃತಿಯನ್ನು ಪಯನೀರ್ ಸ್ಟಾಂಪ್ಸ್ನ ಮಾಲಕ ಝಕರಿಯಾ ಮುಲಾರ್ ಕೃತಿಯನ್ನು ಮುದ್ರಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಹಮೀದ್ ಮನಲ ಮತ್ತು ಉಸ್ಮಾನ್ ಕೆಮ್ಮಿಂಜೆ ದ್ವಿತೀಯ ಕೃತಿಯ ಕಾರ್ಯವನ್ನು ರಮಝಾನ್ನ ಬಳಿಕ ಕೈಗೆತ್ತಿಕೊಳ್ಳಲಾಗುವುದು ಎಂದರು.
ನವಾಝ್ ಬಿ.ಸಿ.ರೋಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ದಾರುನ್ನೂರ್ ಪ್ರಮುಖರಾದ ಮುಹಮ್ಮದ್ ರಫೀಕ್ ಸುರತ್ಕಲ್, ಸಮೀರ್ ಇಬ್ರಾಹೀಂ ಕಲ್ಲರೆ, ಅಬ್ದುರ್ರಹ್ಮಾನ್ ಬಾಲಿಯೂರ್, ಸಫ್ವಾನ್ ಕುಪ್ಪೆಪದವು, ಇಲ್ಯಾಸ್ ಕಡಬ, ನಾಸಿರ್ ಬಪ್ಪಳಿಗೆ, ರಿಝ್ವಾನ್ ಬಜ್ಪೆ ಮೊದಲಾದವರು ಉಪಸ್ಥಿತರಿದ್ದರು.







