Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಇನ್ನೊಬ್ಬರ ಹಸಿವು ಅರಿಯುವ ವಿಶಿಷ್ಟ...

ಇನ್ನೊಬ್ಬರ ಹಸಿವು ಅರಿಯುವ ವಿಶಿಷ್ಟ ಚಿಂತನೆ ರಮಝಾನ್

ನಾನು ಕಂಡಂತೆ ರಮಝಾನ್

ಕಾವು ಹೇಮನಾಥ ಶೆಟ್ಟಿಕಾವು ಹೇಮನಾಥ ಶೆಟ್ಟಿ14 Jun 2016 1:21 PM IST
share
ಇನ್ನೊಬ್ಬರ ಹಸಿವು ಅರಿಯುವ ವಿಶಿಷ್ಟ ಚಿಂತನೆ ರಮಝಾನ್

ರಮಝಾನ್ ಎಂಬುದು ಮುಸ್ಲಿಂ ಧರ್ಮದ ಪವಿತ್ರ ತಿಂಗಳು. ಈ ತಿಂಗಳ 30 ದಿನಗಳಲ್ಲಿ ಮುಸ್ಲಿಂ ಬಂಧುಗಳು ತಮ್ಮ ದೇಹವನ್ನು ದಂಡಿಸಿ, ಹಗಲು ಹೊತ್ತಿನಲ್ಲಿ ಸಂಪೂರ್ಣ ಆಹಾರ ತ್ಯಜಿಸಿ ಉಪವಾಸ ವ್ರತ ಕೈಗೊಂಡು ದೇವರ ಸ್ಮರಣೆ ಮಾಡುವುದು. ದಾನ ಧರ್ಮಗಳನ್ನು ಮಾಡುತ್ತಾ ಇನ್ನೊಬ್ಬರ ನೋವು, ಸಂಕಷ್ಟ, ದುಖ, ದುಮ್ಮಾನಗಳಿಗೆ ಧ್ವನಿಯಾಗುವುದನ್ನು ಇತರ ಯಾವುದೇ ಧರ್ಮಗಳಲ್ಲಿ ಕಾಣಲು ಸಾಧ್ಯವಿಲ್ಲ. ನಾನು ಕಂಡಂತೆ ಈ ಪವಿತ್ರವಾದ ದಿನಗಳಲ್ಲಿ ಉಪವಾಸ ವ್ರತ ಆಚರಿಸುವವರು ಧರ್ಮದ ಬಗ್ಗೆ ಅಪಾರವಾದ ಭಕ್ತಿಯನ್ನು ಹೊಂದಿರುತ್ತಾರೆ. ಅಲ್ಲದೆ, ಇತರ ಬಡವರಿಗೆ, ಆಶಕ್ತರಿಗೆ ದಾನ ಧರ್ಮ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗುವ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ. ಮಹಿಳೆ, ಪುರುಷರು, ಅಬಾಲ ವೃದ್ಧರಾದಿಯಾಗಿ ಎಲ್ಲರೂ ಅನ್ನಾಹಾರ ತ್ಯಜಿಸಿ ದೇವರ ಪ್ರಾರ್ಥನೆ ಮಾಡುತ್ತಿರುವುದು ಸ್ವ ಹಸಿವನ್ನು ಅನುಭವಿಸುತ್ತಾ ಇನ್ನೊಬ್ಬರ ಹಸಿವನ್ನು ಗಮನಿಸುವ ವಿಶಿಷ್ಟ ಚಿಂತನೆಯಾಗಿದೆ ರಮಝಾನ್ ಉಪವಾಸ.

ರಮಝಾನ್ ಉಪವಾಸ ಬಿಡಿಸುವ ಇಫ್ತಾರ್ ಕೂಟಗಳು ಅಲ್ಲಲ್ಲಿ ನಡೆಯುತ್ತಿದೆ. ನನ್ನನ್ನು ಹಲವು ಗೆಳೆಯರು ಇಫ್ತಾರ್ ಕೂಟಕ್ಕೆ ಅಹ್ವಾನಿಸುತ್ತಾರೆ. ಅವರೊಂದಿಗೆ ಬೆರೆತು ಇಫ್ತಾರ್‌ನ ಖುಶಿಯನ್ನು ನಾನು ಅನುಭವಿಸಿದ್ದೇನೆ. ನಾನು ಕಂಡಂತೆ ಉಪವಾಸ ಎಂಬುದು ಕೇವಲ ಹಸಿದುಕೊಂಡು ಪ್ರಾರ್ಥನೆ ಮಾಡುವುದಕ್ಕೆ ಸೀಮಿತವಲ್ಲ. ಅದರೊಂದಿಗೆ ಇನ್ನೊಬ್ಬರ ಹಸಿವಿನ ಬೆಲೆಯನ್ನು ತಿಳಿಯುವುದು, ಶ್ರೀಮಂತ-ಬಡವ ಎಂಬ ತಾರತಮ್ಯ ತೊರೆದು ಎಲ್ಲರೂ ದೇವರ ಮುಂದೆ ಒಂದೇ ಎಂಬ ಸಮಾನತೆಯನ್ನು ಸಾರುವುದು. ಮನುಷ್ಯ ಜೀವದ ಬೆಲೆಯನ್ನು ತಿಳಿಯುವ ಮಹತ್ತರವಾದ ಕಾರ್ಯವಾಗಿದೆ. ಇದೊಂದು ಸಮಾನತೆಯ ಸಂಕೇತವಾಗಿದೆ.

ದೇವರು ಎಲ್ಲರಿಗೂ ಒಂದೇ. ಜಾತಿ, ಧರ್ಮಗಳು ನಾವು ಮಾಡಿಕೊಂಡಿರುವ ವ್ಯವಸ್ಥೆಗಳು, ಒಳ್ಳೆಯವರು, ಕೆಟ್ಟವರು ಎಲ್ಲರಲ್ಲೂ ಇದ್ದಾರೆ. ನಾವು ಮಾಡಿರುವ ಒಳ್ಳೆಯ ಕೆಲಸಗಳು ಎಂದೂ ನಮ್ಮನ್ನು ಕಾಪಾಡುತ್ತದೆ ಎಂಬ ದೃಢ ನಂಬಿಕೆಯಿರುವ ನಾನು ಕಳೆದ 20 ವರ್ಷಗಳಿಂದ ಸ್ವತಃ ಇಪ್ತಾರ್ ಕೂಟ ನಡೆಸಿಕೊಂಡು ಬರುತ್ತಿದ್ದೇನೆ. ಈ ಕೂಟದಲ್ಲಿ ಹಿಂದೂ, ಮುಸ್ಲಿಂ ಸೇರಿದಂತೆ ಹಲವಾರು ಮಂದಿ ಜಾತಿ ಧರ್ಮಗಳ ಭೇದವಿಲ್ಲದೆ ಭಾಗವಹಿಸುತ್ತಾರೆ. ಈ ಕೆಲಸವನ್ನು ಪವಿತ್ರ ಮತ್ತು ಶ್ರೇಷ್ಠ ಎಂದು ನಂಬಿದವನು ನಾನು. ಇದೊಂದು ಪುಣ್ಯದ ಕೆಲಸವಾಗಿದ್ದು ಇದರ ಬಗ್ಗೆ ನನಗೆ ಅಪಾರವಾದ ಗೌರವ ಮತ್ತು ಶ್ರದ್ಧೆಯಿದೆ.

ನಾನೋರ್ವ ಹಿಂದೂವಾಗಿದ್ದರೂ ಮುಸ್ಲಿಂ, ಕ್ರಿಶ್ಚನ್ ಮತ್ತು ಇತರ ಎಲ್ಲಾ ಧರ್ಮದವರೊಂದಿಗೆ ಗೌರವ ಮತ್ತು ಭಕ್ತಿ ಹೊಂದಿದವನಾಗಿದ್ದೇನೆ. ಆದ ಕಾರಣ ರಮಝಾನ್ ನನಗೆ ಮುಸ್ಲಿಮರಂತೆ ಪರಮ ಪವಿತ್ರ ಮತ್ತು ಭಕ್ತಿಯ ತಿಂಗಳಾಗಿದೆ. ಪವಿತ್ರ ರಮಝಾನ್ ಜಗತ್ತಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡಲಿ.

ಕಾವು ಹೇಮನಾಥ ಶೆಟ್ಟಿ

ಮಾಜಿ ಆಡಳಿತ ಮೊಕ್ತೇಸರರು,

ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ.

share
ಕಾವು ಹೇಮನಾಥ ಶೆಟ್ಟಿ
ಕಾವು ಹೇಮನಾಥ ಶೆಟ್ಟಿ
Next Story
X