Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕುಸಿಯುತ್ತಿರುವ ಅಡಿಕೆ ಧಾರಣೆ:...

ಕುಸಿಯುತ್ತಿರುವ ಅಡಿಕೆ ಧಾರಣೆ: ಆತಂಕದಲ್ಲಿ ಬೆಳೆಗಾರ

ಸರಕಾರದ ಮಧ್ಯ ಪ್ರವೇಶಕ್ಕೆ ರೈತರ, ವರ್ತಕರ ಆಗ್ರಹ

ವಾರ್ತಾಭಾರತಿವಾರ್ತಾಭಾರತಿ14 Jun 2016 5:20 PM IST
share
ಕುಸಿಯುತ್ತಿರುವ ಅಡಿಕೆ ಧಾರಣೆ: ಆತಂಕದಲ್ಲಿ ಬೆಳೆಗಾರ

ಸುಳ್ಯ, ಜೂ.14: ಕಳೆದೆರಡು ತಿಂಗಳಿನಿಂದ ಸ್ಥಿರವಾಗಿದ್ದ ಅಡಿಕೆ ಧಾರಣೆ ಹತ್ತು ದಿನಗಳಿಂದ ನಿರಂತರ ಕುಸಿಯುತ್ತಿದ್ದು, ರೈತರಲ್ಲಿ ಆತಂಕ ಸೃಷ್ಟಿಸಿದೆ. 

ಜಿಲ್ಲೆಯಲ್ಲಿ ಚಾಲಿ ಅಡಿಕೆಯನ್ನೇ ಬೆಳೆಯುತ್ತಿದ್ದು, ಹಳೆ ಅಡಿಕೆಗೆ ಗರಿಷ್ಠ 325ರವರೆಗೆ ಹಾಗೂ ಹೊಸ ಅಡಿಕೆಗೆ 250ರವರೆಗೆ ಧಾರಣೆ ಏರಿತ್ತು. ಎರಡು ತಿಂಗಳಿನಿಂದ ಸ್ವಲ್ಪಇಳಿಕೆ ಕಂಡಿದ್ದ ಧಾರಣೆ 300 ಹಾಗೂ 240ರಲ್ಲಿ ಸ್ಥಿರವಾಗಿತ್ತು. ಆದರೆ ವಾರದಿಂದ ನಿರಂತರ ಕುಸಿತ ಕಂಡಿದ್ದು, 290 ಹಾಗೂ 220ಕ್ಕೆ ಇಳಿದಿದೆ.

ದಾವಣಗೆರೆ, ಶಿವಮೊಗ್ಗದಲ್ಲಿ ಕೆಂಪಡಿಕೆ ಬೆಳೆಯುತ್ತಿದ್ದು, ಅಲ್ಲಿ ಧಾರಣೆ ಪಾತಾಳ ಕಂಡಿದೆ. ಗುಟ್ಕ ಕಂಪೆನಿಗಳು ಕಡಿಮೆ ಗುಣಮಟ್ಟದ ಅಡಿಕೆಯನ್ನು ಗುಟ್ಕಕ್ಕೆ ಬಳಸುತ್ತಿದ್ದು, ಕೆಂಪಡಿಕೆಗೆ ಬೇಡಿಕೆ ಕಡಿಮೆಯಾಗಿದೆ. ಪ್ರತಿ ಕೆಜಿಗೆ ವರ್ಷದ ಹಿಂದೆ 800 ರೂಪಾಯಿ ಇದ್ದ ಕೆಂಪಡಿಕೆ ಧಾರಣೆ ಈಗ 200ಕ್ಕೂ ಕೇಳುವವರಿಲ್ಲ ಎಂಬ ಸ್ಥಿತಿಗೆ ಬಂದಿದೆ. ದಾಸ್ತಾನಿಟ್ಟ ಕೆಂಪಡಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದೆ ಅಭಾವ ಸೃಷ್ಠಿಸಿದಲ್ಲಿ ಧಾರಣೆ ಮತ್ತೂ ಹೆಚ್ಚಾಗುವುದು ಎಂದು ಸಂಗ್ರಹಿಸಿಟ್ಟ ಅಡಿಕೆ ಈಗ ಯಾರಿಗೂ ಬೇಡವಾಗಿದೆ.

ಧಾರಣೆ ಕುಸಿತದ ಪ್ರಭಾವ ಚಾಲಿ ಅಡಿಕೆಗೂ ಸ್ವಲ್ಪ ಮಟ್ಟಿಗೆ ತಟ್ಟಿದೆ. ಅಡಿಕೆಯನ್ನು ಒಮ್ಮೆಗೆ ಮಾರುಕಟ್ಟೆಗೆ ಬಿಡದೆ ಅಗತ್ಯವಿರುವಷ್ಟೇ ಮಾರುಕಟ್ಟೆಗೆ ಬಿಟ್ಟರೆ ಧಾರಣೆ ಸ್ಥಿರತೆಯನ್ನು ಕಾಪಾಡಬಹುದು. ಆದರೆ ಅತಿ ಆಸೆಗೆ ಬಲಿಬಿದ್ದು ಇದ್ದ ಧಾರಣೆಯನ್ನೂ ಕಳೆದುಕೊಳ್ಳುವ ಸ್ಥಿತಿ ಚಾಲಿ ಅಡಿಕೆಗೂ ಬಾರದಿರಲಿ ಎಂಬುದು ಇಲ್ಲಿನ ರೈತರ ಅನಿಸಿಕೆ.

ಗುಟ್ಕ ನಿಷೇಧದ ಗುಮ್ಮ ಹಾಗೂ ಆಮದು ಪ್ರಮಾಣ ಹೆಚ್ಚಳದಿಂದ ಧಾರಣೆ ಕುಸಿತವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ವಿದೇಶದಿಂದ ತೆರಿಗೆ ತಪ್ಪಿಸಿ ಆಮದು ನಡೆಯುತ್ತಿದ್ದು, ಕಳಪೆ ಗುಣಮಟ್ಟದ ಅಡಿಕೆ ಕನಿಷ್ಠ ಬೆಲೆಗೆ ಸಿಗುತ್ತಿರುವುದರಿಂದ ಇಲ್ಲಿನ ಅಡಿಕೆಗೆ ಬೇಡಿಕೆ ಕಡಿಮೆಯಾಗಿದೆ ಎನ್ನುವುದು ವ್ಯಾಪಾರಿಗಳ ಅನಿಸಿಕೆ. ಈ ಧಾರಣೆ ಶಾಶ್ವತವಲ್ಲ, ಸುಧಾರಿಸಬಹುದು ಎನ್ನುತ್ತಾರೆ ವರ್ತಕರು.

ಸಹಕಾರಿ ಕ್ಷೇತ್ರದ ಕ್ಯಾಂಪ್ಕೊ, ಮಾಸ್ ಖರೀದಿ ಸಾಮರ್ಥ್ಯಕ್ಕೆ ಹೋಲಿಸಿದಾಗ ಅಡಿಕೆ ಮಾರುಕಟ್ಟೆಯ ಹಿಡಿತ ಈಗಲೂ ಖಾಸಗಿಯವರ ಕೈಯಲ್ಲಿದೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಖಾಸಗಿ ಮಾರುಕಟ್ಟೆ ಬೀಳುವ ಮೊದಲೇ ಸಹಕಾರಿ ಸಂಸ್ಥೆಗಳೇ ಧಾರಣೆಯನ್ನು ಕಡಿಮೆ ಮಾಡುತ್ತಿವೆ ಎನ್ನುತ್ತಾರೆ ಖಾಸಗಿ ವ್ಯಾಪಾರಿಗಳು.

ದುಬಾರಿ ಗೊಬ್ಬರ, ಕಾರ್ಮಿಕರ ಅಲಭ್ಯತೆ, ಅಡಿಕೆ ಔಷಧಿ ಸಿಂಪಡಣೆ, ಎಲ್ಲವೂ ಸಮಸ್ಯೆಯಾಗಿ ಪರಿಣಮಿಸಿದೆ. ಬರದಿಂದ ಅರ್ಧ ಅಡಿಕೆ ತೋಟ ಕಳೆದುಕೊಂಡಿರುವ ರೈತರು ತೋಟಕ್ಕೆ ಕೊಳೆ ರೋಗ ಅಂಟಿಕೊಂಡಲ್ಲಿ ಮತ್ತಷ್ಟು ಸಂಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳಬೇಕಾಗುತ್ತದೆ ಎನ್ನುವುದು ರೈತರ ಅನಿಸಿಕೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X