Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಬೆಳ್ತಂಗಡಿ: 94ಸಿ ಯೋಜನೆ ಅಕ್ರಮದ ಕುರಿತು...

ಬೆಳ್ತಂಗಡಿ: 94ಸಿ ಯೋಜನೆ ಅಕ್ರಮದ ಕುರಿತು ಸದಸ್ಯರ ಆಕ್ರೋಶ

ಬೆಳ್ತಂಗಡಿ ತಾ.ಪಂ.ನ ಪ್ರಥಮ ಸಾಮಾನ್ಯ ಸಭೆ

ವಾರ್ತಾಭಾರತಿವಾರ್ತಾಭಾರತಿ14 Jun 2016 11:21 PM IST
share
ಬೆಳ್ತಂಗಡಿ: 94ಸಿ ಯೋಜನೆ ಅಕ್ರಮದ ಕುರಿತು ಸದಸ್ಯರ ಆಕ್ರೋಶ

ಬೆಳ್ತಂಗಡಿ, ಜೂ.14: ಲಂಚಗುಳಿತನಕ್ಕೆ ರಹದಾರಿಯಾಗಿರುವ 94ಸಿ ಯೋಜನೆಯಲ್ಲಿ ಬಡವರು ನೊಂದು ಹೋಗಿದ್ದಾರೆ. ಗ್ರಾ.ಪಂ.ನ ಗ್ರಾಮಕರಣಿಕರು, ಉಗ್ರಾಣಿಗಳು ಇಂತಿಷ್ಟು ಜಾಗಕ್ಕೆ ಇಂತಿಷ್ಟು ಹಣ ಎಂದು ನಿಗದಿಸಿಕೊಂಡು ಬಡವ ಬಲ್ಲಿದ ಎನ್ನದೆ ಪೀಕಿಸುತ್ತಿದ್ದಾರೆ. ಲಂಚ ಕೊಟ್ಟರೂ ಕೆಲಸ ಆಗುವುದಿಲ್ಲ. ವಿಎಗಳು ಅಹಂಕಾರಿಗಳಂತೆ ವರ್ತಿಸುತ್ತಿದ್ದಾರೆ. ಕೆಲವು ಪಂ.ಗಳಲ್ಲಿ ಯೋಜನೆಗೆ ಸಂಬಂಧಪಟ್ಟಂತಹ ಪೈಲುಗಳು, ಪುಸ್ತಕಗಳು ಕಾಣೆಯಾಗಿವೆ. ಇನ್ನು ಕೆಲವಡೆ ಅವೆಲ್ಲ ವಿಎಗಳ ಮನೆಯಲ್ಲಿರುತ್ತವೆ. ವಿಎ ಗಳು ಕೆಲವು ಎಜೆಂಟರ ಮೂಲಕ ಹಣ ಪಾವತಿಸುವುದನ್ನೂ ಮಾಡುತ್ತಿದ್ದಾರೆ. ಕೆಲವು ಪಂಚಾಯತ್‌ಗಳು ಮನೆ ಸಂಖ್ಯೆ ಬೇಕು ಎಂದು ಕೇಳಿದರೆ ಇನ್ನು ಕೆಲವಡೆ ಬೇಡ ಎನ್ನುತ್ತಾರೆ. ಹಲವು ಪಂಚಾಯತ್‌ಗಳಲ್ಲಿ ಅಲ್ಲಿನ ಸದಸ್ಯರಿಗೆ ಈ ಯೋಜನೆಯ ಸಮರ್ಪಕ ಮಾಹಿತಿಯೇ ಇಲ್ಲವಾಗಿದೆ. ಕೊಕ್ಕಡದಲ್ಲಿ ಅರ್ಜಿಗಳನ್ನು ಇನ್ನೂ ಸ್ವೀಕರಿಸುತ್ತಿಲ್ಲ. ಶ್ರೀಮಂತರೆನೋ ಹಣಕೊಟ್ಟು ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಬಡವರ ಗತಿಯೇನು ಎಂದು ತಾಲೂಕು ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.

ಬೆಳ್ತಂಗಡಿ ತಾಲೂಕು ಪಂಚಾಯತ್‌ನ ಮೊದಲ ಸಾಮಾನ್ಯ ಸಭೆ ಅಧ್ಯಕ್ಷೆ ದಿವ್ಯಜ್ಯೋತಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಸಭೆಯಲ್ಲಿ ಶಾಸಕ ಕೆ.ವಸಂತ ಬಂಗೇರ ಹಾಗೂ ಜಿ.ಪಂ ತಾ.ಪಂ ಸದಸ್ಯರುಗಳು ಉಪಸ್ಥಿತರಿದ್ದರು. 94ಸಿಯ ವಿಫಲತೆಯನ್ನು ಗಂಭೀರವಾಗಿ ಸ್ವೀಕರಿಸಿದ ಶಾಸಕರು, ಜೂ.28 ರಂದು ಬೆಳಗ್ಗೆ 11 ಗಂಟೆಗೆ ತಾ.ಪಂ. ಸಭಾಂಗಣದಲ್ಲಿ ಕಂದಾಯ ಇಲಾಖೆಯ ಸಭೆ ಕರೆಯುತ್ತೇನೆ. ಆ ದಿನ ಎಲ್ಲಾ ಪಿಡಿಒ, ವಿಎ, ಉಗ್ರಾಣಿಗಳನ್ನು ಬರ ಹೇಳಲಾಗುವುದು ಎಂದರು.

ಪಡಿತರ ಚೀಟಿಯ ಗೊಂದಲದ ಬಗ್ಗೆಯೂ ಚರ್ಚೆ ನಡೆಯಿತು. ಆಧಾರ್‌ಕಾರ್ಡ್ ಮಾಡಿಸಲು ಜನ ಇನ್ನೂ ಪರದಾಡುತ್ತಿದ್ದು, ಕೆಲವಡೆ ಕಂಪ್ಯೂಟರ್‌ಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದು, ಎರಡು ಕಂಪ್ಯೂಟರ್‌ಗಳ ಬೇಡಿಕೆ ಇರುವುದು, ಆಧಾರ್ ಕೇಂದ್ರಗಳಲ್ಲಿನ ತಾತ್ಕಾಲಿಕ ಸಿಬ್ಬಂದಿಗೆ ವೇತನ ಸಿಗದೇ ಇರುವುದನ್ನು ಸದಸ್ಯರು ಶಾಸಕರ ಮುಂದಿಟ್ಟರು.

ವೇಣೂರಿನಲ್ಲಿ ಗ್ರಾಮಕರಣಿಕರ ವಸತಿಗಾಗಿ 15 ಸೆಂಟ್ಸ್ ಜಾಗ ಮೀಸಲಾಗಿಡಲಾಗಿದೆ. ಆ ಜಾಗಕ್ಕೆ ಅಕ್ರಮ ಸಕ್ರಮದಡಿಯಲ್ಲಿ ದೇವದಾಸ ಹೆಗ್ಡೆ ಹಾಗೂ ಸುಬ್ಬಣ್ಣ ಹೆಗ್ಡೆ ಎಂಬುವರು ಅರ್ಜಿ ಹಾಕಿದ್ದಾರೆ. ಇದು ಶಾಸಕರ ಗಮನಕ್ಕೂ ಬಂದಿದೆ. ಕಂದಾಯ ಇಲಾಖೆಯ ಜಾಗ ಮಾತ್ರವಲ್ಲದೆ ಅದು ಡಿಸಿಮನ್ನಾ ಜಾಗದ ವ್ಯಾಪ್ತಿಯಲ್ಲೂ ಇದೆ ಎಂದು ಸದಸ್ಯ ವಿಜಯಗೌಡ ತಿಳಿಸಿದಾಗ, ಶೇಖರ ಕುಕ್ಕೇಡಿ ಅವರೂ ದನಿಗೂಡಿಸಿ ಡಿಸಿಮನ್ನಾ ಜಾಗ ಯಾರಿಗೂ ಕೊಡಲು ಬರುವುದಿಲ್ಲ. ಇದು ಆಗಬಾರದು ಎಂದರು.


ಸರಕಾರಿ ಬಸ್‌ಗಳ ಪಾಸ್ ಇನ್ನೂ ವಿತರಣೆಯಾಗುತ್ತಿಲ್ಲ. ಮಾಲಾಡಿ, ಪಣಕಜೆ, ಮದ್ದಡ್ಕ ಮೊದಲಾದೆಡೆ ಬಸ್ ನಿಲ್ದಾಣಗಳಲ್ಲಿ ಶೆಟ್ಲ್ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ ಇದರಿಂದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಎಂದು ಜೋಯೆಲ್ ಮೆಂಡೋನ್ಸಾ ಹೇಳಿದರೆ, ಉಜಿರೆ ಕೆಎಸ್ಸಾರ್ಟಿಸಿಗೆ ಮಂಜೂರಾದ ಜಾಗ ರದ್ದಾಗಿದೆ. ಅದನ್ನು ಉಜಿರೆ ಪಂಚಾಯತ್ ವ್ಯಾಪ್ತಿಯಲ್ಲಿನ ಮನೆ ರಹಿತರಿಗೆ ನೀಡಬಹುದಲ್ಲ ಎಂದು ಶಶಿಧರ್ ಪ್ರಶ್ನಿಸಿದರು.ಈ ಬಗ್ಗೆ ಶಾಸಕರು ಸಂಬಂಧಪಟ್ಟವರಿಗೆ ಫೋನಾಯಿಸಿ ಮಾಹಿತಿ ಪಡೆದುಕೊಂಡರು.

ತಾಲೂಕಿನಲ್ಲಿ ಲೋಕೋಪಯೋಗಿ ಹಾಗೂ ಜಿ.ಪಂ.ವ್ಯಾಪ್ತಿಯಲ್ಲಿ ಬರುವ ರಸ್ತೆಗಳ ಚರಂಡಿಗಳ ಸ್ವಚ್ಛತೆ ಮಾಡದಿರುವುದರಿಂದ ನಾನಾ ರೋಗಕ್ಕೆ ಕಾರಣವಾಗುತ್ತಿರುವ ಬಗ್ಗೆ ಸಮುದಾಯ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಸಮಯಕ್ಕೆ ಸರಿಯಾಗಿ ಆಗದಿರುವ ಬಗ್ಗೆ ಗಮನ ಸೆಳೆಯಲಾಯಿತು. ನಿಯೋಜಿತ ವೈದ್ಯರು ಸಮಯಕ್ಕೆ ಸರಿಯಾಗಿ ಆಸ್ಪತ್ರೆಯಲ್ಲಿರಬೇಕು ಎಂದು ಶಾಸಕರು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರಲ್ಲದೆ ಆಯಾ ಇಲಾಖೆಯ ಆಸ್ತಿಗಳಲ್ಲಿನ ಸ್ವಚ್ಛತೆಯನ್ನು ಇಲಾಖಾ ಸಿಬ್ಬಂದಿ ನೋಡಿಕೊಳ್ಳುವಂತೆ ಹೇಳಿದರು.

ಈ ಬಾರಿ ಮೆಸ್ಕಾಂಗೆ ಕಂಡು ಕೇಳರಿಯದಷ್ಟು ನಷ್ಟವುಂಟಾಗಿದೆ. ಆದರೂ ವಿದ್ಯುತ್ ಸಂಪರ್ಕಗಳನ್ನು ಸರಿದಾರಿಗೆ ತಂದಿದ್ದೇವೆ ಎಂದು ಮೆಸ್ಕಾಂ ಅಧಿಕಾರಿ ತಿಳಿಸಿದರು. ಕುಕ್ಕಳ ಬಸವನಗುಡಿ ಬಳಿ ಪೂಂಜಾಲಕಟ್ಟೆ ಪೊಲೀಸ್ ವಸತಿ ಗೃಹಕ್ಕೆ ಜಾಗ ಕಾದಿರಿಸಲಾಗಿದೆ. ಆದರೆ ಕಾರ್ಯ ಇನ್ನೂ ಆಗಿಲ್ಲದಿರುವ ಬಗ್ಗೆ ಜೊಯೆಲ್ ಮೆಂಡೋನ್ಸಾ ತಿಳಿಸಿದರು.ಶಿಕ್ಷಣ ಕ್ಷೇತ್ರಕ್ಕೆ ಚರ್ಚೆ ಹೊರಳಿದಾಗ ಶಿಕ್ಷಣ ಹಕ್ಕು ಕಾಯ್ದೆಯಿಂದ ಹಲವಾರು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಇನ್ನೂ ಅಂತರ್ಜಾಲದಲ್ಲಿ ಹೆಸರು ಬಂದಿಲ್ಲ. ಇದರಿಂದ ವಿದ್ಯಾರ್ಥಿಗಳು ಚಿಂತಿತರಾಗಿದ್ದಾರೆ ಎಂದು ಸದಸ್ಯರು ಹೇಳಿದಾಗ ಸಂಬಂಧಪಟ್ಟ ಅಧಿಕಾರಿಗಳು 250 ವಿದ್ಯಾರ್ಥಿಗಳು ಆರ್‌ಟಿಇಗೆ ಅರ್ಜಿ ಹಾಕಿದ್ದಾರೆ. ಇದೀಗ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಇನ್ನು ಮುಂದಕ್ಕೂ ಎರಡನೆ, ಮೂರನೆ ಪಟ್ಟಿ ಆನ್‌ಲೈನ್‌ನಲ್ಲಿ ಬಿಡುಗಡೆಯಾಗಲಿದೆ ಎಂದರು.

ಸದಸ್ಯರು ಸರಕಾರಿ ಶಾಲಾ, ಕಾಲೇಜುಗಳಲ್ಲಿ ಶೌಚಾಲಯಗಳ ಅವ್ಯವಸ್ಥೆಯ ಬಗ್ಗೆ ತಿಳಿಸಿದಾಗ ಶಾಸಕರು ಸದಸ್ಯರ ವ್ಯಾಪ್ತಿಯಲ್ಲಿ ಬರುವಂತಹ ಶೌಚಾಲಯಗಳ ಬಗ್ಗೆ ಪಟ್ಟಿ ನೀಡಿ ಕೂಡಲೇಕ್ರಮ ಕೈಗೊಳ್ಳುತ್ತೇನೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷ ವೇದಾವತಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸುಧೀರ್ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ನರೇಂದ್ರ, ವಿವಿಧ ಇಲಾಖಾಧಿಕಾರಿಗಳು, ಜಿ.ಪಂ.ಸದಸ್ಯರು, ತಾ.ಪಂ.ಸದಸ್ಯರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X