Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ನೇಪಾಳದ ಈ ವಿದ್ಯಾರ್ಥಿಗೆ ಕೇವಲ 68 ವರ್ಷ!

ನೇಪಾಳದ ಈ ವಿದ್ಯಾರ್ಥಿಗೆ ಕೇವಲ 68 ವರ್ಷ!

ವಾರ್ತಾಭಾರತಿವಾರ್ತಾಭಾರತಿ15 Jun 2016 5:39 PM IST
share
ನೇಪಾಳದ ಈ ವಿದ್ಯಾರ್ಥಿಗೆ ಕೇವಲ 68 ವರ್ಷ!

ಕಠ್ಮಂಡು: ಬಿಳಿಗಡ್ಡವನ್ನು ಬ್ರಷ್ ಮಾಡಿಕೊಂಡು, ಯೂನಿಫಾರ್ಮ್‌ ಹಾಕಿಕೊಂಡು, ವಾಕಿಂಗ್ ಸ್ಟಿಕ್ ಸಹಾಯದಿಂದ ಒಂದು ಗಂಟೆ ಪ್ರಯಾಸದ ಪ್ರಯಾಣ ಮುಗಿಸಿಕೊಂಡು ಬರುವುದು ಈ ನೇಪಾಳಿ ’ಯುವಕನ’ ದಿನಚರಿ.

ಈ ಕಲಿಕಾಕಾಂಕ್ಷಿ ದುರ್ಗಾ ಕಮಿ ಅವರಿಗೆ ಇನ್ನೂ ಕೇವಲ 68ರ ವಯಸ್ಸು. ಕಿತ್ತು ತಿನ್ನುವ ಬಡತನದ ಕಾರಣದಿಂದ, ಶಿಕ್ಷಣ ಪೂರೈಸಿ ಶಿಕ್ಷಕನಾಗಬೇಕು ಎಂಬ ಬಯಕೆ ಕನಸಾಗಿಯೇ ಉಳಿಯಿತು. ಇದೀಗ ಆರು ಮಕ್ಕಳ ತಂದೆ ಹಾಗೂ ಎಂಟು ಮಕ್ಕಳ ತಾತ, ವಾರದ ಆರು ದಿನವೂ ನಿಯತ್ತಿನಿಂದ ಶಾಲೆಗೆ ತೆರಳುತ್ತಾರೆ. ಪತ್ನಿಯ ಸಾವಿನ ನೋವು ಮರೆಯಲು ಕೂಡಾ ಇವರಿಗೆ ಶಿಕ್ಷಣ ಸಂಗಾತಿಯಾಗಿದೆ.

ಕಾಲಭೈರವ ಹೈಯರ್ ಸೆಕೆಂಡರಿ ಶಾಲೆಯಲ್ಲಿ 200 ಮಕ್ಕಳ ಒಡನಾಟ ಇವರಿಗೆ ಒಂಟಿ ಕೋಣೆಯ ಮನೆಗಿಂತ ಹೆಚ್ಚು ಆಪ್ಯಾಯಮಾನ. ಮಳೆ ಬಂದರೆ ಸೋರುವ ಹಾಗೂ ಪದೇ ಪದೇ ವಿದ್ಯುತ್ ಕಡಿತದ ಸಮಸ್ಯೆ ಇರುವ ಮನೆಗಿಂತ ಈ ಚಿರಯುವಕನಿಗೆ ಶಾಲೆಯೇ ಇಷ್ಟ. ನೇಪಾಳದ ರಾಜಧಾನಿ ಕಠ್ಮಂಡುವಿನಿಂದ 250 ಕಿಲೋಮೀಟರ್ ದೂರದ ಸ್ಯಾಂಜಿಯಾ ಜಿಲ್ಲೆಯಲ್ಲಿ ದುರ್ಗಾ ವಾಸವಾಗಿದ್ದಾರೆ.

"ನನ್ನ ದುಃಖ ಮರೆಯಲು ನಾನು ಶಾಲೆಗೆ ಬರುತ್ತೇನೆ" ಎನ್ನುವ ಕಮಿಗೆ ದೇಶದ ಅತ್ಯಂತ ಹಿರಿಯ ವಿದ್ಯಾರ್ಥಿ ಎಂಬ ಹೆಗ್ಗಳಿಕೆ. 14-15ರ ಮಕ್ಕಳ ಜತೆಗೆ ತರಗತಿಯಲ್ಲಿ ಪಾಠ ಕೇಳುತ್ತಾರೆ. ಬೆಟ್ಟದ ಮೇಲಿನ ಮನೆಯನ್ನು ಬಿಟ್ಟು ಎಲ್ಲ ಮಕ್ಕಳೂ ಬೇರೆಡೆ ತೆರಳಿದ ಬಳಿಕ ಮೊದಲು ಕಹರೇ ಪ್ರಾಥಮಿಕ ಶಾಲೆಗೆ ಹೋಗಿ ಓದು- ಬರಹ ಕಲಿತರು. ಹನ್ನೊಂದು ವರ್ಷಗಳಲ್ಲಿ 5ನೇ ತರಗತಿ ಉತ್ತೀರ್ಣರಾದರು. ಇದು ಏಳೆಂಟು ವರ್ಷ ಹಿಂದಿನ ಮಾತು.

ಕಾಲಭೈರವೇಶ್ವರ ಶಾಲೆಯ ಶಿಕ್ಷಕ ಡಿ.ಆರ್.ಕೋಯಿರಾಲಾ, ಕಮಿಯನ್ನು ತಮ್ಮ ಶಾಲೆಗೆ ಕರೆದರು. ಪಸ್ತಕ ಹಾಗೂ ಯೂನಿಫಾರ್ಮ್ ತೆಗೆಸಿಕೊಟ್ಟರು. "ನನ್ನ ತಂದೆಯ ವಯಸ್ಸಿನವರಿಗೆ ಪಾಠ ಮಾಡುವುದು ವಿಶಿಷ್ಟ ಅನುಭವ" ಎಂದು ಕೋಯಿರಾಲಾ ಹೇಳುತ್ತಾರೆ. ಶಾಲಾ ವೇಳೆಯಲ್ಲಿ ಆಹಾರದ ವ್ಯವಸ್ಥೆ ಇಲ್ಲ. ಅಂದರೆ ಬೆಳಗ್ಗೆ ಅನ್ನ ಮತ್ತು ಹಸಿರು ತರಕಾರಿಯ ಗುಂಡ್ರುಕ್ ಸೇವಿಸಿ ಬಂದರೆ ರಾತ್ರಿವರೆಗೂ ಹಸಿವಿನಲ್ಲೇ ಕಳೆಯಬೇಕು. ಇದೀಗ 10ನೇ ತರಗತಿಯಲ್ಲಿರುವ ಸಹಪಾಠಿಗಳು ಇವರನ್ನು ತಂದೆ ಎಂದು ಕರೆಯುತ್ತಾರೆ. ಆದರೆ ಸಹಪಾಠಿಗಳ ಜತೆ ಇತರರಂತೆ ವಾಲಿಬಾಲ್ ಸೇರಿ ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಸಾಯುವವರೆಗೂ ಕಲಿಯುವ ಹಂಬಲ ಅವರದ್ದು. ಕಲಿಕೆಗೆ ವಯಸ್ಸು ಅಡ್ಡಿ ಎಂಬ ಮನೋಭಾವವನ್ನು ತೊಡೆದುಹಾಕುವುದು ಅವರ ಬಯಕೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X