5ರಲ್ಲಿ ಕೇವಲ 1 ಕಡತ ಪತ್ತೆ
ಇಶ್ರತ್ ಜಹಾನ್ ಪ್ರಕರಣ
ಹೊಸದಿಲ್ಲಿ, ಜೂ.15: ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಕೇಂದ್ರ ಗೃಹ ಸಚಿವರಾಗಿದ್ದ ಕಾಲದಲ್ಲಿ 2009ರ ಸೆಪ್ಟಂಬರ್ನಲ್ಲಿ, ಇಶ್ರತ್ ಜಹಾನ್ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ತಿಳಿದೋ ತಿಳಿಯದೆಯೋ ತೆಗೆಯಲಾಗಿತ್ತು ಅಥವಾ ಬೇರೆ ಜಾಗದಲ್ಲಿ ಇರಿಸಲಾಗಿತ್ತೆಂದು ಏಕ ಸದಸ್ಯ ವಿಚಾರಣಾ ಆಯೋಗವು ತೀರ್ಮಾನಕ್ಕೆ ಬಂದಿದೆ.
ಗೃಹ ನಿರ್ದೇಶನಾಲಯದಿಂದ ಕಾಣೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ 5 ಕಡತಗಳಲ್ಲಿ ಕೇವಲ ಒಂದು ಕಡತ ಪತ್ತೆಯಾಗಿದೆಯೆಂದು ಆಯೋಗದ ಮುಖ್ಯಸ್ಥ, ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಬಿ.ಕೆ.ಪ್ರಸಾದ್, ಕೇಮದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರಿಷಿಯವರಿಗೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ತಿಳಿಸಿದ್ದಾರೆ.
ಕಡತಗಳನ್ನು ತಿಳಿದೋ ತಿಳಿಯದೆಯೋ ತೆಗೆದಿರುವುದು ಅಥವಾ ಜಾಗ ಬದಲಿಸಿರುವುದು ಸ್ಪಷ್ಟವೆಂದು ಆಯೋಗ ತೀರ್ಮಾನಿಸಿದೆ.
ಆದಾಗ್ಯೂ, ಅದು ಚಿದಂಬರಂ ಅಥವಾ ಯುಪಿಎ ಸರಕಾರದ ಯಾವನೇ ವ್ಯಕ್ತಿಯನ್ನು ಉಲ್ಲೇಖಿಸಿಲ್ಲ.
Next Story