ಕಳ್ಳಭಟ್ಟಿ ಸಾರಾಯಿ ವಶಕ್ಕೆ: ಒಬ್ಬನ ಬಂಧನ
ಮಂಜೇಶ್ವರ, ಜೂ.16: ಅಡೂರು ಅರಣ್ಯದಲ್ಲಿ ಅಬಕಾರಿ ಹಾಗೂ ಅರಣ್ಯ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 35 ಲೀಟರ್ ಕಳ್ಳ ಭಟ್ಟಿ ಸಾರಾಯಿ ವಶಪಡಿಸಿಕೊಂಡು ದೇಲಂಪಾಡಿ ಮಲ್ಲಾವರ ನಿವಾಸಿ ಅನಿಲ್ ಕುಮಾರ್(36)ನನ್ನು ಬಂಧಿಸಲಾಗಿದೆ. ಜೊತೆಗಿದ್ದ ಕರಿವೇಡಗಂ ನಿವಾಸಿ ಕೃಷ್ಣ ನಾಯ್ಕ ಪರಾರಿಯಾಗಿದ್ದಾನೆ. ಆತನ ವಿರುದ್ಧ ದೂರು ದಾಖಲಿಸಲಾಗಿದೆ.
Next Story





