Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಓರ್ಲ್ಯಾಂಡೊ ದುರಂತ ತಂದೊಡ್ಡಿದ...

ಓರ್ಲ್ಯಾಂಡೊ ದುರಂತ ತಂದೊಡ್ಡಿದ ಅನಪೇಕ್ಷಿತ ಸವಾಲುಗಳು

ವಾರ್ತಾಭಾರತಿವಾರ್ತಾಭಾರತಿ17 Jun 2016 10:44 PM IST
share
ಓರ್ಲ್ಯಾಂಡೊ ದುರಂತ ತಂದೊಡ್ಡಿದ ಅನಪೇಕ್ಷಿತ ಸವಾಲುಗಳು

ಶತಮಾನದ ಹೀರೋ ಮುಹಮ್ಮದ್ ಅಲಿ ಅವರ ಮರಣ, ಅಂತ್ಯ ಸಂಸ್ಕಾರ ಮತ್ತು ಈ ಮಧ್ಯೆ ನಡೆದ ಚರ್ಚೆ, ಸಂವಾದಗಳು, ಸಮಾರಂಭಗಳು ಹಾಗೂ ಸಾಂಸ್ಕೃತಿಕ ವಿನಿಮಯಗಳು ಅಮೆರಿಕದ ಮುಸ್ಲಿಮ್ ಸಮುದಾಯದ ಆತ್ಮ ಸಮ್ಮಾನವನ್ನು ಹಾಗೂ ಅವರ ಕುರಿತಾದ ಸಾರ್ವಜನಿಕ ಪರಿಕಲ್ಪನೆಯನ್ನು ಗಣನೀಯವಾಗಿ ಸುಧಾರಿಸಿ ಬಿಟ್ಟಿದ್ದವು. ಆದರೆ ಈ ಕುರಿತು ಸಂಭ್ರಮಿಸುವುದಕ್ಕೆ ಮಾತ್ರ ಅವರಿಗೆ ಅವಕಾಶವೇ ಸಿಗಲಿಲ್ಲ. ಏಕೆಂದರೆ ಅಷ್ಟರಲ್ಲೇ ಓರ್ಲ್ಯಾಂಡೊ ನಲ್ಲಿ ಸಲಿಂಗಕಾಮಿಗಳ ಅಡ್ಡೆಯಲ್ಲಿ ಒಂದು ಕ್ರೂರ ಸಾಮೂಹಿಕ ಹತ್ಯಾಕಾಂಡ ನಡೆಯಿತು. 49 ಮಂದಿ ಹತರಾಗಿದ್ದರು. 53 ಮಂದಿ ಗಾಯಗೊಂಡಿದ್ದರು. ಆರೋಪಿಯಾಗಿದ್ದವನು ಒಮರ್ ಮತೀನ್ ಎಂಬ ಮುಸ್ಲಿಮ್ ಹೆಸರಿನವನು ಎಂಬ ಒಂದೇ ಕಾರಣಕ್ಕಾಗಿ ಅವನ ಅಪರಾಧವನ್ನು ಸಂಪೂರ್ಣ ಮುಸ್ಲಿಮ್ ಸಮಾಜ ಮತ್ತು ಇಸ್ಲಾಮ್ ಧರ್ಮದ ಕೊರಳಿಗೆ ಕಟ್ಟುವ ವ್ಯವಸ್ಥಿತ ಶ್ರಮ ಆರಂಭವಾಯಿತು. ಮಾಧ್ಯಮಗಳು ಹಾಗೂ ಟ್ರಂಪ್ ತಳಿಯ ಫುಡಾರಿಗಳ ಆಶೀರ್ವಾದದಿಂದ ಈ ಶ್ರಮ ಸಾಕಷ್ಟು ಯಶಸ್ಸನ್ನೂ ಪಡೆಯಿತು. ಮತೀನ್‌ನ ಗುಂಡಿಗೆ ಬಲಿಯಾದವರಲ್ಲಿ ಮುಸ್ಲಿಮರಿದ್ದರು ಮತ್ತು ಆ ಸನ್ನಿವೇಶದಲ್ಲಿ ಸಿಕ್ಕಿ ಬಿದ್ದಿದ್ದ ಅನೇಕ ಮಂದಿಯನ್ನು ರಕ್ಷಿಸಿದ ಸಾಹಸಿಗಳಲ್ಲಿ ಮುಸ್ಲಿಮರು ಇದ್ದರು ಎಂಬಿತ್ಯಾದಿ ಅಂಶಗಳು ಗದ್ದಲದಲ್ಲಿ ಕರಗಿ ಹೋದವು. ಎಂದಿನಂತೆ ಅಪರಾಧಿ ಕಟೆಕಟೆಯಲ್ಲಿ ನಿಲ್ಲಿಸಲ್ಪಟ್ಟ ಮುಸ್ಲಿಮ್ ಸಮಾಜದ ಪರವಾಗಿ ಸುಮಾರು ಇನ್ನೂರಕ್ಕೂ ಅಧಿಕ, ಸಂಘಟನೆಗಳ ಪದಾಧಿಕಾರಿಗಳು, ವಿದ್ವಾಂಸರು, ಸಾಹಿತಿಗಳು ಮತ್ತು ಕಲಾವಿದರು ಒಂದು ಸವಿಸ್ತಾರ ಹೇಳಿಕೆ ಹೊರಡಿಸಿ ಪ್ರಸ್ತುತ ಕೃತ್ಯವನ್ನು ಖಂಡಿಸಿ ಇಂತಹ ಕೃತ್ಯಗಳನ್ನು ಯಾವುದೇ ಧರ್ಮ ಅಥವಾ ಸಮಾಜದ ಜೊತೆ ಜೋಡಿಸಬಾರದು ಎಂದು ಮನವಿ ಮಾಡಿದರು. ಪ್ರಸ್ತುತ ಹೇಳಿಕೆಗೆ ಸಹಿ ಹಾಕಿದವರಲ್ಲಿ, ಪ್ರಖ್ಯಾತ ಅಮೆರಿಕನ್ ಸಂಜಾತ ಮುಸ್ಲಿಮ್ ವಿದ್ವಾಂಸ ಶೇಖ್ ಹಂಝಾ ಯೂಸುಫ್ ಕೂಡ ಒಬ್ಬರು. ತಮ್ಮ ವಿದ್ವತ್ತು, ಮಾತುಗಾರಿಕೆ, ಸಂತುಲಿತ ವಿಚಾರ ಧಾರೆ ಮುಂತಾದ ಹಲವು ವೈಶಿಷ್ಟ್ಯಗಳಿಗಾಗಿ ಗುರುತಿಸಲ್ಪಡುವ ಶೇಖ್ ಹಂಝಾರನ್ನು ಬುಧವಾರ ವಾರ್ತಾ ಸಂಸ್ಥೆ ಸಿಎನ್ನೆನ್‌ನವರು ಸಂದರ್ಶಿಸಿ ಕೆಲವು ಪ್ರಮುಖ ಪ್ರಶ್ನೆಗಳನ್ನು ಕೇಳಿದರು. ಸಂದರ್ಶನದ ಆಯ್ದ ಭಾಗ ಇಲ್ಲಿದೆ:

ಪ್ರಶ್ನೆ: ಈ ಮೊದಲು ಅನೇಕ ಬಾರಿ ಮುಸ್ಲಿಮ್ ಸಮಾಜದವರು ಭಯೋತ್ಪಾದನೆಯನ್ನು ಖಂಡಿಸಿ ಹೇಳಿಕೆ ನೀಡಿದ್ದಾರೆ. ಹೀಗಿರುತ್ತಾ ಇನ್ನೊಂದು ಹೇಳಿಕೆಯ ಅಗತ್ಯ ಏನಿತ್ತು?

ಉತ್ತರ:ಮೊನ್ನೆ ನಡೆದಂತಹ ಘಟನೆಗಳು ನಡೆದಾಗಲೆಲ್ಲ ಮುಸ್ಲಿಮರು ಈ ಬಗೆಯ ಘಟನೆಗಳನ್ನು ಯಾಕೆ ಖಂಡಿಸುವುದಿಲ್ಲ ಎಂಬ ಪ್ರಶ್ನೆಯನ್ನು ಪದೇ ಪದೇ ಕೇಳಲಾಗುತ್ತದೆ. ನಿಜವಾಗಿ ಇತರರು ಏನು ಮಾಡುತ್ತಾರೆ ಎಂಬುದರ ಮೇಲೆ ನನಗೆ ಯಾವುದೇ ನಿಯಂತ್ರಣವಿಲ್ಲ. ಅವರು ನನ್ನನ್ನು ಅಥವಾ ನನ್ನ ಧರ್ಮವನ್ನು ಪ್ರತಿನಿಧಿಸುವುದಿಲ್ಲ. ಒಂದು ಸಣ್ಣ ಪಂಥಕ್ಕೆ ಸೇರಿದ್ದ ಡೇವಿಡ್ ಕುರೇಶ್‌ನ ಕೃತ್ಯಗಳನ್ನು ಯಾರೂ ಸೆವೆಂತ್ ಡೇ ಎಡ್ವೆಂಟಿಸ್ಟ್ ಪಂಗಡದ ಜೊತೆ ಗಂಟು ಹಾಕುವುದಿಲ್ಲ. ಹಾಗೆಯೇ ಮೇಯಿರ್ ಕಹಾನೆಯ ಅಪರಾಧಗಳನ್ನು ಯಾರೂ ಯಹೂದಿ ಸಮುದಾಯದ ಖಾತೆಗೆ ಸೇರಿಸುವುದಿಲ್ಲ. ಆದರೆ ಇಂತಹ (ಓರ್ಲ್ಯಾಂಡೊ) ದುರಂತಗಳು ನಡೆದಾಗ ಮಾತ್ರ ಸಂಪೂರ್ಣ ಇಸ್ಲಾಮ್ ಧರ್ಮದ ಮೇಲೆ ಕಳಂಕ ಹಚ್ಚಲಾಗುತ್ತದೆ. ನಾವು ಒಂದು ವಿಷ ಚಕ್ರದಲ್ಲಿ ಸಿಕ್ಕಿಕೊಂಡಿದ್ದೇವೆ. ಘಟನೆಗಳು, ಖಂಡನೆಗಳು, ಮತ್ತೆ ಘಟನೆಗಳು ಮತ್ತೆ ಖಂಡನೆಗಳು. ಇಷ್ಟಾಗಿಯೂ ಮತ್ತೆ ಜನರು, ಇಂತಹದನ್ನೆಲ್ಲಾ ಮುಸ್ಲಿಮರು ಯಾಕೆ ಖಂಡಿಸುವುದಿಲ್ಲ? ಎಂದು ಕೇಳುತ್ತಲೇ ಇರುತ್ತಾರೆ.

ಪ್ರಶ್ನೆ; ಮೊನ್ನೆ ಸೋಮವಾರ ಇಸ್ಲಾಮ್ ಧರ್ಮ ಮತ್ತು ಭಯೋತ್ಪಾದನೆಯ ಕುರಿತು ಡೊನಾಲ್ಡ್ ಟ್ರಂಪ್ ಮಾಡಿದ ಭಾಷಣದ ಬಗ್ಗೆ ನೀವು ಏನಂತೀರಿ?

ಉತ್ತರ:ಆತ ಬಹಳ ಅಪಾಯಕಾರಿಯಾದ ಆಟವೊಂದನ್ನು ಆಡುತ್ತಿದ್ದಾರೆ. ಆ ಬಗೆಯ ಹುಚ್ಚು ಮಾತುಗಳಿಂದ ಹಲವು ಜೀವಗಳನ್ನು ಅಪಾಯಕ್ಕೆ ಒಡ್ಡಿದಂತಾಗುತ್ತದೆ. ನಾವೀಗ ಅತ್ಯಂತ ಸ್ಫೋಟಕ ಸನ್ನಿವೇಶವೊಂದರಲ್ಲಿದ್ದೇವೆ. ಸಾಮಾಜಿಕ ಮಾಧ್ಯಮಗಳು ನಮಗೆ ಸಂಪೂರ್ಣ ಅರ್ಥವಾಗದಂತಹ, ಈ ವರೆಗೆ ಕಂಡರಿಯದ ಹೊಸ ಅಂಶವೊಂದನ್ನು ಇದಕ್ಕೆ ಸೇರಿಸಿವೆ.

ಪ್ರಶ್ನೆ: ಓರ್ಲ್ಯಾಂಡೊ ತರಹದ ದುರಂತಗಳನ್ನು ತೀವ್ರವಾದಿ ಇಸ್ಲಾಮ್‌ಗೆ ಸಂಬಂಧಿಸಿದ ಘಟನೆ ಎಂದು ಹೆಸರಿಸಬೇಕೆ, ಬೇಡವೇ ಎಂಬ ಕುರಿತು ಟ್ರಂಪ್ ಮತ್ತು ಒಬಾಮ ನಡುವೆ ವಾಗ್ವಾದ ನಡೆಯುತ್ತಿದೆಯಲ್ಲಾ?

ಉತ್ತರ: ಒಬ್ಬ ವ್ಯಕ್ತಿ ನಮ್ಮ ಆಂತರಿಕ ಕಂದಾಯ ವಿಭಾಗ (ಐಆರ್‌ಎಸ್) ವಿರುದ್ಧ ರಾಜಕೀಯ ಹೇಳಿಕೆಯೊಂದನ್ನು ಬರೆದು ಅದರ ಕಚೇರಿಯೊಳಕ್ಕೆ ವಿಮಾನ ಹಾರಿಸಿದಾಗ ಅದೊಂದು ಸ್ಪಷ್ಟ ರಾಜಕೀಯ ಕೃತ್ಯವಾಗಿದ್ದರೂ ಆ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ಸಾರಲಾಯಿತು. ಇಲ್ಲಿ ಒಂದು ದ್ವಂದ್ವ ಎದ್ದು ಕಾಣುತ್ತಿದೆ. ಒಬ್ಬ ವ್ಯಕ್ತಿಯ ಹೆಸರು ಮುಹಮ್ಮದ್ ಎಂದಾಗಿದ್ದರೆ ಅವನ ಕೃತ್ಯವು ತನ್ನಿಂತಾನೆ ಭಯೋತ್ಪಾದನೆ ಎನಿಸಿ ಕೊಳ್ಳುತ್ತದೆ. ಈ ವ್ಯಕ್ತಿ (ಒಮರ್ ಮತೀನ್) ಒಬ್ಬ ಮುಸ್ಲಿಮ್ ತೀವ್ರವಾದಿಯಾಗಿರಲಿಲ್ಲ. ಇಸ್ಲಾಮ್ ಧರ್ಮದಲ್ಲಿ ಮದ್ಯಪಾನ ಮಾಡುವುದು, ಸಲಿಂಗ ಕಾಮಿಗಳ ಬಾರ್‌ಗೆ ಹೋಗುವುದು ಮಾತ್ರವಲ್ಲ ಯಾವುದೇ ತರಹದ ಬಾರ್‌ಗೆ ಹೋಗುವುದು ನಿಷಿದ್ಧವಾಗಿದೆ. ಆತ ಕೇವಲ ಹೆಸರಿಗೆ ಮಾತ್ರ ಒಬ್ಬ ಮುಸ್ಲಿಮನಾಗಿದ್ದ. ಆತ ಎಂದಾದರೂ ಮಸೀದಿಗೆ ಹೋಗಿರ ಬಹುದು ಆದರೆ ಆತನಲ್ಲಿ ಯಾವುದೇ ಮಟ್ಟದ ಧಾರ್ಮಿಕತೆ ಇತ್ತು ಎಂದು ನನಗೆ ಅನಿಸುವುದಿಲ್ಲ.

ಪ್ರಶ್ನೆ: ಪ್ರಧಾನ ಧಾರೆಯ ಮುಸ್ಲಿಮರು ತಮ್ಮನ್ನು ಅಪರಾಧಿಗಳಾಗಿ ಕಾಣುತ್ತಿದ್ದಾರೆ ಎಂದು ಭಾವಿಸುತ್ತಿರಬಹುದಾದ ಸಲಿಂಗ ಕಾಮಿಗಳು ಹಾಗೂ ಮುಸ್ಲಿಮ್ ಸಲಿಂಗ ಕಾಮಿಗಳ ಸ್ಥಿತಿ ಏನು?

ಉತ್ತರ: ನಮ್ಮ ಓರ್ಲ್ಯಾಂಡೋ ಹೇಳಿಕೆಯಲ್ಲಿ ನಾವು ಸ್ಪಷ್ಟ ಪಡಿಸಿರುವಂತೆ ನಾವು ಅಬ್ರಹಾಮಿಕ್ ನೈತಿಕ ಮೌಲ್ಯಗಳಿಗೆ ಬದ್ಧ್ಧರಾಗಿದ್ದೇವೆ. ಆದರೆ ಅದನ್ನು ಬಲವಂತವಾಗಿ ಯಾರ ಮೇಲೂ ಹೇರ ಬಾರದು. ಅಮೆರಿಕ ಎಂಬುದು ಆಯ್ಕೆಯ ನಾಡು. ಅದು ವಿವಿಧ ಬಗೆಯ ನಿರ್ದಿಷ್ಟ ಜೀವನ ಶೈಲಿಗಳನ್ನು ಅನುಸರಿಸುವ ವರಿಗೆ ಅನ್ವಯವಾಗುತ್ತದೆ. ಧರ್ಮದ ವಿಷಯದಲ್ಲಿ ಯಾವುದೇ ಬಲವಂತಕ್ಕೆ ಖಂಡಿತ ಅವಕಾಶವಿಲ್ಲ ಎಂದು ಕುರ್‌ಆನ್‌ನಲ್ಲಿ ಸಾರಲಾಗಿದೆ.

ಪ್ರಶ್ನೆ: ಹಾಗಾದರೆ ಸಲಿಂಗಕಾಮಿ ಮುಸ್ಲಿಮರ ವಿಷಯ?
ಉತ್ತರ: ನೋಡಿ, ಪೋಪರು ಹೊರಡಿಸುವ ತರದ ಫರ್ಮಾನು ಗಳನ್ನು ಹೊರಡಿಸುವ ಅಧಿಕಾರ ನನಗಿಲ್ಲ. ನಮ್ಮ ಪರಂಪರೆಯಲ್ಲಿ ಅಂತಹ ಒಂದು ಸಾಂಸ್ಥಿಕ ಏರ್ಪಾಡು ಕೂಡಾ ಇಲ್ಲ. ಆದರೆ ನಾನು ನಮ್ಮ ಪರಂಪರೆಯ ಕುರಿತು ಅಧ್ಯಯನ ನಡೆಸಿದ್ದೇನೆ. ಮುಸ್ಲಿಮ್ ಸಮಾಜದ ಹೆಚ್ಚಿನವರು ಒಂದು ಸಕ್ರಿಯ ಸಲಿಂಗ ಕಾಮಿ ಜೀವನ ಶೈಲಿಗೆ ಮಾನ್ಯತೆ ನೀಡುವ ಸಾಧ್ಯತೆ ಎಂದೆಂದಿಗೂ ಇಲ್ಲ. ನನಗೆ ಅಂತಹ ಸಾಧ್ಯತೆ ಎಲ್ಲೂ ಕಾಣಿಸುವುದಿಲ್ಲ. ಆದರೆ ಅದೇ ವೇಳೆ ವ್ಯಕ್ತಿಗಳು ಕಾನೂನು ನಿಯಮಗಳನ್ನು ಸ್ವತಹ ಕೈಗೆತ್ತಿಕೊಂಡು ಧರ್ಮದ ಕುರಿತಾದ ತಮ್ಮ ದೃಷ್ಟಿ ಕೋನವನ್ನು ಇನ್ನೊಬ್ಬರ ಮೇಲೆ ಹೇರಲು ಹೊರಡುವುದನ್ನು ಸಮರ್ಥಿಸುವ ಅಂಶವೂ ನಮ್ಮ ಪರಂಪರೆಯಲ್ಲಿಲ್ಲ.

ಪ್ರಶ್ನೆ; ಸಲಿಂಗ ಕಾಮದ ಕುರಿತಾಗಿರುವ ಇಸ್ಲಾಮ್ ಧರ್ಮದ ನಿಯಮಗಳು ಬದಲಾಗಲು ಸಾಧ್ಯವಿಲ್ಲವೇ? ಸಾಕ್ಷಾತ್ ದೇವ ವಾಕ್ಯ ಎಂದು ನಂಬಲಾಗಿರುವ ಕುರ್‌ಆನ್ ಅದನ್ನು ಖಂಡಿಸುತ್ತದೆ ಎಂಬುದು ಇದಕ್ಕೆ ಕಾರಣವೇ?

ಉತ್ತರ: ಕುರ್‌ಆನ್ ಅಂತೂ ಈ ಕೃತ್ಯವನ್ನು ಬಹಳಷ್ಟು ಸ್ಪಷ್ಟವಾಗಿ ಖಂಡಿಸಿದೆ. ಹಾಗೆಯೇ ನಮ್ಮ ಕಾನೂನು ವ್ಯವಸ್ಥೆಯಲ್ಲಿ ಇದನ್ನು ಒಂದು ಅಕ್ರಮ ಚಟುವಟಿಕೆ ಎಂದು ಪರಿಗಣಿಸಿರುವ ಒಂದು ದೀರ್ಘ ಪರಂಪರೆಯೇ ಇದೆ. ಅದೇ ವೇಳೆ ಈ ತರಹದ ಒಲವು ಇರುವವರು ನೇರವಾಗಿ ಸಲಿಂಗ ಕಾಮ ಕ್ರಿಯೆಯಲ್ಲಿ ತೊಡಗುವುದನ್ನು ತಪ್ಪಿಸಲು ಅನುಸರಿಸ ಬಹುದಾದ ಪರ್ಯಾಯ ಉಪಾಯಗಳ ಕುರಿತು ಫತ್ವಾಗಳಿವೆ. ಕೆಲವರ ಮಟ್ಟಿಗೆ ಇದೊಂದು ಪ್ರಕೃತಿ ದತ್ತ ಅಸಹಾಯಕತೆಯಾಗಿದೆ ಎಂಬ ಕುರಿತಂತೆ ಜಾಗೃತಿ ಬೆಳೆಯುತ್ತಿದೆ. ಈ ಸಂಕಟ ಅನುಭವಿಸುತ್ತಿರುವವರ ಕುರಿತು ನನಗೆ ಖಂಡಿತ ಸಹಾನುಭೂತಿ ಇದೆ. ನಾನು ಈ ತರಹದ ಸಂಕಟದಲ್ಲಿ ಸಿಕ್ಕಿರುವ ಯುವಕರ ಜೊತೆ ಮಾತನಾಡಿದ್ದೇನೆ. ಆದರೆ ನನಗೆ ಅನಿಸುವಂತೆ ಅವರಿಗೆ ಅಗತ್ಯವಿರುವುದು ನಮ್ಮ ಸಹಾನುಭೂತಿಯಲ್ಲ. ಅವರ ಜೀವನ ಶೈಲಿಯನ್ನು ನಾವು ಪೂರ್ಣ ಪ್ರಮಾಣದಲ್ಲಿ ಅಂಗೀಕರಿಸಬೇಕು ಎಂಬುದು ಅವರ ಬೇಡಿಕೆಯಾಗಿದೆ. ಆದರೆ ಅದನ್ನು ಅಂಗೀಕರಿಸಲು ನನ್ನ ಧರ್ಮವು ಖಂಡಿತ ನನಗೆ ಅನುಮತಿ ನೀಡುವುದಿಲ್ಲ. ಹಾಗೆಂದು, ನಾನು ನನ್ನ ನಂಬಿಕೆಯನ್ನು ಅವರ ಮೇಲೆ ಹೇರುವ ಹಾಗಿಲ್ಲ. ನಾನು ಖಂಡಿತ ಹಾಗೆ ಮಾಡಲಾರೆ.

ಪ್ರಶ್ನೆ: ಸಲಿಂಗ ಕಾಮಿಗಳು ನಿಮ್ಮೆಡನೆ ತಮ್ಮ ಸಂಕಟಗಳ ಕುರಿತು ಹೇಳಿ ಕೊಂಡಾಗ ನೀವು ಅವರಿಗೆ ಏನು ಹೇಳುತ್ತೀರಿ?

ಉತ್ತರ: ನಾನು ಹೇಳುವುದಿಷ್ಟೆ. ನಾನು ನಿಮ್ಮ ಅನುಭವವನ್ನು ಅಲ್ಲ ಗಳೆಯುವುದಿಲ್ಲ. ಆದರೆ ನೀವು ಧರ್ಮದಲ್ಲಿ ಅನುಮತಿಸಲಾಗಿರುವ ವ್ಯಾಪ್ತಿಯನ್ನು ಮೀರಿ ಯಾವುದೇ ಚಟುವಟಿಕೆಯಲ್ಲಿ ತೊಡಗಿ ಕೊಳ್ಳಬೇಡಿ. ಅವಿವಾಹಿತರಾಗಿ ಉಳಿಯುವುದಕ್ಕೆ ಅವಕಾಶವಿದೆ. ಸ್ವತಹ ನಾನು ಹಲವು ವರ್ಷಗಳ ಕಾಲ ಅವಿವಾಹಿತನಾಗಿದ್ದೆ. ಪ್ರಶ್ನೆ: ಇಸ್ಲಾಮಿ ಕರ್ಮ ಶಾಸ್ತ್ರದ ಕೆಲವು ಧಾರೆ ಗಳಲ್ಲಿ ಸಲಿಂಗ ಕಾಮಕ್ಕೆ ಬಹಳ ಉಗ್ರ ಶಿಕ್ಷೆ ವಿಧಿಸಲಾಗಿದೆಯಲ್ಲಾ? ಉತ್ತರ: ಇಸ್ಲಾಮಿ ಕರ್ಮ ಶಾಸ್ತ್ರದ ಗ್ರಂಥಗಳಲ್ಲಿ ವಸ್ತುತಃ ಸಲಿಂಗ ಕಾಮಕ್ಕೆಂದು ನಿರ್ದಿಷ್ಟ ಶಿಕ್ಷೆಯನ್ನು ವಿಧಿಸಲಾಗಿಲ್ಲ. ಸ್ತ್ರೀ ಪುರುಷರ ನಡುವಣ ವ್ಯಭಿಚಾರವೂ ಸೇರಿದಂತೆ ಅಕ್ರಮ ಲೈಂಗಿಕ ಸಂಬಂಧಕ್ಕೆ ಬಹಳ ಉಗ್ರ ಶಿಕ್ಷೆಯನ್ನು ವಿಧಿಸಲಾಗಿದೆ. ಆದರೆ ಈ ವಿಷಯದಲ್ಲಿ ಅಪರಾಧವನ್ನು ಸಾಬೀತು ಪಡಿಸುವುದು ಬಹುತೇಕ ಅಸಾಧ್ಯ. ಲೈಂಗಿಕ ಪ್ರವೇಶವನ್ನು ಕಣ್ಣಾರೆ ಕಂಡ ನಾಲ್ಕು ಮಂದಿ ಸಾಕ್ಷಿಗಳನ್ನು ತರಬೇಕಾಗುತ್ತದೆ. ಅದನ್ನು ಎಲ್ಲಿಂದ ತಾನೇ ತರಲು ಸಾಧ್ಯ?

ಪ್ರಶ್ನೆ: ಮುಹಮ್ಮದ್ ಅಲಿ ಅವರ ಅಂತ್ಯ ಸಂಸ್ಕಾರದ ಸಮಾರಂಭದಲ್ಲಿ ನೀವು ಭಾಗವಹಿಸಿದ್ದಿರಿ. ಮುಹಮ್ಮದ್ ಅಲಿ ಹೆಸರಲ್ಲಿ ನಿರ್ಮಾಣವಾಗಿದ್ದ ಸದಭಿಪ್ರಾಯವು ಇದೀಗ ಒರ್ಲ್ಯಾಂಡೋ ಘಟನೆಯಿಂದಾಗಿ ಮಾಸಿ ಹೋಗಿದೆ ಎಂದು ನಿಮಗೆ ಅನಿಸುತ್ತದೆಯೇ?
 ಉತ್ತರ: ಈ ವಿಷಯವನ್ನು ಡಾಕ್ಟರ್ ಷೇರ್ಮನ್ ಜಾಕ್ಸನ್ ಅವರು ಬಹಳ ಚೆನ್ನಾಗಿ ವಿವರಿಸಿದ್ದಾರೆ. ನೀವು ಏಕ ಕಾಲದಲ್ಲಿ ಮುಸ್ಲಿಮ್ ಮತ್ತು ಅಮೆರಿಕನ್ ಆಗಿರಲು ಸಾಧ್ಯವಿಲ್ಲ ಎಂಬ ಕಲ್ಪನೆಯನ್ನು ಮುಹಮ್ಮದ್ ಅಲಿ ಕೊನೆಗಾಣಿಸಿದರು. ತಮ್ಮ ಅಂತ್ಯ ಸಂಸ್ಕಾರದ ಕಾರ್ಯಕ್ರಮವನ್ನು ಸ್ವತಹ ಮುಹಮ್ಮದ್ ಅಲಿ ಅವರೇ ರೂಪಿಸಿದ್ದರು. ಅವರ ಯೋಜನೆಯಲ್ಲಿ ಬಹಳ ಪರಿಣಾಮಕಾರಿಯಾಗಿ ಅವರ ನಂಬಿಕೆಯನ್ನು ಎತ್ತಿ ಹಿಡಿಯುವ ಮತ್ತು ಅನ್ಯ ನಂಬಿಕೆಗಳ ಜನರನ್ನೂ ಸಹಭಾಗಿಗಳಾಗಿಸುವ ಅಂಶಗಳನ್ನು ಗಮನಿಸಿ ನಾನು ಪ್ರಭಾವಿತನಾಗಿದ್ದೆ. ಎರಡು ದಿನಗಳ ಮಟ್ಟಿಗೆ ಪ್ರೀತಿಯ ವಾತಾವರಣವು ಲೂಯಿವಿಲ್ಲಿಯನ್ನು ಸಂಪೂರ್ಣ ಆವರಿಸಿ ಕೊಂಡಿತ್ತು. ಪ್ರತಿಯೊಬ್ಬರೂ ನಗುನಗುತ್ತಾ, ಪರಸ್ಪರರನ್ನು ಅಪ್ಪಿ ಹಿಡಿಯುತ್ತಾ ಸ್ವಾಗತಿಸುತ್ತಿದ್ದರು. ಸಮುದಾಯದ ಪಾಲಿಗೆ ಇದೊಂದು ಪ್ರಮುಖ ಮುನ್ನಡೆಯಾಗಿತ್ತು. ಅಷ್ಟರಲ್ಲೇ ಈ ದುರಂತ ಸಂಭವಿಸಿತು. ನಾವು ಹರ್ಷದ ಲೋಕದಿಂದ ಮತ್ತೆ ಹತಾಶೆೆಯ ಲೋಕಕ್ಕೆ ಮರಳಿದಂತಾಯಿತು. ಒಂದು ಹೆಜ್ಜೆ ಮುಂದಕ್ಕೆ ಹೋಗಿ ಎರಡು ಹೆಜ್ಜೆ ಹಿನ್ನಡೆದಂತಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X