ಜೇಟ್ಲಿಗೆ ಕಪ್ಪುಹಣ ವಾಪಸು ತರುವುದು ಬೇಕಿಲ್ಲ: ಸುಬ್ರಮಣಿಯನ್ ಸ್ವಾಮಿ
ಮುಂಬೈ, ಜೂ.17: ವಿತ್ತ ಸಚಿವ ಅರುಣ್ ಜೇಟ್ಲಿಯವರಿಗೆ ಹಲವಾರು ಭಾರತೀಯರು ವಿದೇಶಗಳಲ್ಲಿ ಕೂಡಿ ಹಾಕಿರುವ ಕಪ್ಪು ಹಣ ವಾಪಸು ತರುವುದು ಬೇಕಿಲ್ಲ ಎಂದು ಹಿರಿಯ ಬಿಜೆಪಿ ನಾಯಕ ಹಾಗೂ ರಾಜ್ಯ ಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಗುರುವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸ್ವಾಮಿ ‘‘ಜೇಟ್ಲಿ ಖುದ್ದು ಓರ್ವ ವಕೀಲರಾಗಿದ್ದಾರೆ ಹಾಗೂ ಕಪ್ಪುಹಣವನ್ನು ವಿದೇಶಗಳಲ್ಲಿ ಶೇಖರಿಸಿರುವ ವ್ಯಕ್ತಿಗಳ ಪ್ರಭಾವ ಹಾಗೂ ಬಲದ ಬಗ್ಗೆ ಚೆನ್ನಾಗಿ ಅರಿವು ಹೊಂದಿದ್ದಾರೆ. ಇದೇ ಕಾರಣಕ್ಕೆ ಅವರು ಕಪ್ಪುಹಣ ಹಿಂದೆ ತರಲು ಮನಸ್ಸು ಮಾಡುತ್ತಿಲ್ಲ’’ಎಂದು ಆರೋಪಿಸಿದ್ದಾರೆ.
‘‘ನನಗೆ ಸರಕಾರದಲ್ಲಿ ಸ್ಥಾನ ದೊರೆತರೆ ಕಪ್ಪು ಹಣವನ್ನು ಒಂದೇ ವಾರದಲ್ಲಿ ವಾಪಸು ತರುತ್ತೇನೆ ಹಾಗೂ ಆದಾಯ ತೆರಿಗೆಯನ್ನು ಮೂರು ವರ್ಷಗಳೊಳಗಾಗಿ ರದ್ದು ಪಡಿಸುತ್ತೇನೆ. ಜನರು ಹೆಚ್ಚೆಚ್ಚು ಉಳಿತಾಯ ಮಾಡುವ ಸಲುವಾಗಿ ಆದಾಯ ತೆರಿಗೆಯನ್ನು ರದ್ದುಗೊಳಿಸಬೇಕು’’ಎಂದು ಸ್ವಾಮಿ ಹೇಳಿದರು.
Next Story