ಮಥುರಾ ಪಂಥಕ್ಕೆ ಹಣ, ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿದ್ದ ರಾಕೇಶ್ ಗುಪ್ತಾ ಬಂಧನ
ಬದೌನ್: ಮಥುರಾ ಪಂಥದ ಸ್ವಾಧೀನ ಭಾರತ ಸುಭಾಸ್ ಸೇನಾಗೆ ಹಣ ಹಾಗೂ ಶಸ್ತ್ರಾಸ್ತ್ರ ಪೂರೈಸುತ್ತಿದ್ದ ಆರೋಪದಲ್ಲಿ ಪಂಥದ ಮುಖಂಡ ರಾಮ್ ವೃಕ್ಷಯಾದವ್ ಅವರ ನಿಕಟವರ್ತಿ ರಾಕೇಶ್ ಗುಪ್ತಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
"ಗುಪ್ತಾ ವ್ಯಾಪಾರಿಯಾಗಿದ್ದು, ಶುಕ್ರವಾರ ಬದೌನ್- ಫರೂಕಾಬಾದ್ ಗಡಿಯ ಅತೇನಾ ಸೇತುವೆ ಬಳಿ ಬಂಧಿಸಲಾಗಿದೆ. ಆತನನ್ನು ಮಥುರಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ" ಎಂದು ಡಿಐಡಿ ಅಶುತೋಶ್ ಕುಮಾರ್ ಪ್ರಕಟಿಸಿದ್ದಾರೆ.
ಗುಪ್ತಾ ಸುಭಾಸ್ ಸೇನೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದು ಮಾತ್ರವಲ್ಲದೇ, ದೈನಂದಿನ ಖರ್ಚು ವೆಚ್ಚಕ್ಕಾಗಿ ಹಣಕಾಸು ನೆರವನ್ನೂ ನೀಡಿದ್ದರು. ಇದು ದೇಶದ ಭದ್ರತಾ ವಿಚಾರವಾಗಿರುವುದರಿಂದ ಗುಪ್ತಚರ ವಿಭಾಗದ ಅಧಿಕಾರಿಗಳು ಕೂಡಾ ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ ಎಂದು ವಿವರಿಸಿದರು.
Next Story