ಜಿಶಾ ತಂದೆ ಪಾಪ್ಪುವನ್ನು ಸಿಪಿಎಂ, ಕಾಂಗ್ರೆಸ್ ವಿರುದ್ಧ ರಂಗಕ್ಕಿಳಿಸಿದ ಬಿಜೆಪಿ!
ಕೊಚ್ಚಿ, ಜೂನ್ 18: ಜಿಶಾ ಕೊಲೆ ಪ್ರಕರಣದಲ್ಲಿ ಸಿಪಿಎಂ ಹಾಗೂ ಕಾಂಗ್ರೆಸ್ ವಿರುದ್ಧ ಜಿಶಾ ತಂದೆ ಪಾಪ್ಪುವನ್ನು ಬಿಜೆಪಿ ರಂಗಕ್ಕಿಳಿಸಿದೆ. ಅಸ್ಸಾಂ ವ್ಯಕ್ತಿ ಅಮೀರುಲ್ ಇಸ್ಲಾಂ ಕೊಲೆ ಕೃತ್ಯ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದರೂ ಕೇಸ್ನಲ್ಲಿ ಒಳಗೊಂಡಿರುವ ಇತರ ಉನ್ನತ ವ್ಯಕ್ತಿಗಳನ್ನು ರಕ್ಷಿಸಲು ಆಡಳಿತ ಪಕ್ಷವಾದ ಸಿಪಿಎಂ ಹಾಗೂ ಮುಖ್ಯಪ್ರತಿಪಕ್ಷವಾದ ಕಾಂಗ್ರೆಸ್ ಶಾಮೀಲಾಗಿ ವರ್ತಿಸಿದೆ ಎಂಬುದನ್ನು ಬಲಗೊಳಿಸುವುದು ಬಿಜೆಪಿಯ ಉದ್ದೇಶ ಎನ್ನಲಾಗಿದೆ.
ಈ ವಿಷಯವನ್ನು ಬೆಟ್ಟುಮಾಡಿ ಶುಕ್ರವಾರ ಕೊಚ್ಚಿಯಲ್ಲಿ ಪಾಪ್ಪು ನಡೆಸಿದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಬಿಜೆಪಿ ತನ್ನಹಿರಿಯ ನಾಯಕ ಹಾಗೂ ಉಪಾಧ್ಯಕ್ಷರಾದ ಪಿಎಂ ವೇಲಾಯುಧನ್ರಿಗೆ ಬಿಜೆಪಿ ಹೊಣೆ ವಹಿಸಿತ್ತು.
ಕೊಲೆ ನಡೆದು ಐವತ್ತು ದಿವಸಗಳ ಬಳಿಕ ಅಸ್ಸಾಂ ವ್ಯಕ್ತಿಯನ್ನು ತಮಿಳ್ನಾಡಿನಿಂದ ಬಂಧಿಸಿದ್ದು ಬರೇ ನಾಟಕ ಎಂದು ಬಿಜೆಪಿ ಹೇಳುತ್ತಿದೆ. ಪಾಪ್ಪುವಿನ ಜೊತೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ಬಿಜೆಪಿ ನಾಯಕ ಪೊಲೀಸರಲ್ಲಿ ವಿಶ್ವಾಸ ಕಳಕೊಳ್ಳುವಂತಾಗಿದೆ ಎಂದಿದ್ದಾರೆ. ಕಲಾಭವನ್ ಮಣಿಯ ನಿಗೂಢ ಸಾವಿನ ವಿಷಯದಲ್ಲಿಯೂ ಇದೇ ರೀತಿ ಸಂಭವಿಸಿದೆ ಎಂದು ಆವರು ಆರೋಪಿಸಿದ್ದಾರೆ.