ಬಾದಲ್, ಸುಖ್ಬೀರ್ ಉಡ್ತಾಪಂಜಾಬ್ ನೋಡಲಿ: ಕೇಜ್ರಿವಾಲ್
ಹೊಸದಿಲ್ಲಿ, ಜೂನ್ 18: ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಹಾಗೂ ಉಪಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಅಗತ್ಯವಾಗಿ ಉಡ್ತಾಪಂಜಾಬ್ ಚಿತ್ರವನ್ನು ನೋಡಬೇಕಾಗಿದೆ. ಆಗ ರಾಜ್ಯವನ್ನು ಅವರು ಏನು ಮಾಡಿದ್ದಾರೆ ಎಂದು ಆಗ ಅವರಿಗೆಮನವರಿಕೆಯಾಗಲಿದೆ ಎಂದು ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ನಿನ್ನೆ ರಾತ್ರಿ ಉಡ್ತಾ ಪಂಜಾಬ್ ಸಿನೆಮಾವನ್ನು ನೋಡಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಕೇಜ್ರಿವಾಲ್ ನಾನು ಉಡ್ತಾಪಂಜಾಬ್ ಸಿನೆಮಾ ಸ್ವಲ್ಪ ಮೊದಲು ನೋಡಿದೆ. ತುಂಬಾ ಪ್ರಭಾವಶಾಲಿಯಾಗಿದೆ. ಬಾದಲ್ ಪಂಜಾಬ್ನ್ನು ಏನುಮಾಡಿದ್ದಾರೆ ಎಂದು ಸಿನೆಮಾದ ಮೂಲಕ ನೋಡಲಿ ಎಂದು ಹೇಳಿದ್ದಾರೆ. ಉಡ್ತಾಪಂಜಾಬ್ ಅಭಿಶೇಕ್ ಚೌಬೆ ನಿರ್ದೇಶನದಲ್ಲಿ ತಯಾರಾದ ಸಿನೆಮಾ ಡ್ರಗ್ಸ್ ಹಾವಳಿ ಬಗ್ಗೆ ಮನಮುಟ್ಟುವಂತೆ ಚಿತ್ರಿಸಿದೆ. ಅನುರಾಗ್ ಕಶ್ಯಪ್, ಎಕತಾ ಕಪೂರ್ ಹಾಗೂ ವಿಕ್ರಮಾದಿತ್ಯ ಮೋಡವಾನೆ ಚಿತ್ರವನ್ನು ನಿರ್ಮಿಸಿದ್ದಾರೆ.
Next Story