Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಮೊದಲ ಟ್ವೆಂಟಿ-20: ಕೊನೆಯ ಓವರ್‌ನಲ್ಲಿ...

ಮೊದಲ ಟ್ವೆಂಟಿ-20: ಕೊನೆಯ ಓವರ್‌ನಲ್ಲಿ ಮುಗ್ಗರಿಸಿದ ಭಾರತ

ಝಿಂಬಾಬ್ವೆಗೆ 2 ರನ್ ರೋಚಕ ಜಯ

ವಾರ್ತಾಭಾರತಿವಾರ್ತಾಭಾರತಿ18 Jun 2016 11:24 PM IST
share
ಮೊದಲ ಟ್ವೆಂಟಿ-20: ಕೊನೆಯ ಓವರ್‌ನಲ್ಲಿ ಮುಗ್ಗರಿಸಿದ ಭಾರತ

 ಹರಾರೆ, ಜೂ.18: ಭಾರತ ವಿರುದ್ಧದ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ಝಿಂಬಾಬ್ವೆ ತಂಡ 2 ರನ್ ಅಂತರದಿಂದ ರೋಚಕ ಜಯ ಸಾಧಿಸಿದೆ. ಕೊನೆಯ ಓವರ್‌ನಲ್ಲಿ ಅಮೋಘ ಬೌಲಿಂಗ್ ನಡೆಸಿದ ಝಿಂಬಾಬ್ವೆಯ ನೆವಿಲ್ಲೆ ಮಡ್ಝಿವಾ ಗೆಲುವಿನ ರೂವಾರಿಯಾಗಿ ಮೂಡಿ ಬಂದರು.

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತವನ್ನು ಮಣಿಸಿ ಶಾಕ್ ನೀಡಿದ ಝಿಂಬಾಬ್ವೆ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಝಿಂಬಾಬ್ವೆ ಅನುಭವಿ ಆಟಗಾರ ಎಲ್ಟನ್ ಚಿಗುಂಬುರ(ಔಟಾಗದೆ 54 ರನ್, 26 ಎಸೆತ, 1 ಬೌಂಡರಿ, 7 ಸಿಕ್ಸರ್) ಬಾರಿಸಿದ ಬಿರುಸಿನ ಅರ್ಧಶತಕದ ನೆರವಿನಿಂದ ಭಾರತದ ಗೆಲುವಿಗೆ 171 ರನ್ ಗುರಿ ನೀಡಿತು.

ಅಗ್ರ ಕ್ರಮಾಂಕದಲ್ಲಿ ಮನೀಷ್ ಪಾಂಡೆ(48) ಹಾಗೂ ಮನ್‌ದೀಪ್ ಸಿಂಗ್(31) ನೀಡಿದ ಕೊಡುಗೆಯ ನೆರವಿನಿಂದ ಭಾರತದ ಗೆಲುವಿನ ಸನಿಹ ತಲುಪಿತ್ತು. ಭಾರತಕ್ಕೆ ಕೊನೆಯ ಓವರ್‌ನಲ್ಲಿ ಗೆಲುವಿಗೆ 8 ರನ್ ಅಗತ್ಯವಿತ್ತು. ಆಗ ದಾಳಿಗೆ ಇಳಿದ ಬಲಗೈ ಮಧ್ಯಮ ವೇಗಿ ಮಡ್ಝಿವಾ ಕೊನೆಯ ಓವರ್‌ನ 2ನೆ ಎಸೆತದಲ್ಲಿ ಆಲ್‌ರೌಂಡರ್ ಅಕ್ಷರ್ ಪಟೇಲ್(18) ವಿಕೆಟ್ ಉಡಾಯಿಸಿ ಝಿಂಬಾಬ್ವೆ ಗೆಲುವನ್ನು ಖಚಿತಪಡಿಸಿದರು. ಮತ್ತೊಂದು ತುದಿಯಲ್ಲಿದ್ದ ನಾಯಕ ಧೋನಿಗೆ ಹೆಚ್ಚು ಸ್ಟ್ರೈಕ್ ಸಿಗದೇ ಇದ್ದ ಕಾರಣ ಭಾರತ ಕೇವಲ 2 ರನ್‌ನಿಂದ ಸೋಲುವಂತಾಯಿತು.

ಭಾರತ 90 ರನ್‌ಗೆ 4 ವಿಕೆಟ್ ಕಳೆದುಕೊಂಡಿತ್ತು. ಆಗ ಧೋನಿ ಹಾಗೂ ಪಾಂಡೆ 5ನೆ ವಿಕೆಟ್‌ಗೆ 53 ರನ್ ಸೇರಿಸಿ ತಂಡವನ್ನು ಗೆಲುವಿನ ಹಳಿಗೆ ತಂದಿದ್ದರು. ಆದರೆ, ಅಂತಿಮ ಓವರ್‌ನಲ್ಲಿ ಅಕ್ಷರ್ ಪಟೇಲ್ ಔಟಾಗಿ ಭಾರತಕ್ಕೆ ದುಬಾರಿಯಾಗಿ ಪರಿಗಣಮಿಸಿತು.

ಝಿಂಬಾಬ್ವೆ ಪರ ಮುಝರಬನಿ(2-31) ಹಾಗೂ ಚಿಭಾಭಾ(2-13) ತಲಾ ಎರಡು ವಿಕೆಟ್ ಪಡೆದರು.

 ಝಿಂಬಾಬ್ವೆ 170/6: ಇದಕ್ಕೆ ಮೊದಲು ಚಿಗುಂಬುರಾ ಬಾರಿಸಿದ ಮಿಂಚಿನ ಅರ್ಧಶತಕದ ನೆರವಿನಿಂದ ಝಿಂಬಾಬ್ವೆ 20 ಓವರ್‌ಗಳಲ್ಲಿ ಸ್ಪರ್ಧಾತ್ಮಕ 170 ರನ್ ಗಳಿಸಿತು. ಮತ್ತೊಮ್ಮೆ ಮಧ್ಯಮ ಸರದಿ ಕುಸಿತಕ್ಕೆ ಒಳಗಾಗಿದ್ದ ಝಿಂಬಾಬ್ವೆ 16ನೆ ಓವರ್‌ನಲ್ಲಿ 115 ರನ್‌ಗೆ 5 ವಿಕೆಟ್ ಕಳೆದುಕೊಂಡಿತ್ತು.

ಆಗ 7ನೆ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಚಿಗುಂಬುರಾ 24 ಎಸೆತಗಳಲ್ಲಿ 7 ಸಿಕ್ಸರ್, 1 ಬೌಂಡರಿ ಸಿಡಿಸಿ ಝಿಂಬಾಬ್ವೆ ಅಂತಿಮ 4 ಓವರ್‌ಗಳಲ್ಲಿ 55 ರನ್ ಗಳಿಸಲು ನೆರವಾದರು.

ಝಿಂಬಾಬ್ವೆಗೆ ಹ್ಯಾಮಿಲ್ಟನ್ ಮಸಕಝ(25) ಹಾಗೂ ಚಿಭಾಭಾ(20) 3 ಓವರ್‌ಗಳಲ್ಲಿ 33 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಈ ಜೋಡಿಯನ್ನು ಬುಮ್ರಾ ಬೇರ್ಪಡಿಸಿದರು.

ಸಿಕಂದರ್ ರಝಾ(20) ಹಾಗೂ ವಾಲ್ಲರ್(30) ಅಮೂಲ್ಯ ಕಾಣಿಕೆ ನೀಡಿದರು.

ಸ್ಕೋರ್ ವಿವರ

ಝಿಂಬಾಬ್ವೆ: 20 ಓವರ್‌ಗಳಲ್ಲಿ 170/6

ಚಿಭಾಭಾ ಬಿ ಧವನ್ 20

ಮಸಕಝ ಸಿ ಧೋನಿ ಬಿ ಬುಮ್ರಾ 25

ಮುತುಂಬಮಿ ಗಾಯಾಳು ನಿವೃತ್ತಿ 00

ಸಿಕಂದರ್ ರಝಾ ರನೌಟ್ 20

ವಾಲ್ಲೆರ್ ಬಿ ಚಾಹಲ್ 30

ಮುತುಂಬೊಝಿ ಸಿ ಧವನ್ ಬಿ ಪಟೇಲ್ 03

ಚಿಗುಂಬುರ ಔಟಾಗದೆ 54

ಕ್ರಿಮರ್ ಸಿ ಧವನ್ ಬಿ ಬುಮ್ರಾ 04

ಮಡ್ಜಿವಾ ಔಟಾಗದೆ 05

ಇತರ 09

ವಿಕೆಟ್ ಪತನ: 1-33, 1-34, 2-50, 3-97, 4-98, 5-111, 6-130.

ಬೌಲಿಂಗ್ ವಿವರ:

ಉನದ್ಕಟ್ 4-0-43-0

ಧವನ್ 4-0-42-1

ಬುಮ್ರಾ 4-1-24-2

ಅಕ್ಷರ್ ಪಟೇಲ್ 4-1-18-1

ಯುರ್ವೆುಂದ್ರ ಚಾಹಲ್ 4-0-38-1

ಭಾರತ: 20 ಓವರ್‌ಗಳಲ್ಲಿ 168/6

ಕೆಎಲ್ ರಾಹುಲ್ ಬಿ ತಿರಿಪಾನೊ 00

ಮನ್‌ದೀಪ್ ಸಿಂಗ್ ಸಿ ಮುತುಂಬೊಝಿ ಬಿ ಚಿಭಾಭಾ 31

ಅಂಬಟಿ ರಾಯುಡು ಬಿ ಚಿಭಾಭಾ 19

ಮನೀಷ್ ಪಾಂಡೆ ಸಿ ತಿರಿಪಾನೊ ಬಿ ಮುಝರಬನಿ 48

ಕೇದಾರ್ ಜಾಧವ್ ಬಿ ಮುಝರಬನಿ 19

ಎಂಎಸ್ ಧೋನಿ ಔಟಾಗದೆ 19

ಅಕ್ಷರ್ ಪಟೇಲ್ ಸಿ ಸಬ್ ಬಿ ಮಡ್ಜಿವಾ 18

ರಿಷಿ ಧವನ್ ಔಟಾಗದೆ 01

ಇತರ 13

 ವಿಕೆಟ್ ಪತನ: 1-0, 2-44, 3-53, 4-90, 5-143, 6-164.

ಬೌಲಿಂಗ್ ವಿವರ: ತಿರಿಪಾನೊ 4-0-35-1

ಮಡ್ಜಿವಾ 4-0-34-1

ಮುಝರಬನಿ 4-0-31-2

ಚಿಭಾಭಾ 2-0-13-2

ಸಿಕಂದರ್ ರಝಾ 3-0-18-0

ಕ್ರಿಮರ್ 3-0-35-0

ಪಂದ್ಯಶ್ರೇಷ್ಠ: ಎಲ್ಟನ್ ಚಿಗುಂಬುರ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X