ಕಲಾಭವನ್ ಮಣಿ ಸಾವಿಗೆ ಕೀಟನಾಶಕ,ವಿಷಮದ್ಯ ಹೊಟ್ಟೆಯೊಳಗೆ ಸೇರಿದ್ದು ಕಾರಣ: ಪೋಸ್ಟ್ಮಾರ್ಟಂ ವರದಿ
ತೃಶೂರ್, ಜೂನ್ 19: ಕಲಾಭವನ್ ಮಣಿಯ ಪೋಸ್ಟ್ಮಾರ್ಟಂ ವರದಿ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು ಕ್ಲಾರೋಫೈರಿಪೋಸ್, ಮಿಥೈನ್ ಮಿಶ್ರಣದ ಮದ್ಯ ಹೊಟ್ಟೆಗೆ ಸೇರಿದ್ದು ಮಣಿಮೃತರಾಗಲು ಕಾರಣವೆಂದು ವಿವರಿಸಲಾಗಿದೆ. ಮುಳುಗುನ್ನುಕ್ಕಾವ್ ಮೆಡಿಕಲ್ ಕಾಲೇಜ್ನ ಫಾರೆನ್ಸಿಕ್ ತಜ್ಞ ಹಾಗೂ ಅಸಿಸ್ಟೆಂಟ್ ಪೊಲೀಸ್ ಸರ್ಜನ್ ಆದ ಡಾ.ಶೇಖ್ ಶಕೀರ್ ಹುಸೈನ್ ನೇತೃತ್ವದ ವೈದ್ಯರ ತಂಡ ಮರಣೋತ್ತರ ಮೃತದೇಹ ಪರೀಕ್ಷೆಯನ್ನು ನಡೆಸಿದೆ. ಮಣಿಯ ಮರಣದ ಕುರಿತು ತೀಕ್ಷ್ಣವಾದ ಚರ್ಚೆ ಪ್ರತಿಚರ್ಚೆಗಳು ನಡೆಯುತ್ತಿದ್ದಾಗಲೂ ಪೋಸ್ಟ್ಮಾರ್ಟಂ ವರದಿ ಬಂದಿರಲಿಲ್ಲ. ಮಣಿಯ ಶರೀರದಲ್ಲಿ 45 ಮಿಲಿಗ್ರಾಮ್ ಮಿಥೇನಾಲ್ ಪತ್ತೆಹಚ್ಚಲು ಸಾಧ್ಯವಾಗಿದೆ ಎಂದು ಹೈದರಾಬಾದ್ ಕೇಂದ್ರ ಫಾರೆನ್ಸಿಕ್ ಲ್ಯಾಬ್ ವರದಿಯಲ್ಲಿತ್ತು. ಆದರೆ ಪೋಸ್ಟ್ಮಾರ್ಟಂ ವರದಿ ಇದಕ್ಕೆ ವಿರುದ್ಧವಾಗಿದೆ. ಇದರೊಂದಿಗೆ ಮಣಿಯೆಂಬ ಮಹಾ ನಟನ ಸಾವು ನಿಗೂಢತೆಯನ್ನು ಆವರಿಸಿಕೊಂಡ ಸಂಕೀರ್ಣ ಸಮಸ್ಯೆಯಾಗಿ ಪರಿಣಮಿಸಿದೆ. ಮಣಿಯ ಸಾವು ಅಸಹಜವಾದುದುಎ ಂದು ಕುಟುಂಬ ಆರೋಪಿಸುತ್ತಿದೆ. ಇದೀಗ ಪೋಸ್ಟ್ಮಾರ್ಟಂ ವರದಿಯ ಮೂಲಕವೂ ಅದು ಇನ್ನಷ್ಟು ಬಲಗೊಂಡಂತಾಗಿದೆ. ಈಗಾಗಲೇ ಕೇರಳ ಸರಕಾರ ಕುಟುಂಬದ ಆಗ್ರಹದಂತೆ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ.