Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಪ್ರಧಾನಿ ಮೋದಿ ಈಗ ಜಾಗತಿಕ ನಾಯಕ.

ಪ್ರಧಾನಿ ಮೋದಿ ಈಗ ಜಾಗತಿಕ ನಾಯಕ.

ವಾರ್ತಾಭಾರತಿವಾರ್ತಾಭಾರತಿ19 Jun 2016 11:05 PM IST
share
ಪ್ರಧಾನಿ ಮೋದಿ ಈಗ ಜಾಗತಿಕ ನಾಯಕ.

ಪ್ರಧಾನಿ ಮೋದಿ ಈಗ ಜಾಗತಿಕ ನಾಯಕ.
 
  -ಜಗ್ಗಿ ವಾಸುದೇವ್, ಆಧ್ಯಾತ್ಮಿಕ ಮುಖಂಡ 

ಜಾಗ ಮತ್ತು ನಾಯಕನ ನಡುವೆ ಇರುವ ಎರಡು ಶಬ್ದಗಳ ಬಗ್ಗೆ ಆಕ್ಷೇಪವಿದೆ.
---------------------
  
ಸಿದ್ದರಾಮಯ್ಯ, ಯಡಿಯೂರಪ್ಪ, ಡಿಕೆಶಿ ಎಂಬ ತ್ರಿಮೂರ್ತಿಗಳು ಒಟ್ಟಾಗಿ ಜೆಡಿಎಸ್ ಮುಗಿಸಲು ಹೊರಟಿದ್ದಾರೆ -

ದೇವೇಗೌಡ, ಮಾಜಿ ಪ್ರಧಾನಿ

ಆದರೆ ಜೆಡಿಎಸ್ ಮುಗಿಸಲು ನೀವು ಒಬ್ಬರೇ ಸಾಕು.
 ---------------------

ಕಾನೂನಿನ ಚೌಕಟ್ಟಿನಲ್ಲಿ ಶ್ರೀಮಂತರಾಗುವುದರಲ್ಲಿ ತಪ್ಪಿಲ್ಲ.

 -ನ್ಯಾ. ಸಂತೋಷ್ ಹೆಗ್ಡೆ

ಕಾನೂನಿನ ಚೌಕಟ್ಟಿನ ಒಳಗೆ ಮೋಸ, ವಂಚನೆ ಮಾಡಬಹುದು ಎಂದು ಇದರ ಅರ್ಥ.

 ---------------------

  ಪಕ್ಷದ ವರಿಷ್ಠರು ಹೇಳುವುದನ್ನು ಮಾಡುವುದಷ್ಟೇ ನನ್ನ ಕೆಲಸ.


  -ಡಿ.ಕೆ. ಶಿವಕುಮಾರ್, ಸಚಿವ 

ಅಂದರೆ ಸುಪಾರಿ ಕಿಲ್ಲರ್ ಪಾತ್ರವೇ?

---------------------

ಸಿದ್ದರಾಮಯ್ಯ ನೇತೃತ್ವದಲ್ಲೇ ಮುಂದಿನ ಚುನಾವಣೆ. 

-ದಿಗ್ವಿಜಯ್ ಸಿಂಗ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ 

ರಾಷ್ಟ್ರಮಮಟ್ಟದಲ್ಲೂ ಅವರಿಗೇ ನೇತೃತ್ವ ವಹಿಸಿಕೊಟ್ಟರೆ ಹೇಗೆ?

---------------------

ನೌಕರರು, ಶ್ರಮಿಕರು, ಸೈನಿಕರಿಂದ ದೇಶ ಸಮೃದ್ಧಿಯಾಗುತ್ತದೆ. 

-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

ಮತ್ತು ಕಪಟ ಸನ್ಯಾಸಿಗಳಿಂದ ಆ ಸಮೃದ್ಧಿ ದೋಚಲ್ಪಡುತ್ತದೆ.

 ---------------------

  ಕಪ್ಪು ಹಣ ವಾಪಸಾತಿ ವಿಷಯದಲ್ಲಿ ಕೇಂದ್ರ ಸರಕಾರ ಗರಿಷ್ಠ ಪ್ರಯತ್ನ ಮಾಡುತ್ತಿಲ್ಲ.

 -ಬಾಬಾರಾಮ್ ದೇವ್ ಯೋಗಗುರು 

ಗರಿಷ್ಠ ಪ್ರಯತ್ನ ಮಾಡಿದ್ದಿದ್ದರೆ ನೀವೀಗ ಜೈಲಲ್ಲಿರಬೇಕಾಗಿತ್ತು. 
---------------------

  ಕಾಂಗ್ರೆಸ್ ಸಾಧನೆ ಹೊಸ ಪೀಳಿಗೆಗೆ ದಾಟಿಸದಿದ್ದರೆ ಪಕ್ಷಕ್ಕೆ ಅಪಾಯವಿದೆ. 

-ಆಸ್ಕರ್ ಫೆರ್ನಾಂಡಿಸ್, ರಾಜ್ಯಸಭಾ ಸದಸ್ಯ

ಕುರ್ಚಿಗೆ ಅಂಟಿಕೊಂಡಿರುವ ಹಳೆ ಪೀಳಿಗೆಯನ್ನು ಎಬ್ಬಿಸುವ ಕೆಲಸ ಮೊದಲು ಆಗಬೇಕು.

 ---------------------

  ದಿನೇಶ್ ಅಮಿನ್ ಮಟ್ಟು ಕಾಂಗ್ರೆಸ್‌ನ ಸುಪಾರಿ ಕಿಲ್ಲರ್.

- ಸುರೇಶ್ ಕುಮಾರ್, ಶಾಸಕ

ಕಿಲ್ಲರ್ ಯಾರೇ ಆಗಿರಲಿ, ಸುಪಾರಿ ಬೆಲೆ ಹೆಚ್ಚಲಿ ಎನ್ನುವುದು ಅಡಿಕೆ ಬೆಳೆಗಾರರ ಆಶಯ.

 ---------------------

ಹಳೆ ಔಷಧಗಳನ್ನು ನಾಶಪಡಿಸಲು ಕ್ರಮ ಕೈಗೊಳ್ಳಲಾಗುವುದು.

-ಯು.ಟಿ. ಖಾದರ್, ಸಚಿವ 

ಅದನ್ನು ನಾಶ ಪಡಿಸಿದರೆ, ರೋಗಿಗಳಿಗೆ ಕೊಡಲು ಹೊಸ ಔಷಧ ನಿಮ್ಮಲ್ಲಿ ಇದೆಯೇ?

---------------------

   ಕಾಂಗ್ರೆಸ್ ಆಡಳಿತದಲ್ಲಿ ದೇಶವು ಗಳಿಸಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು .

-ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ರಾಜ್ಯದ ಬಿಜೆಪಿ ಆಡಳಿತದಲ್ಲಿ ನೀವು ಕಳೆದುಕೊಂಡದ್ದನ್ನೊಮ್ಮೆ ನೆನಪಿಸಿಕೊಳ್ಳಿ.

---------------------

ಬಿಜೆಪಿ ಮುಖಂಡರು ಕಾಲಕ್ಕೆ ತಕ್ಕಂತೆ ಬದಲಾಗಬೇಕು.

-ನರೇಂದ್ರ ಮೋದಿ , ಪ್ರಧಾನಿ

ಮನುಷ್ಯರಾಗಿ ಬದಲಾಗುವುದಂತೂ ಅಸಾಧ್ಯ. 

---------------------

  ವ್ಯಕ್ತಿಗಿಂತ ಪಕ್ಷ ದೊಡ್ಡದು.

-ದೇವೇಗೌಡ, ಮಾಜಿ ಪ್ರಧಾನಿ.

ಅದಕ್ಕೇ ಭಿನ್ನಮತೀಯರು ಗೌಡರನ್ನು ತೊರೆದು ಪಕ್ಷವನ್ನು ಆರಿಸಿಕೊಂಡರು.

 ---------------------


  ಧರ್ಮಸ್ಥಳ ಇಲ್ಲವೇ ಚಾಮುಂಡೇಶ್ವರಿ ಮುಂದೆ ಆಣೆ ಮಾಡುತ್ತೇನೆ ರಾಜ್ಯಸಭೆ ಚುನಾವಣೆಯಲ್ಲಿ ಒಂದು ರೂ. ಕೂಡಾ ಮುಟ್ಟಿಲ್ಲ.

-ಎಚ್.ಡಿ.ರೇವಣ್ಣ , ಜೆಡಿಎಸ್ ಶಾಸಕ.

ಅಂದರೆ ಎಲ್ಲವನ್ನೂ ಸೋದರ ಕುಮಾರಸ್ವಾಮಿ ಗುಳುಂ ಮಾಡಿದ್ದಾರೆ ಎಂಬ ಆರೋಪವೇ?

---------------------

ಪ್ರತಿಯೊಂದು ಬಯಕೆಯೂ ಸುಪ್ತಾವಸ್ಥೆಯಿಂದ ಏಳುತ್ತದೆ.

-ಶ್ರೆ ರವಿಶಂಕರ್, ಆರ್ಟ್ ಆಫ್ ಲಿವಿಂಗ್ ಸ್ಥಾಪಕ 

ಆದರೆ ಕೆಲವೊಮ್ಮೆ ಅದಕ್ಕೆ ಬಹುದೊಡ್ಡ ದಂಡ ಕಟ್ಟಬೇಕಾಗುತ್ತದೆ ಎಚ್ಚರ.

---------------------

ಯುದ್ಧದ ಆಯುಧಗಳಿಗೆ ನಮ್ಮ ಬೀದಿಗಳಲ್ಲಿ ಸ್ಥಾನವಿಲ್ಲ.

 -ಹಿಲರಿ ಕ್ಲಿಂಟನ್, ಅಮೆರಿಕದ ಅಧ್ಯಕ್ಷೆಯ ಅಭ್ಯರ್ಥಿ 

ಪಕ್ಕದ ದೇಶದ ಬೀದಿಗಳಲ್ಲಿ ಮಾತ್ರ ಬಳಸುವ ಉದ್ದೇಶವಿರಬೇಕು.

 ---------------------

ಈ ಸರಕಾರದಲ್ಲಿ ನಾನು ಸುರಕ್ಷಿತವಾಗಿದ್ದೇನೆ ಆದ್ದರಿಂದ ಮಹಿಳೆಯರೂ ಸುರಕ್ಷಿತವಾಗಿದ್ದಾರೆ.

-ಮೇನಕಾ ಗಾಂಧಿ, ಕೇಂದ್ರ ಸಚಿವೆ.

ಪ್ರಾಣಿಗಳ ಬಗ್ಗೆ ಇರುವ ದಯೆ, ಈ ದೇಶದ ಮಹಿಳೆಯರ ಬಗ್ಗೆಯೂ ಇರಲಿ.

 ---------------------

  ನಾನು ರಾಜಕೀಯಕ್ಕೆ ಬಂದದ್ದು ನಿರುದ್ಯೋಗಿಯಾಗಿದ್ದಾಗ ಅಲ್ಲ, ಯಶಸ್ಸಿನ ಉತ್ತುಂಗದಲ್ಲಿದ್ದಾಗ

-ಸ್ಮತಿ ಇರಾನಿ, ಕೇಂದ್ರ ಸಚಿವೆ

ನಿಮ್ಮ ನಟನೆಯ ಉತ್ತುಂಗವನ್ನು ನೋಡಿಯೇ ರಾಜಕಾರಣಿಗಳು ರಾಜಕೀಯಕ್ಕೆ ಎಳೆತಂದದ್ದು.

---------------------

ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಗೂಂಡಾ ರಾಜ್ಯವಾಗಿದೆ.

- ಕೆ.ಎಸ್. ಈಶ್ವರಪ್ಪ, ಬಿಜೆಪಿ ನಾಯಕ

ಅಧಿಕಾರಕ್ಕೆ ಬಂದರೆ ಯಡಿಯೂರಪ್ಪ ನಿಮ್ಮ ವಿರುದ್ಧ ಗೂಂಡಾ ಕಾಯ್ದೆ ಹಾಕುತ್ತಾರಂತೆ ಎಚ್ಚರಿಕೆ. 

---------------------

ಮಾಸಾಂತ್ಯಕ್ಕೆ ತರಕಾರಿ ಬೆಲೆ ಇಳಿಯಲಿದೆ.

-ಕೃಷ್ಣ ಭೈರೇಗೌಡ ಸಚಿವ

ಯಾವ ಮಾಸ ಎನ್ನುವುದೂ ತಿಳಿಸಿ ಬಿಡಿ. 

---------------------

  
ಬಿಹಾರವು ಜಂಗಲ್‌ರಾಜ್‌ನಿಂದ ಈಗ ಮಹಾಜಂಗಲ್‌ರಾಜ್ ಆಗಿ ಬದಲಾಗಿದೆ

 -ರಾಮ್ ವಿಲಾಸ್ ಪಾಸ್ವಾನ್, ಕೇಂದ್ರ ಸಚಿವ

ಬಹುಶಃ ನೀವು ಜಂಗಲ್ ಮಹಾ ರಾಜ ಆಗುವ ಕನಸು ಕಾಣುತ್ತಿರಬೇಕು. 

---------------------

  ಸಾರ್ವಜನಿಕ ಆಸ್ತಿ ಪಾಸ್ತಿಗಳು ನಮ್ಮದೇ ಎಂದು ತಿಳಿದು ಸಂರಕ್ಷಿಸಿದಾಗ ಮಾತ್ರ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯ.

-ಡಾ.ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ ಧರ್ಮಸ್ಥಳ

  ಅದರ ಆಧಾರದಲ್ಲಿ ರೈತರಿಗೆ ತಮ್ಮ ಗ್ರಾಮೀಣಭಿವೃದ್ಧಿ ಫೈನಾನ್ಸ್‌ಗಳಿಂದ ಸಾಲ ಕೊಡುತ್ತೀರಾ?

---------------------

  ನಾವು ಪ್ರಾಕೃತಿಕ ಸಮತೋಲನ ಕಾಪಾಡುವಲ್ಲಿ ವಿಫಲರಾಗಿದ್ದೇವೆ.

 - ರಮಾನಾಥ ರೈ, ಅರಣ್ಯ ಸಚಿವ. 

ಸಚಿವ ಸಂಪುಟದಲ್ಲಿ ತಮ್ಮ ಸಚಿವ ಸ್ಥಾನದ ಅಸಮತೋಲನದ ಪರಿಣಾಮ ಇರಬಹುದೇ?
---------------------

share
ವಾರ್ತಾಭಾರತಿ
ವಾರ್ತಾಭಾರತಿ
Next Story
X