Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಬರಿಂದರ್-ಬುಮ್ರಾ ದಾಳಿಗೆ ಬಸವಳಿದ...

ಬರಿಂದರ್-ಬುಮ್ರಾ ದಾಳಿಗೆ ಬಸವಳಿದ ಝಿಂಬಾಬ್ವೆ ; ಭಾರತಕ್ಕೆ ಭರ್ಜರಿ ಜಯ

ಎರಡನೆ ಟ್ವೆಂಟಿ-20 ಪಂದ್ಯ; ಸರಣಿ 1-1 ಸಮಬಲ

ವಾರ್ತಾಭಾರತಿವಾರ್ತಾಭಾರತಿ20 Jun 2016 7:29 PM IST
share
ಬರಿಂದರ್-ಬುಮ್ರಾ ದಾಳಿಗೆ ಬಸವಳಿದ ಝಿಂಬಾಬ್ವೆ ; ಭಾರತಕ್ಕೆ ಭರ್ಜರಿ ಜಯ

ಹರಾರೆ, ಜೂ.20: ಝಿಂಬಾಬ್ವೆ ವಿರುದ್ಧದ ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.
ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 100 ರನ್‌ಗಳ ಸವಾಲನ್ನು ಪಡೆದ ಭಾರತ ಇನ್ನೂ 41 ಎಸೆತಗಳನ್ನು ಬಾಕಿ ಉಳಿಸಿ ವಿಕೆಟ್ ನಷ್ಟವಿಲ್ಲದೆ 103 ರನ್ ಗಳಿಸುವ ಮೂಲಕ ಸುಲಭದ ಗೆಲುವು ದಾಖಲಿಸಿತು.
ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿತು. ಕಳೆದ ಪಂದ್ಯದಲ್ಲಿ ಝಿಂಬಾಬ್ವೆ ಎರಡು ರನ್‌ಗಳ ರೋಚಕ ಜಯ ದಾಖಲಿಸಿತ್ತು.
ಆರಂಭಿಕ ದಾಂಡಿಗರಾದ ಕೆ.ಎಲ್.ರಾಹುಲ್ ಔಟಾಗದೆ 47 ರನ್ (40ಎ, 2ಬೌ,2ಸಿ) ಮತ್ತು ಮನ್‌ದೀಪ್ ಸಿಂಗ್ ಔಟಾಗದೆ 52 ರನ್(40ಎ, 5ಬೌ,1ಸಿ) ಗಳಿಸಿದರು.
ಇದಕ್ಕೂ ಮೊದಲು ಟಾಸ್ ಜಯಿಸಿದ ಝಿಂಬಾಬ್ವೆ ತಂಡ ಮೊದಲ ಪಂದ್ಯದಲ್ಲಿ ದೊಡ್ಡ ಮೊತ್ತದ ಸವಾಲನ್ನು ಸೇರಿಸಿದಂತೆ ಈ ಪಂದ್ಯದಲ್ಲೂ ಸೇರಿಸುವ ಉದ್ದೇಶಕ್ಕಾಗಿ ಬ್ಯಾಟಿಂಗ್ ಆಯ್ದುಕೊಂಡಿತ್ತು.
 ಚೊಚ್ಚಲ ಪಂದ್ಯವನ್ನಾಡಿದ ಬರಿಂದರ್ ಸ್ರಾನ್(10ಕ್ಕೆ 4) ಮತ್ತು ಜಸ್‌ಪ್ರೀತ್ ಬುಮ್ರಾ(11ಕ್ಕೆ 3) ಝಿಂಬಾಬ್ವೆ ತಂಡದ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದರು. ಒಂದು ಹಂತದಲ್ಲಿ 57ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಝಿಂಬಾಬ್ವೆ 90 ರನ್‌ಗಳ ಗಡಿ ದಾಟುವುದು ಸಂಶಯ ಇತ್ತು. ಚಿಭಾಭಾ 10ರನ್, ಮಸಕಝಾ 10ರನ್, ಮೂರ್ 31 ರನ್, ವಾಲೆರ್ 14 ರನ್ ಮತ್ತು ಟ್ರಿಪಾನೊ ಔಟಾಗದೆ 11 ರನ್ ಗಳಿಸಿದರು. ಉಳಿದಂತೆ ತಂಡದ ಸಹ ಆಟಗಾರರಿಂದ ಎರಡಂಕೆಯ ಸ್ಕೋರ್ ದಾಖಲಾಗಲಿಲ್ಲ.
 
ಎಡಗೈ ವೇಗಿ ಬರಿಂದರ್ ಸ್ರಾನ್ 4 ವಿಕೆಟ್ ಉಡಾಯಿಸುವ ಮೂಲಕ ಚೊಚ್ಚಲ ಪ್ರವೇಶದಲ್ಲೇ ಉತ್ತಮ ಸಾಧನೆ ಮಾಡಿರುವ ಎರಡನೆ ಬೌಲರ್ ಎನಿಸಿಕೊಂಡರು. ಇವರೊಂದಿಗೆ ಮೊದಲ ಪಂದ್ಯವನ್ನಾಡಿದ ಧವಳ್ ಕುಲಕರ್ಣಿ 32ಕ್ಕೆ 1 ವಿಕೆಟ್ ಪಡೆದರು. ಯಜುವೇಂದ್ರ ಚಾಹಲ್ 19ಕ್ಕೆ 1 ವಿಕೆಟ್ ಪಡೆದರು. ಬುಮ್ರಾ ಅವರು ಸ್ರಾನ್‌ಗೆ ಉತ್ತಮ ಬೆಂಬಲ ನೀಡಿದರು.

ತಂಡದ ಸ್ಕೋರ್ 2.5 ಓವರ್‌ಗಳಲ್ಲಿ 14 ಆಗಿದ್ದಾಗ ಸ್ರಾನ್ ಅವರು ಆರಂಭಿಕ ದಾಂಡಿಗ ಚಿಭಾಬಾ ವಿಕೆಟ್ ಉಡಾಯಿಸುವ ಮೂಲಕ ಚೊಚ್ಚಲ ಟ್ವೆಂಟ-20 ಅಂತಾರಾಷ್ಟ್ರೀಯ ವಿಕೆಟ್ ಪಡೆದರು.
5ನೆ ಓವರ್‌ನಲ್ಲಿ ಮೂವರಿಗೆ ಸ್ರಾನ್ ಪೆವಿಲಿಯನ್ ಹಾದಿ ತೋರಿಸಿದರು. ಆದರೆ ಅವರಿಗೆ ಹ್ಯಾಟ್ರಿಕ್ ಅವಕಾಶ ತಪ್ಪಿತು.

5 ಓವರ್‌ಗಳಲ್ಲಿ ಝಿಂಬಾಬ್ವೆ 4 ವಿಕೆಟ್ ನಷ್ಟದಲ್ಲಿ 28ರನ್ ಗಳಿಸಿತ್ತು. ಬಳಿಕ ಚಾಹಲ್, ಬುಮ್ರಾ ಮತ್ತು ಧವಳ್ ಕುಲಕರ್ಣಿ ದಾಳಿ ಮುಂದುವರಿಸಿ ಝಿಂಬಾಬ್ವೆಗೆ 100 ರನ್ ದಾಖಲಿಸುವ ಮೊದಲೇ ಆಲೌಟ್ ಮಾಡಿದರು.   ಚೊಚ್ಚಲ ಪಂದ್ಯವನ್ನಾಡಿದ ಸ್ರಾನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸ್ಕೋರ್ ವಿವರ

ಝಿಂಬಾಬ್ವೆ: 20 ಓವರ್‌ಗಳಲ್ಲಿ 99/9

ಚಿಭಾಭಾ ಸಿ ರಾಯುಡು ಬಿ ಸ್ರಾನ್ 10

ಮಸಕಝ ಬಿ ಸ್ರಾನ್ 10

ಮೂರ್ ಸಿ ಪಟೇಲ್ ಬಿ ಬುಮ್ರಾ 31

ಸಿಕಂದರ್ ರಝಾ ಸಿ ರಾಹುಲ್ ಬಿ ಸ್ರಾನ್ 01

ಮುತೊಂಬೊಝಿ ಎಲ್‌ಬಿಡಬ್ಲು ಸ್ರಾನ್ 00

ವಾಲ್ಲರ್ ಸಿ ಪಟೇಲ್ ಬಿ ಚಾಹಲ್ 14

ಚಿಗುಂಬುರ ಬಿ ಬುಮ್ರಾ 08

ಕ್ರಿಮರ್ ಸಿ ರಾಯುಡು ಬಿ ಕುಲಕರ್ಣಿ 04

ಮಡ್ಜಿವಾ ಬಿ ಬುಮ್ರಾ 01

ತಿರಿಪಾನೊ ಔಟಾಗದೆ 11

ಇತರ 09

ವಿಕೆಟ್ ಪತನ: 1-14, 2-26, 3-28, 4-28, 5-57, 6-75, 7-81, 8-83, 9-91.

ಬೌಲಿಂಗ್ ವಿವರ:

ಸ್ರಾನ್ 4-0-10-4

ಧವಳ್ ಕುಲಕರ್ಣಿ 4-0-32-1

ಅಕ್ಷರ್ ಪಟೇಲ್ 4-0-23-0

ವೈ.ಚಾಹಲ್ 4-1-19-1

ಬುಮ್ರಾ 4-0-11-3

ಭಾರತ: 13.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 103

ಕೆಎಲ್ ರಾಹುಲ್ ಔಟಾಗದೆ 47

ಮನ್‌ದೀಪ್ ಸಿಂಗ್ ಔಟಾಗದೆ 52

ಇತರ 04

ಬೌಲಿಂಗ್ ವಿವರ:

ತಿರಿಪಾನೊ 3-0-11-0

ಮಡ್ಝಿವಾ 2.1-0-19-0

ಮುಝರಬನಿ 2-0-17-0

ಕ್ರಿಮರ್ 3-0-24-0

ಚಿಭಾಭಾ 2-0-23-0

ಸಿಕಂದರ್ ರಝಾ 1-0-9-0

ಪಂದ್ಯಶ್ರೇಷ್ಠ: ಬರಿಂದರ್ ಸ್ರಾನ್.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X