ಅಮೇರಿಕದಲ್ಲಿ ಹೈದರಾಬಾದ್ ನ ಯುವ ಟೆಕ್ಕಿ ನೀರಲ್ಲಿ ಮುಳುಗಿ ಸಾವು
ಹೈದರಾಬಾದ್, ಜೂ.22: ಇಲ್ಲಿನ ವನಸ್ಥಲಿಪುರಂ ನಿವಾಸಿ ಹಾಗೂ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಸಂಸ್ಥೆಯಲ್ಲಿ ನೆಟ್ವರ್ಕಿಂಗ್ ಇಂಜಿನಿಯರ್ ಆಗಿರುವ ಯುವಕನೊಬ್ಬ ಅಮೇರಿಕದ ಅರಿಝೋನಾದಲ್ಲಿ ನೀರಿನಲ್ಲಿ ಮುಳುಗಿ ರವಿವಾರ ಸಾವನ್ನಪ್ಪಿದ್ದಾರೆ.
ಮೃತ ಯುವಕನನ್ನು ನಂಬೂರಿ ಶ್ರೀದತ್ತ ಎಂದು ಗುರುತಿಸಲಾಗಿದೆ. ಆತ ಅರಿಝೋನಾದ ಟೆಂಪೆಯಲ್ಲಿರುವ ಸಿವಿಎಸ್ ಹೆಲ್ತ್ಸಂಸ್ಥೆಯಲ್ಲಿ ಟಿಸಿಎಸ್ಪರವಾಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಸೋಮವಾರ ದತ್ತ ಅವರ ಕುಟುಂಬ ಸದಸ್ಯರಿಗೆ ಈ ದುಃಖಕರ ವಾರ್ತೆಯನ್ನು ಅಮೇರಿಕದಲ್ಲಿರುವ ಅವರ ಸ್ನೇಹಿತರು ತಿಳಿಸಿದರು.
ದತ್ತ ಹಾಗೂ ಅವರ ಸ್ನೇಹಿತರು ಟೆಂಪೆಯಿಂದ ಸ್ವಲ್ಪ ದೂರವಿರುವ ಜಲಪಾತ ನೋಡಲು ಹೋಗಿ ಅಲ್ಲಿ ನೀರಿನಲ್ಲಿ ಆಟವಾಡುತ್ತಿದ್ದಾಗ ಆತ ಮುಳುಗಿ ಸಾವನ್ನಪ್ಪಿದನೆಂದು ನಮಗೆ ತಿಳಿಸಲಾಯಿತೆಂದು ದತ್ತಾ ಅವರ ತಾಯಿ ರಾಗಮಣಿ ತಿಳಿಸಿದ್ದಾರೆ.
ಸೆಕುಂದರಾಬಾದ್ ನಗದ ಎಸ್ವಿಐಟಿ ಕಾಲೇಜಿನಲ್ಲಿ ಬಿಟೆಕ್ಒದವಿ ಪಡೆದ ದತ್ತ ನಂತರ ಸಿನ್ಸಿನ್ನಾಟಿ ವಿವಿಯಲ್ಲಿ ಎಂಎಸ್ ಪದವಿ ಪಡೆದು ಕೆಲ ಕಾಲ ಅಮೇರಿಕದಲ್ಲಿ ವಿಪ್ರೋಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿ ಬಳಿಕ ಟಿಸಿಎಸ್ ಸೇರಿದ್ದರು. ಬಿಟೆಕ್ ಮಾಡಿರುವ ತನ್ನ ಕಿರಿಯ ಸಹೋದರ ಯಜ್ಞ ಅವರನ್ನು ಅಮೇರಿಕಾಗೆ ಕರೆದುಕೊಂಡು ಹೋಗಲು ಅವರು ಆಗಸ್ಟ್ ತಿಂಗಳಲ್ಲಿ ಭಾರತಕ್ಕೆ ಬರುವವರಿದ್ದರು. ದತ್ತ ಅವರ ಮೃತದೇಹವನ್ನು ಭಾರತಕ್ಕೆ ತರಲು ಸಹಕರಿಸುವಂತೆ ಆತನ ಕುಟುಂಬ ಕೇಂದ್ರ ಸರಕಾರ ಹಾಗೂ ಆಂಧ್ರಪ್ರದೇಶ ಮತ್ತು ತೆಲಂಗಾಣ ಸರಕಾರಗಳನ್ನು ವಿನಂತಿಸಿದೆ.