Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಬ್ರಿಟನ್‌ನ ಡಿಜಿಟಲ್ ಸಂಗ್ರಹದಲ್ಲಿ 6...

ಬ್ರಿಟನ್‌ನ ಡಿಜಿಟಲ್ ಸಂಗ್ರಹದಲ್ಲಿ 6 ಭಾರತೀಯ ಯುದ್ಧ ಹೀರೋಗಳು

ವಾರ್ತಾಭಾರತಿವಾರ್ತಾಭಾರತಿ22 Jun 2016 10:15 PM IST
share
ಬ್ರಿಟನ್‌ನ ಡಿಜಿಟಲ್ ಸಂಗ್ರಹದಲ್ಲಿ 6 ಭಾರತೀಯ ಯುದ್ಧ ಹೀರೋಗಳು

ಲಂಡನ್, ಜೂ. 22: ಮೊದಲ ಮಹಾಯುದ್ಧದ ಶತಮಾನೋತ್ಸವ ಆಚರಿಸುವ ಬ್ರಿಟನ್ ಸರಕಾರದ ಯೋಜನೆಯ ಭಾಗವಾಗಿ, ಯುದ್ಧ ಪರಾಕ್ರಮಿಗಳ ಕತೆಗಳನ್ನು ಹೇಳುವ ನೂತನ ಡಿಜಿಟಲ್ ಸಂಗ್ರಹವೊಂದನ್ನು ಬ್ರಿಟನ್ ಆರಂಭಿಸಿದೆ. ಇದರಲ್ಲಿ ಆರು ಭಾರತೀಯರ ಸಾಹಸಗಾಥೆಗಳೂ ಇವೆ.
ಮೊದಲ ಮಹಾಯುದ್ಧದಲ್ಲಿ 11 ವಿದೇಶಗಳ 175 ಮಂದಿಗೆ ಶೌರ್ಯಕ್ಕಾಗಿ ನೀಡುವ ಬ್ರಿಟನ್‌ನ ಅತ್ಯುನ್ನತ ಪ್ರಶಸ್ತಿ ‘ವಿಕ್ಟೋರಿಯ ಕ್ರಾಸ್’ನ್ನು ನೀಡಲಾಗಿದೆ. ಈ ಪೈಕಿ ಆರು ಮಂದಿ ಅವಿಭಜಿತ ಭಾರತದ ಆರು ಸೈನಿಕರು. ಅವರು ಬ್ರಿಟಿಶ್ ಭಾರತೀಯ ಸೇನೆಯ ಭಾಗವಾಗಿ ಯುದ್ಧದಲ್ಲಿ ಹೋರಾಡಿದರು. 2014ರಲ್ಲಿ ಭಾರತಕ್ಕೆ ನೀಡಲಾದ ಸ್ಮರಣಾ ಫಲಕದಲ್ಲಿ ಅವರನ್ನು ಗೌರವಿಸಲಾಗಿತ್ತು.
 ‘‘ಸ್ಮಾರಕ ಫಲಕದಲ್ಲಿ ಕೆತ್ತಲಾದ ಪ್ರತಿ ಹೆಸರಿನ ಹಿಂದೆ ಒಂದು ಅಸಾಮಾನ್ಯ ಕತೆಯಿದೆ. ಈ ಡಿಜಿಟಲ್ ಸಂಗ್ರಹದಲ್ಲಿ ವಿದೇಶಗಳ ವಿಕ್ಟೋರಿಯ ಕ್ರಾಸ್ ವಿಜೇತ ಸೈನಿಕರನ್ನು ಜೊತೆಗೆ ತರುವ ಮೂಲಕ ಇಲ್ಲಿ ಅವರಿಗೆ ಸೂಕ್ತ ಶ್ರದ್ಧಾಂಜಲಿಯನ್ನು ಸಲ್ಲಿಸಲಾಗಿದೆ’’ ಎಂದು ವಿದೇಶ ಮತ್ತು ಕಾಮನ್‌ವೆಲ್ತ್ ಕಚೇರಿ (ಎಫ್‌ಸಿಒ) ಸಚಿವ ಹ್ಯೂಗೊ ಸ್ವಯರ್ ಹೇಳಿದರು.
ಡಿಜಿಟಲ್ ಸಂಗ್ರಹದಲ್ಲಿರುವ ಆರು ಭಾರತೀಯ ಸೈನಿಕರ ವಿವರ ಇಂತಿದೆ: ಪಂಜಾಬ್‌ನ ರಿಸಲ್ದಾರ್ ಬದ್ಲು ಸಿಂಗ್, ಉತ್ತರಪ್ರದೇಶದ ಸಿಪಾಯಿ ಚತ್ತಾ ಸಿಂಗ್, ಈಗಿನ ಉತ್ತರಾಖಂಡದ ನಾಯಕ್ ದರ್ವಾನ್ ಸಿಂಗ್ ನೇಗಿ ಮತ್ತು ರೈಫಲ್‌ಮನ್ ಗಬರ್ ಸಿಂಗ್ ನೇಗಿ, ರಾಜಸ್ಥಾನದ ಲ್ಯಾನ್ಸ್ ದಫೇದಾರ್ ಗೋಬಿಂದ್ ಸಿಂಗ್ ಮತ್ತು ಹಿಮಾಚಲಪ್ರದೇಶದ ಲ್ಯಾನ್ಸ್ ನಾಯಕ್ ಲಾಲ.
ಪಾಕಿಸ್ತಾನ, ನೇಪಾಳ, ಕೆನಡ, ಆಸ್ಟ್ರೇಲಿಯ, ನ್ಯೂಝಿಲ್ಯಾಂಡ್, ದಕ್ಷಿಣ ಆಫ್ರಿಕ, ಅಮೆರಿಕ, ಡೆನ್ಮಾರ್ಕ್, ಬೆಲ್ಜಿಯಂ ಮತ್ತು ಯುಕ್ರೇನ್ ದೇಶಗಳ ಸೈನಿಕರ ಕತೆಗಳೂ ಡಿಜಿಟಲ್ ಸಂಗ್ರಹದಲ್ಲಿವೆ.
ಮೊದಲ ಮಹಾಯುದ್ಧದಲ್ಲಿ ಬ್ರಿಟನ್ ಪ್ರವೇಶಕ್ಕೆ 2014 ಆಗಸ್ಟ್‌ಗೆ 100 ವರ್ಷಗಳು ತುಂಬಿದ್ದವು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X