Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಸ್ವೀಡಿಷ್ ಫುಟ್ಬಾಲ್ ಆಟಗಾರನಿಗೆ ರೆಡ್...

ಸ್ವೀಡಿಷ್ ಫುಟ್ಬಾಲ್ ಆಟಗಾರನಿಗೆ ರೆಡ್ ಕಾರ್ಡ್ !

ಮೈದಾನದಲ್ಲಿ ಹೂಸು ಬಿಟ್ಟಿದ್ದೇ ಪ್ರಮಾದ

ವಾರ್ತಾಭಾರತಿವಾರ್ತಾಭಾರತಿ23 Jun 2016 11:39 AM IST
share
ಸ್ವೀಡಿಷ್ ಫುಟ್ಬಾಲ್ ಆಟಗಾರನಿಗೆ ರೆಡ್ ಕಾರ್ಡ್ !

ಸ್ಟಾಕ್‌ಹೋಮ್, ಜೂ.23: ಕುತೂಹಲಕಾರಿ ವಿದ್ಯಮಾನವೊಂದರಲ್ಲಿ ಆಟದ ಮೈದಾನದಲ್ಲಿ ಹೂಸು ಬಿಟ್ಟಿದ್ದಕ್ಕೆ ಸ್ವೀಡನ್ನಿನ ಫುಟ್ಬಾಲ್ ಆಟಗಾರನೊಬ್ಬನಿಗೆ ರೆಫ್ರೀ ರೆಡ್ ಕಾರ್ಡ್ ತೋರಿಸಿದ ಘಟನೆ ವರದಿಯಾಗಿದೆ.

ಜರ್ನ ಎಸ್. ಕೆರಿಸರ್ವ್ ತಂಡ ಹಾಗೂ ಪೆರ್ಶಗೆನ್ ಎಸ್. ಕೆ. ತಂಡಗಳ ನಡುವೆ ಆಟ ನಡೆಯುತ್ತಿದ್ದಾಗ ‘ಉದ್ದೇಶಪೂರ್ವಕ ಪ್ರಚೋದನೆ’ ಹಾಗೂ ‘ಕ್ರೀಡಾಳುವೊಬ್ಬನಿಗೆ ತಕ್ಕುದಲ್ಲದ ನಡವಳಿಕೆ’ ತೋರಿದ ಆರೋಪವನ್ನು ಆಟಗಾರ ಆಡಮ್ ಲಿಂಡಿನ್ ಲ್ ಜುಂಗ್‌ಕ್ವಿಸ್ಟ್ ಮೇಲೆ ಹೊರಿಸಲಾಗಿದೆ. ಆತನಿಗೆ ಮೊದಲು ಎರಡು ಬಾರಿ ಹಳದಿ ಕಾರ್ಡ್ ಕೂಡ ತೋರಿಸಲಾಗಿ ನಂತರ ರೆಡ್ ಕಾರ್ಡ್ ತೋರಿಸಿ ಆಟದ ಮೈದಾನದಿಂದ ‘ವಿಚಿತ್ರ ಸನ್ನಿವೇಶವೊಂದರಲ್ಲಿ’ ಹೊರಕ್ಕೆ ಕಳುಹಿಸಲಾಯಿತೆಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

‘‘ನನ್ನ ಹೊಟ್ಟೆ ಸರಿಯಾಗಿರಲಿಲ್ಲದ ಕಾರಣ ನಾನು ಹಾಗೆ ಮಾಡಬೇಕಾಯಿತು,’’ ಎಂದು ಲಿಂಡಿನ್ ಹೇಳಿದ್ದಾರೆನ್ನಲಾಗಿದೆ. ‘‘ಈ ಘಟನೆಯಿಂದ ನನಗೆ ಆಘಾತವಾಗಿದೆ. ಫುಟ್ಬಾಲ್ ಮೈದಾನದಲ್ಲಿ ಹೀಗೆ ಆಗಿರಲಿಕ್ಕಿಲ್ಲ,’’ಎಂದು ಅವರು ಹೇಳಿದ್ದಾರೆ.

‘‘ನನಗೆ ಸ್ವಲ್ಪವೂ ಹೂಸು ಬಿಡಲು ಅವಕಾಶವಿಲ್ಲವೇ ಎಂದು ನಾನು ರೆಫ್ರೀ ಬಳಿ ಕೇಳಿದಾಗ ಆತ ‘ಇಲ್ಲ’ ಎಂದರು. ಆದರೆ ನಾನು ನನ್ನ ಕೈಮೇಲೆ ಹೂಸು ಬಿಟ್ಟು ಅವರತ್ತ ಎಸೆದೆನೆಂದು ಅವರಿಗೆ ಅನಿಸಿರಬೇಕು. ಆದರೆ ನಾನು ಹಾಗೆ ಮಾಡಿಲ್ಲ,’’ ಎಂದು ಆತ ಬಹಿರಂಗ ಪಡಿಸಿದ್ದಾರೆ.

‘‘ನಾನು ಆತನಿಂದ ಸ್ವಲ್ಪ ದೂರದಲ್ಲಿಯೇ ಇದ್ದರೂ ಆತ ಜೋರಾಗಿ ಹೂಸು ಬಿಟ್ಟಿದ್ದನ್ನು ಕೇಳಿದ್ದೆ. ಆತ ಉದ್ದೇಶ ಪೂರ್ವಕವಾಗಿ ಹಾಗೆ ಮಾಡಿದ್ದ. ಇದು ಸರಿಯಲ್ಲ. ಇದಕ್ಕಾಗಿಯೇ ಆತನಿಗೆ ಮೊದಲ ಹಳದಿ ಕಾರ್ಡ್ ತೋರಿಸಲಾಯಿತು,’’ಎಂದು ಎದುರಾಳಿ ತಂಡದ ಆಟಗಾರ ಕ್ರಿಸ್ಟೋಫರ್ ಲಿಂಡೆ ಹೇಳಿದ್ದಾರೆ.

ಇಪ್ಪತ್ತೈದು ವರ್ಷದ ಆಟಗಾರನಿಗೆ ಹಳದಿ ಕಾರ್ಡ್ ತೋರಿಸಿದ ರೆಫ್ರೀ ತಾನು ಇಂತಹ ಘಟನೆಗಳನ್ನು ಈ ಹಿಂದೆಯೂ ನೋಡಿದ್ದಾಗಿ ಹೇಳುತ್ತಾರೆ.
‘‘ಒಮ್ಮೆ ಆಟಗಾರನೊಬ್ಬ ಪಿಚ್ ಸಮೀಪವೇ ಮೂತ್ರ ವಿಸರ್ಜಿಸಿದ್ದ. ಆತನಿಗೂ ಹಳದಿ ಕಾರ್ಡ್ ತೋರಿಸಬೇಕಾಯಿತು’’ಎಂದಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X