Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಗುಲ್ಬರ್ಗ ರ್ಯಾಗಿಂಗ್ ಸಂತ್ರಸ್ತೆಯ...

ಗುಲ್ಬರ್ಗ ರ್ಯಾಗಿಂಗ್ ಸಂತ್ರಸ್ತೆಯ ಆಘಾತಕಾರಿ ಪತ್ರ ಬಹಿರಂಗ

ನನ್ನ ಮೈಬಣ್ಣಕ್ಕೆ ತಮಾಷೆ ಮಾಡಿದ ಅವರು ಟಾಯ್ಲೆಟ್ ಕ್ಲೀನರ್ ಅನ್ನು ನನ್ನ ಬಾಯಿಗೆ ಹಾಕಿ ಬಿಟ್ಟರು!

ವಾರ್ತಾಭಾರತಿವಾರ್ತಾಭಾರತಿ23 Jun 2016 12:05 PM IST
share
ಗುಲ್ಬರ್ಗ ರ್ಯಾಗಿಂಗ್ ಸಂತ್ರಸ್ತೆಯ ಆಘಾತಕಾರಿ ಪತ್ರ ಬಹಿರಂಗ

ಕೊಝಿಕ್ಕೋಡ್, ಜೂ.23: ಗುಲ್ಬರ್ಗಾದ ಅಲ್ ಖಮರ್ ನರ್ಸಿಂಗ್ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿನಿಯರ ಕೈಯಲ್ಲಿ ರ್ಯಾಗಿಂಗ್‌ಗೆ ಒಳಗಾಗಿ ಬಲವಂತದಿಂದ ಟಾಯ್ಲೆಟ್ ಕ್ಲೀನರ್ ಕುಡಿದಿದ್ದಾಳೆನ್ನಲಾದ 19 ವರ್ಷದ ಅಶ್ವತಿ ಈಗ ಕೊಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಾತನಾಡಲು ಪ್ರಯತ್ನ ಪಡುತ್ತಿದ್ದಾಳೆ. ಟಾಯ್ಲೆಟ್ ಕ್ಲೀನರ್ ಪ್ರಭಾವದಿಂದ ಆಕೆಯ ಅನ್ನ ನಾಳ ಸುಟ್ಟು ಹೋಗಿದ್ದು ಆಕೆಯ ಈ ಸ್ಥಿತಿಗೆ ಕಾರಣವೇನೆಂದು ತಿಳಿಯುವ ಪ್ರಯತ್ನವನ್ನು ಕರ್ನಾಟಕ ಮತ್ತು ಕೇರಳ ಪೊಲೀಸರು ಮಾಡುತ್ತಿದ್ದಾರೆ.

ಹಿರಿಯ ವಿದ್ಯಾರ್ಥಿನಿಯರು ತನಗೆ ಬಲವಂತವಾಗಿ ಟಾಯ್ಲೆಟ್ ಕ್ಲೀನರ್ ಫಿನಾಯಿಲ್ ಕುಡಿಸಿದ್ದರೆಂದು ಆರೋಪಿಸಿರುವ ಅಶ್ವತಿ ತನ್ನ ವಕೀಲರಿಗೆ ಪತ್ರ ಬರೆದು ತನಗಾದ ಘೋರ ಅನುಭವವನ್ನು ವಿವರಿಸಿದ್ದಾಳೆ. ಆಕೆಯ ಮೈಬಣ್ಣಕ್ಕೆ ತಮಾಷೆ ಮಾಡಿ ಆಕೆ ಚಿಕ್ಕವಳಿರುವಾಗಲೇ ಕುಟುಂಬವನ್ನು ತ್ಯಜಿಸಿ ಹೋಗಿದ್ದ ಆಕೆಯ ತಂದೆಯ ವಿಚಾರದಲ್ಲೂ ಆಕೆಯನ್ನು ವಿದ್ಯಾರ್ಥಿಗಳು ನಿಂದಿಸಿದ್ದರೆನ್ನಲಾಗಿದೆ.

‘‘ಡಿಸೆಂಬರ್ 2015 ರಿಂದ ಮೇ 2016 ರ ತನಕ ಕಾಲೇಜಿಗೆ ಹೋದ ನಾನು ಕೆಲ ಮೂರನೆ ವರ್ಷದ ವಿದ್ಯಾರ್ಥಿಗಳು ನೀಡುತ್ತಿದ್ದ ಮಾನಸಿಕ ಹಿಂಸೆ ತಡೆಯಲಾರದೆ ಶಿಕ್ಷಣ ನಿಲ್ಲಿಸಬೇಕಾಯಿತು. ಕಾಲೇಜಿನಲ್ಲಿ ಕಿರಿಯ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳಿಗೆ ದಿನದಲ್ಲಿ ಹಲವು ಬಾರಿ ವಿಶ್ ಮಾಡಬೇಕು ಹಾಗೆ ಮಾಡಿಲ್ಲದಿದ್ದಲ್ಲಿ ಅವರಿಗೆ ಗಂಟೆಗಟ್ಟಲೆ ಬೈಗುಳ ದೊರೆಯುತ್ತಿತ್ತು.

ಹಲವು ಬಾರಿ ನಾನು ಮತ್ತು ನನ್ನ ರೂಮ್‌ಮೇಟ್ ಹಿರಿಯ ವಿದ್ಯಾರ್ಥಿಗಳ (ಎಲ್ಲಾ ಕೇರಳದವರು) ಅಪ್ಪಣೆಯಂತೆ ಮೊಣಕಾಲೂರಿ ನಡೆಯಬೇಕಿತ್ತು ಅಥವಾ ಕಪ್ಪೆಗಳ ಥರ ಜಿಗಿಯಬೇಕಿತ್ತು. ಇದನ್ನೆಲ್ಲಾ ಹೇಗೋ ಸಹಿಸಬಹುದಿತ್ತು. ಆದರೆ ಮೇ 9 ರ ರಾತ್ರಿ ನಡೆದಿದ್ದು ಸಹಿಸಲಸಾಧ್ಯವಾಗಿತ್ತು. ಇಬ್ಬರು ಸೀನಿಯರ್ ವಿದ್ಯಾರ್ಥಿಗಳು ನನ್ನನ್ನು ಹಾಗೂ ನನ್ನ ರೂಮ್‌ಮೇಟನ್ನು ತಮ್ಮ ಕೋಣೆಗೆ ಬರ ಹೇಳಿದರು. ಅಲ್ಲಿ ಐದು ಮಂದಿಯಿದ್ದರು. ನಮ್ಮನ್ನು ನೋಡಿದ ಕೂಡಲೇ ನಮ್ಮಲ್ಲೊಬ್ಬಳು ರಜೆಯ ಮೇಲೆ ಹೋಗುತ್ತಿದ್ದೇವೆಯೇ ಎಂದು ಪ್ರಶ್ನಿಸಿ ಬೊಬ್ಬೆ ಹೊಡೆದು ನಮ್ಮನ್ನು ನಿಂದಿಸಲಾರಂಭಿಸಿದರು,’’ ಎಂದು ಅಶ್ವತಿ ಬರೆದಿದ್ದಾಳೆ.

‘‘ಸಮಯ ಕಳೆದಂತೆಲ್ಲಾ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ನಮಗೆ ಇಷ್ಟವಾದ ಹಾಗೂ ಇಷ್ಟವಿಲ್ಲದ ಹಿರಿಯ ವಿದ್ಯಾರ್ಥಿನಿಯರ ಹೆಸರು ಬರೆಯಲು ತಿಳಿಸಿದರು. ನಾನು ಧೈರ್ಯದಿಂದ ನಮ್ಮನ್ನು ಬರ ಹೇಳಿದ ಇಬ್ಬರು ವಿದ್ಯಾರ್ಥಿನಿಯರ ಹೆಸರು ಬರೆದು ಬಿಟ್ಟೆ. ಅವರಿಗೆ ಸಿಟ್ಟು ಬಂದು ನನ್ನ ಕಪ್ಪು ಬಣ್ಣವನ್ನು ತೆಗಳಿದರು ಹಾಗೂ ನನ್ನ ತಂದೆ ನನ್ನನ್ನು ಹಾಗೂ ನನ್ನ ತಾಯಿಯನ್ನು ತೊರೆದು ಹೋಗಿದ್ದರಲ್ಲಿ ಆಶ್ಚರ್ಯವಿಲ್ಲ ಎಂದರು.

‘‘ನಮಗೆ ಅಲ್ಲಿಂದ ಹೊರ ಹೋಗಲು ಹೇಳಲಾಯಿತು ಹಾಗೂ ನಮ್ಮ ಕೋಣೆಯ ಬಾಗಿಲು ಕಿಟಿಕಿಗಳನ್ನು ತೆರೆದಿಡಲು ಹೇಳಲಾಯಿತು. ಸ್ವಲ್ಪ ಹೊತ್ತಿನಲ್ಲಿ ಚೇಚಿ (ಹಿರಿಯ ಸಹೋದರಿಯರು) ನಮ್ಮ ಕೋಣೆಗೆ ನುಗ್ಗಿ ನನ್ನ ಬಾಯಿಗೆ ಟಾಯ್ಲೆಟ್ ಕ್ಲೀನರ್ ಸುರಿದರು. ಆಗ ನಾನು ಉಸಿರಾಡಲು ಕಷ್ಟಪಟ್ಟು ನೆಲಕ್ಕುರುಳಿದೆ. ನನ್ನ ಬೊಬ್ಬೆ ಕೇಳಿ ಓಡಿ ಬಂದ ಇತರ ಹಿರಿಯ ವಿದ್ಯಾರ್ಥಿನಿಯರು ನನ್ನ ಬಾಯಿಗೆ ಕೈಹಾಕಿ ನಾನು ನುಂಗಿದ್ದ ದ್ರವವನ್ನು ವಾಂತಿ ಮಾಡುವಂತೆ ಪ್ರಯತ್ನಿಸಿದರು. ಅಂದಿನಿಂದ ನನ್ನನ್ನು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ನಾನು ನರಳುತ್ತಾ ಇದ್ದೇನೆ. ನನಗೆ ನ್ಯಾಯ ಬೇಕು,’’ಎಂದು ಅಶ್ವತಿ ಬರೆದಿದ್ದಾರೆ.

ಆಕೆಯ ಪತ್ರದ ಪ್ರತಿಗಳನ್ನು ಕರ್ನಾಟಕ ಹಾಗೂ ಕೇರಳ ಮುಖ್ಯಮಂತ್ರಿಗಳಿಗೂ ಕಳುಹಿಸಲಾಗಿದೆ.

ಕೃಪೆ : ದಿ ನ್ಯೂಸ್‌ಮಿನಿಟ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X