ಚುಟುಕು ಸುದ್ದಿಗಳು
ಜೈವಿಕ ತ್ಯಾಜ್ಯದಿಂದ ಅನಿಲ ಉತ್ಪಾದನೆಗೆ ಪ್ರೋತ್ಸಾಹಿಸಲು ಆಗ್ರಹ
ಮಂಗಳೂರು, ಜೂ. 24: ಜೈವಿಕ ತ್ಯಾಜ್ಯದ ಮೂಲಕ ಅನಿಲ ಉತ್ಪತ್ತಿ ಮಾಡಿ ಅದರಿಂದ ಕೃಷಿಕರು, ವಾಹನಗಳಿಗೆ ಹಾಗೂ ಇತರ ಮೂಲಗಳಿಗೆ ಬಳಸಿಕೊಳ್ಳಬಹುದು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಒತ್ತು ನೀಡಬೇಕು ಎಂದು ಪಣಂಬೂರು ಎನ್ಎಂಪಿಟಿ ಉದ್ಯೋಗಿ ವೆಂಕಟಪತಿ ಕೆ.ಎಂ. ಸುದ್ದಿ ಗೋಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ.
ಶೇಖರಣೆಯಾದ ಅನಿಲದಿಂದ ಎಲ್ಲ ರೀತಿಯ ವಾಹನದ ಇಂಜಿನನ್ನು ಚಲಾಯಿಸಲು ಬಳಸಬಹುದು. ಇದರಿಂದಾಗಿ ಓರೆನ್ಪದರ ಕ್ಷೀಣಿಸುವುದಿಲ್ಲ. ಶೇಖರಣೆಯಾದ ಗ್ಯಾಸನ್ನು ಟರ್ಬೈನ್ಗೆ ನೀಡಿದಾಗ ಅದು ಚಲಿಸಿ, ಹೇರಳ ವಾದ ವಿದ್ಯುತ್ ಉತ್ಪಾದನೆ ಮಾಡಬಹುದು. ಜೈವಿಕ ತ್ಯಾಜ್ಯದ ಮಿಶ್ರಣವು ಒಂದು ಪ್ರಾಕೃ ತಿಕವಾಗಿ ದೊರೆಯುವ ರಸಗೊಬ್ಬರವಾಗಿರುವು ದರಿಂದ ಇದನ್ನು ಕೃಷಿಕರಿಗೆ ಉದಾರವಾಗಿ ನೀಡ ಬಹುದು ಎಂದವರು ಹೇಳಿದರು.
ಕಚ್ಚಾತೈಲ, ಇದ್ದಿಲುಗಳು ಹೇರಳವಾಗಿ ಭೂಮಿ ಯಿಂದ ಹೊರತೆಗೆದ ಪರಿಣಾಮವಾಗಿ 1 ದಿನ ಅದು ಸಂಪೂರ್ಣ ಮುಗಿದು ಹೋಗುವ ಹಂತಕ್ಕೆ ತಲುಪುತ್ತದೆ. ಆದರೆ ಮನುಷ್ಯರು ಈ ಭೂಮಿಯಲ್ಲಿ ಜೀವಂತವಾಗಿರುವ ತನಕ ಜೈವಿಕ ತ್ಯಾಜ್ಯವು ಮುಗಿದು ಹೋಗುವ ಭೀತಿಯಿಲ್ಲ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಶೇಖರ ಭಂಡಾರಿ ಕಾರ್ಕಳ ಮತ್ತಿತರರು ಉಪಸ್ಥಿತರಿದ್ದರು.
ಸಚಿವ ಪ್ರಮೋದ್ ಪ್ರವಾಸ
ಉಡುಪಿ, ಜೂ.24: ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಜೂ.25ರಂದು ಬೆಳಗ್ಗೆ 9:30ಕ್ಕೆ ಉಡುಪಿ ಸರ ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ನಡೆಯುವ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬಳಿಕ 10:30ಕ್ಕೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 4ಕ್ಕೆ ಉಡುಪಿಯ ತಮ್ಮ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
ಇಂದು ಸವಲತ್ತು ವಿತರಣೆ
ಉಡುಪಿ, ಜೂ.24: ಶಾಸಕ ವಿನಯಕುಮಾರ್ ಸೊರಕೆ ಜೂ. 25 ರಂದು ಬೆಳಗ್ಗೆ 10ಕ್ಕೆ ಪಡುಬಿದ್ರೆಯ ಬಿಲ್ಲವ ಸಭಾಭವನದಲ್ಲಿ, ಅಪ ರಾಹ್ನ 12ಕ್ಕೆ ಕಾಪು ವೀರದ್ರ ಸಭಾ ಭವನದಲ್ಲಿ, 2ಕ್ಕೆ ಶಿರ್ವ ಮೋನಿಸ್ ಕಾಂಪ್ಲೆಕ್ಸ್ ಸಭಾಭವನದಲ್ಲಿ ಹಾಗೂ ಸಂಜೆ 4ಕ್ಕೆೆ ಹಿರಿಯಡ್ಕ ದೇವಾಡಿಗರ ಸಭಾಭವನದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಇಂದು ಮಳ್ಹರ್ ಪ್ರಾರ್ಥನಾ ಸಮ್ಮೇಳನ
ಮಂಜೇಶ್ವರ, ಜೂ.24: ಮಳ್ಹರ್ ನೂರಿಲ್ ಇಸ್ಲಾಮಿತಅ್ಲೀಮಿಯ ಅಧೀನತೆಯಲ್ಲಿ ರಮಝಾನ್ 21ನೆ ರಾತ್ರಿ ನಡೆಯುವ ಪ್ರಾರ್ಥನಾ ಸಮ್ಮೇ ಳನವು ಜೂ.25ರಂದು ಸಂಜೆ ಮಳ್ಹರ್ ಅಲ್ ಬುಖಾರಿ ಕಾಂಪೌಡಿನ ವೇದಿಕೆಯಲ್ಲಿ ನಡೆಯಲಿದೆ.
ಸಂಜೆ 5 ಗಂಟೆಯಿಂದ ಆರಂಭ ಗೊಂಡು ಸಹರಿಯ ತನಕ ನಡೆಯುವ ಕಾರ್ಯಕ್ರಮದ ನೇತೃತ್ವವನ್ನು ಮಳ್ಹರ್ ಅಧ್ಯಕ್ಷ ಸೈಯದ್ ಇಬ್ರಾಹೀಂ ಖಲೀಲುಲ್ ಬುಖಾರಿ ಕಡಲುಂಡಿ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.
ಕನರಾಡಿ ದೇವಳಕ್ಕೆ ನುಗ್ಗಿ ಕಳವು
ಕಾಪು, ಜೂ.24: ಮಣಿಪುರ ಗ್ರಾಮದ ಕನರಾಡಿ ಎಂಬಲ್ಲಿನ ಶ್ರೀಲಕ್ಷ್ಮೀನರಸಿಂಹ ದುರ್ಗಾ ಗಣಪತಿ ದೇವಸ್ಥಾನಕ್ಕೆ ಜೂ.23ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸಾವಿರಾರು ರೂ. ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ದೇವಳದ ಬೀಗ ಮುರಿದು ಒಳನುಗ್ಗಿದ ಕಳ್ಳರು ಚಿನ್ನ ಹಾಗೂ ಬೆಳ್ಳಿಯ ದೇವರ ಆಭರಣ ಹಾಗೂ ದೇವರ ಸಾಮಗ್ರಿಗಳನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 20,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







