‘ದೇಶದ ಅಭಿವೃದ್ಧಿಗೆ ಪರಿಸರ ಕಾಳಜಿ, ಧಾರ್ಮಿಕ ಪ್ರಜ್ಞೆ ಅಗತ್ಯ’
![‘ದೇಶದ ಅಭಿವೃದ್ಧಿಗೆ ಪರಿಸರ ಕಾಳಜಿ, ಧಾರ್ಮಿಕ ಪ್ರಜ್ಞೆ ಅಗತ್ಯ’ ‘ದೇಶದ ಅಭಿವೃದ್ಧಿಗೆ ಪರಿಸರ ಕಾಳಜಿ, ಧಾರ್ಮಿಕ ಪ್ರಜ್ಞೆ ಅಗತ್ಯ’](https://www.varthabharati.in/sites/default/files/images/articles/2016/06/25/IMG-20160620-WA0002.gif)
ಬೆಂಗಳೂರು, ಜೂ.24: ದೇಶದ ಅಭಿವೃದ್ಧಿಗೆ ಜನರಲ್ಲಿ ಪರಿಸರದ ಬಗ್ಗೆ ಕಾಳಜಿ ಹಾಗೂ ಧಾರ್ಮಿಕ ಪ್ರಜ್ಞೆ ಮೂಡಿವುದು ಅಗತ್ಯ ಎಂದು ಅಂತಾರಾಷ್ಟ್ರೀಯ ವಾಸ್ತುತಜ್ಞ, ಧಾರ್ಮಿಕ ಗುರು ಚಂದ್ರಶೇಖರ ಸ್ವಾಮೀಜಿ ಅಭಿಪ್ರಾಯಿಸಿದರು.
ಬೆಂಗಳೂರಿನ ಯದುಗಿರಿ ಯತಿರಾಜ ಮಠದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ವಿಶ್ವಮಾನವ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಯತಿರಾಜ ಮಠದ ಶ್ರೀ ನಾರಾಯಣ ಮಾನುಜಾಚಾರ್ಯರವರು ಚಂದ್ರಶೇಖರ ಸ್ವಾಮೀಜಿ ದಂಪತಿಗೆ ಪ್ರಶಸ್ತಿ ವಿತರಿಸಿ ಗೌರವಿಸಿದರು. ಸಮಾರಂಭದಲ್ಲಿ ಸರಕಾರದ ವಿಶೇಷ ಅಧಿಕಾರಿ ಜೆ.ಎಂ.ತಿಪ್ಪೇಸ್ವಾಮಿ, ಅಡಿಗಾಸ್ ಹೋಟೆಲ್ನ ಮಾಲಕ ರಾಧಾಕೃಷ್ಣ ಅಡಿಗ, ಕಾನೂನು ಸಲಹೆಗಾರ ಎಂ.ಎಸ್.ಶ್ಯಾಮ್ಸುಂದರ್, ನಿವೃತ್ತ ಐಎಎಸ್ ಅಧಿಕಾರಿ ಡಿ.ವೆಂಕಟೇಶ್ವರ ರಾವ್, ವಿಜಯಕುಮಾರ್, ಮಂಜುನಾಥ ಗೌಡ ಉಪಸ್ಥಿತರಿದ್ದರು.
ಮಠದ ಹಿರಿಯ ವಿದ್ವಾನ್ ರಂಗಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.
Next Story