ಹೂ ಹಾಕುವ ಕಲ್ಲು ಎಸ್.ವೈ.ಎಸ್ ಹಾಗೂ ಎಸೆಸ್ಸೆಫ್ ವತಿಯಿಂದ ಬದರ್ ಮೌಲಿದ್ ಮತ್ತು ಇಫ್ತಾರ್ ಕೂಟ

ಮುಡಿಪು,ಜೂ.26: ಹೂ ಹಾಕುವ ಕಲ್ಲು ಎಸ್.ವೈ.ಎಸ್ ಹಾಗೂ ಎಸ್.ಎಸ್.ಎಫ್ ವತಿಯಿಂದ ಜೂ.22ರಂದು ಅಸರ್ ನಮಾಜಿನ ಬಳಿಕ ಸ್ಥಳೀಯ ಖತೀಬರಾದ ರಫೀಕ್ ಅಹ್ಸನಿ ಕಕ್ಕೆಪದವು ರವರ ನೇತೃತ್ವದಲ್ಲಿ ಶಾಖಾ ಕಚೇರಿಯಲ್ಲಿ ಬದರ್ ಮೌಲಿದ್ ನಡೆಯಿತು. ಬಳಿಕ ಬದ್ರಿಯ ಜುಮಾ ಮಸ್ಜಿದ್ ಹೂ ಹಾಕುವ ಕಲ್ಲಿನಲ್ಲಿ ಇಫ್ತಾರ್ ಕೂಟ ನಡೆಯಿತು. ಕಾರ್ಯಕ್ರಮದಲ್ಲಿ ಎಸ್.ವೈ.ಎಸ್ ಬ್ರಾಂಚ್ ಅಧ್ಯಕ್ಷರಾದ ಮೊಯಿದಿನ್ ಕುಂಞಿ ತೋಟಾಲ್ SSF ಅಧ್ಯಕ್ಷರಾದ ರಫೀಕ್ ತಚ್ಛಾಲ್ ಸೆಕ್ಟರ್ ಕೋಶಾಧಿಕಾರಿ ಅಝೀಝ್ ಹೂಹಾಕುವಕಲ್ಲು ಉದ್ಯಮಿಗಳಾದ ಇಬ್ರಾಹಿಂ ತೋಟಾಲ್, ಹಮೀದ್ ಕಿಲಾರಿ ಹಾಗೂ ಎಸ್.ವೈ.ಎಸ್ & ಎಸೆಸ್ಸೆಫ್ನ ನಾಯಕರು ಉಪಸ್ಥಿತರಿದ್ದರು.
Next Story





