Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಲಂಡನ್ ಚರ್ಚ್‌ನಿಂದ ಐತಿಹಾಸಿಕ ಇಫ್ತಾರ್...

ಲಂಡನ್ ಚರ್ಚ್‌ನಿಂದ ಐತಿಹಾಸಿಕ ಇಫ್ತಾರ್ ಕೂಟ

ಚರ್ಚ್ ನಾಯಕರಿಂದಲೂ ಉಪವಾಸ, ಮೇಯರ್ ಖಾನ್ ಅತಿಥಿ

ವಾರ್ತಾಭಾರತಿವಾರ್ತಾಭಾರತಿ26 Jun 2016 11:58 PM IST
share
ಲಂಡನ್ ಚರ್ಚ್‌ನಿಂದ ಐತಿಹಾಸಿಕ ಇಫ್ತಾರ್ ಕೂಟ

ಲಂಡನ್: ಲಂಡನ್ ನ ಶತಮಾನಗಳಷ್ಟು ಹಳೇ ಚರ್ಚ್ ತನ್ನ ಬಾಗಿಲನ್ನು ಮುಸ್ಲಿಮರಿಗಾಗಿ ಉಪವಾಸ ಬಿಡಲು ತೆರೆದದ್ದಷ್ಟೇ ಅಲ್ಲ ನೂರಾರು ಮುಸ್ಲಿಮರಿಗೆ ಪ್ರಾರ್ಥನಾ ಸಭೆ ಮತ್ತು ಇಫ್ತಾರ್ ಕೂಟವನ್ನು ಆಯೋಜಿಸಿದೆ. ಚರ್ಚ್ ನಾಯಕರೂ ಸಹ ಸೌಹಾರ್ದತೆಗಾಗಿ ಮುಸ್ಲಿಮರ ಜೊತೆಗೂಡಿ ಉಪವಾಸ ಮಾಡಿದ್ದಾರೆ.

ಪಿಕಾಡಲಿಯ ಸೈಂಟ್ ಜೇಮ್ಸ್ ಚರ್ಚ್ ಸಿಟಿ ಸರ್ಕಲ್ ಜೊತೆಗೂಡಿ 400ಕ್ಕೂ ಹೆಚ್ಚು ಮುಸ್ಲಿಮರನ್ನು ಮತ್ತು ಇತರ ಧರ್ಮೀಯರನ್ನು ತಮ್ಮ ಅಬ್ಬರದ ಇಫ್ತಾರ್ ಭೋಜನಕ್ಕಾಗಿ ಆಹ್ವಾನಿಸಿದೆ. ಲಂಡನ್‌ನ ಹೊಸ ಮೇಯರ್ ಸಾದಿಕ್ ಖಾನ್ ಈ ಕಾರ್ಯಕ್ರಮದ ಅತಿಥಿಯಾಗಿದ್ದರು.

ಯುರೋಪ್ ಒಕ್ಕೂಟದಿಂದ ಹೊರ ಬರುವ ಬ್ರಿಟನ್ ನಿರ್ಧಾರದ ಕುರಿತು ಬಿಬಿಸಿಯಲ್ಲಿ ರಾಷ್ಟ್ರೀಯ ಚರ್ಚೆಯ ಸಂದರ್ಭದಲ್ಲಿ ಉಪವಾಸ ತ್ಯಜಿಸಿ ಪ್ರಸಿದ್ಧರಾಗಿದ್ದ ಸಾದಿಕ್ ಖಾನ್ ಈ ಸಂದರ್ಭದಲ್ಲಿ ಮಾತನಾಡಿದರು. ಇತರ ಧರ್ಮೀಯರ ಜೊತೆಗೆ ಸಂಬಂಧ ಬೆಳೆಸಲು ಮುಂದಾಗುವುದು ಮುಸ್ಲಿಮರ ಕರ್ತವ್ಯವಾಗಿದೆ. ಆ ಮೂಲಕ ಇಸ್ಲಾಂ ಬಗ್ಗೆ ಇರುವ ಕೆಟ್ಟ ಭಾವನೆಯನ್ನು ಹೋಗಲಾಡಿಸಿ ಇಸ್ಲಾಂನ ನಿಜವಾದ ಸಕಾರಾತ್ಮಕ ಚಹರೆಯನ್ನು ಮುಂದಿಡಬೇಕು. ಮುಸ್ಲಿಮರು, ಹಿಂದೂಗಳು, ಯಹೂದಿಗಳು, ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ಇತರ ಧರ್ಮೀಯರು ಜೊತೆಗೂಡಿ ಲಂಡನ್ ನಲ್ಲಿ ಬಡತನ ಮತ್ತು ಅಸಮಾನತೆ ಹೋಗಲಾಡಿಸಲು ಕೆಲಸ ಮಾಡಬೇಕು. ಎಲ್ಲಾ ಧರ್ಮೀಯರು ಮಾನವತೆಗಾಗಿ ಹಾಗೂ ಬಡತನ ಮತ್ತು ಅನ್ಯಾಯದ ನಿವಾರಣೆಗೆ ಪ್ರಯತ್ನಿಸಬೇಕು ಎಂದು ಸಾದಿಕ್ ಹೇಳಿದರು.

ಲಂಡನ್ ಚರ್ಚ್ ಹೀಗೆ ಸೌಹಾರ್ದಕ್ಕಾಗಿ ಇಫ್ತಾರ್ ಕೂಟ ಆಯೋಜಿಸಿರುವುದು, ತಮ್ಮನ್ನು ಮತ್ತು ತಮ್ಮ ಸಮುದಾಯವನ್ನು ಆಹ್ವಾನಿಸಿರುವುದು ಮತ್ತು ಅನಾಥರಿಗಾಗಿ ನೆರವಾಗಲು ಅನುದಾನ ಸಂಗ್ರಹಿಸಿರುವ ಬಗ್ಗೆ ಹೆಮ್ಮೆ ಎನಿಸಿದೆ ಎಂದು ಸಾದಿಕ್ ಹೇಳಿದ್ದಾರೆ. ಲಂಡನ್‌ನ ಹಾರ್ಲೇ ಸ್ಟ್ರೀಟ್ ಕ್ಲಿನಿಕ್‌ನಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪ್ರಧಾನಿ ನವಾಝ್ ಷರೀಫರಿಗೆ ಈ ಸಂದರ್ಭದಲ್ಲಿ ಸಾದಿಕ್ ಖಾನ್ ಶುಭ ಹಾರೈಸಿದರು. ಲಂಡನ್‌ನಲ್ಲಿ ಅತ್ಯುತ್ತಮ ಆರೋಗ್ಯ ವ್ಯವಸ್ಥೆಯಿದೆ ಮತ್ತು ಜಾಗತಿಕವಾಗಿ ಜನರು ಲಂಡನ್‌ಗೆ ಚಿಕಿತ್ಸೆಗಾಗಿ ಅದೇ ಕಾರಣದಿಂದ ಬರುತ್ತಿದ್ದಾರೆ. ರಾಷ್ಟ್ರೀಯ ಆರೋಗ್ಯ ಸೇವೆಗೆ ಸಮನಾದುದು ಜಾಗತಿಕವಾಗಿ ಎಲ್ಲೂ ಸಿಗುವುದಿಲ್ಲ. ಅಮೆರಿಕ, ಪಾಕಿಸ್ತಾನ ಮತ್ತು ಇತರ ರಾಷ್ಟ್ರಗಳು ಆರೋಗ್ಯ ಸೇವೆಯ ಸೌಲಭ್ಯಗಳನ್ನು ನೀಡುವಲ್ಲಿ ಹಿಂದೆ ಬಿದ್ದಿವೆ ಎಂದು ಖಾನ್ ಹೇಳಿದ್ದಾರೆ.

ಚರ್ಚ್ ಆಯೋಜಿಸಿರುವ ಇಫ್ತಾರ್ ಕೂಟದಲ್ಲಿ ಹಿಂದೂಗಳು ಮತ್ತು ಇತರ ಧರ್ಮೀಯರು ಜೊತೆಗೂಡಿ ಉಪವಾಸ ತೊರೆದಿದ್ದಾರೆ. ಅಂತಹ ಯೋಜನೆಗಳನ್ನು ಹೆಚ್ಚು ಹಾಕಿಕೊಳ್ಳಬೇಕು. ಇಸ್ಲಾಂ ಕುರಿತು ಕೆಟ್ಟ ಭಾವನೆಯೇ ಜನರಲ್ಲಿ ತುಂಬಿರುವುದು ದುರದೃಷ್ಟ. ಅದನ್ನು ನಾವು ಸರಿಪಡಿಸಬೇಕಿದೆ. ಎಲ್ಲಾ ಸಮುದಾಯಗಳ ಜೊತೆಗೂಡಿ ಆ ನಿಟ್ಟಿನಲ್ಲಿ ಕೆಲಸ ಮಾಡಬಹುದು. ನಾವು ಜಾಗತೀಕರಣದ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಹೀಗಾಗಿ ಎಲ್ಲಾ ಧರ್ಮಗಳು ಮತ್ತು ಚಿಂತನಾಶಾಲೆಗಳು ಒಂದಾಗಿ ಕೆಲಸ ಮಾಡಬೇಕು. ಸಹೋದರ ಭಾವವನ್ನು ಪ್ರಾಯೋಜಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ನಾನು ಎಲ್ಲಾ ಲಂಡನ್ ವಾಸಿಗಳಿಗೆ ಮೇಯರ್. ಸೈಂಟ್ ಜೇಮ್ಸ್ ಚರ್ಚ್ ಇಫ್ತಾರ್ ಕೂಟ ಆಯೋಜಿಸಿ ಹೊಸ ಹೆಜ್ಜೆ ಇಟ್ಟಿದೆ. ರೆವರೆಂಡ್ ಲ್ಯೂಸಿ ವಿಂಕೆಟ್ ಇಂದು ಸೌಹಾರ್ದಕ್ಕಾಗಿ ಉಪವಾಸವನ್ನೂ ಮಾಡಿದ್ದಾರೆ. ಅದು ನಮಗೆಲ್ಲಾ ದೊಡ್ಡ ಉದಾಹರಣೆ. ಮುಸ್ಲಿಮರು ಅಲ್ಪಸಂಖ್ಯಾತರಾಗಿರುವ ಬ್ರಿಟನಿನಲ್ಲಿ ಇಂತಹ ಬೆಳವಣಿಗೆ ಆಹ್ಲಾದಕರ. ಮುಸ್ಲಿಮರು ಬಹುಸಂಖ್ಯಾತರೇ ಅಥವಾ ಅಲ್ಪಸಂಖ್ಯಾತರೇ ಎನ್ನುವುದು ಮುಖ್ಯವಲ್ಲ. ಪರಸ್ಪರ ಧರ್ಮಗಳ ನಡುವೆ ಸಹೋದರ ಬಾಳ್ವೆ ಅಗತ್ಯ. ಲಂಡನ್ ಜಾಗತಿಕವಾಗಿ ದೊಡ್ಡ ನಗರವಾದರೂ ಈಗಲೂ ವಸತಿಹೀನರು ಇರುವುದು ನಾಚಿಕೆಗೇಡು. ಈ ಅಸಮಾನತೆಯನ್ನು ನಿವಾರಿಸಬೇಕು. ಅಗ್ಗದ ಬೆಲೆಯಲ್ಲಿ ಮನೆಗಳನ್ನು ಒದಗಿಸಲು ಹೊಸ ಯೋಜನೆಗಳು ಬರಬೇಕು. ಎಲ್ಲರಿಗೂ ಉದ್ಯೋಗ ಭದ್ರತೆ ಸಿಗಬೇಕು ಎಂದೂ ಅವರು ಹೇಳಿದರು.

ಇಫ್ತಾರ್ ಕೂಟವನ್ನು ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಸಹಬಾಳ್ವೆಗಾಗಿ ಆಯೋಜಿಸಿದ್ದಾಗಿ ರೆವರೆಂಡ್ ಲ್ಯೂಸಿ ವಿಂಕೆಟ್ ತಿಳಿಸಿದರು. ರಮಝಾನ್ ಸಂದರ್ಭದಲ್ಲಿ ಸಮುದಾಯಗಳನ್ನು ಹತ್ತಿರಕ್ಕೆ ತಂದು ನಮ್ಮ ಸಮಾನ ಮೌಲ್ಯಗಳನ್ನು ಹಂಚಿಕೊಳ್ಳುವ ಪ್ರಯತ್ನ ಎಂದರು. ಮುಸ್ಲಿಮರ ಜೊತೆಗೂಡಿ ಉಪವಾಸ ಮಾಡುವುದು ದೊಡ್ಡ ಅನುಭವ. ದಿನದ 19 ಗಂಟೆಗಳ ಕಾಲ ಉಪವಾಸದಲ್ಲಿ ಮಾಡುವ ತ್ಯಾಗವನ್ನು ತಿಳಿದುಕೊಳ್ಳಲು ಇದರಿಂದ ಸಾಧ್ಯವಾಗಿದೆ ಎಂದೂ ಅವರು ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X