ದೈವಸ್ಥಾನದಿಂದ ಲಕ್ಷಾಂತರ ವೌಲ್ಯದ ಸೊತ್ತು ಕಳವು
ಶಿರ್ವ, ಜೂ.30: ಕುರ್ಕಾಲಿನ ಕೃಷ್ಣಯ್ಯ ಶೆಟ್ಟಿ ಕುಟುಂಬಸ್ಥರ ದೈವಸ್ಥಾನಕ್ಕೆ ಬುಧವಾರದಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ದೈವಸ್ಥಾನದ ಮುಖ್ಯದ್ವಾರದ ಚಿಲಕವನ್ನು ಮುರಿದು ಒಳನುಗ್ಗಿದ ಕಳ್ಳರು ಸಾರಾಳ ಧೂಮಾವತಿ ದೈವದ ಬೆಳ್ಳಿ ಮುಖವಾಡ, ಎದೆಕಟ್ಟು, 2 ಕಡ್ಸಲೆ ಹಾಗೂ ದೈವದ ಬಂಗಾರದ ತಗಡಿನ ನಾಲಗೆ, ಮೂಲ ಮೈಸಂದಾಯ ದೈವದ ಬೆಳ್ಳಿಯ ಕಡ್ಸಲೆ, ಮದ್ದಾಳೆ ಜುಮಾದಿ ದೈವದ ಬೆಳ್ಳಿಯ ಕಡ್ಸಲೆ, ಮರ್ಲು ಜುಮಾದಿ ದೈವದ ಬೆಳ್ಳಿಯ ಮುಖವಾಡ, 2 ಬೆಳ್ಳಿಯ ಕಡ್ಸಲೆ, ಪಂಜುರ್ಲಿ ದೈವದ ಬೆಳ್ಳಿಯ ಮುಖವಾಡ, ಬೆಳ್ಳಿಯ ಕಡ್ಸಲೆ, ಬೈದರ್ಕಳ ದೈವದ 2 ಬೆಳ್ಳಿಯ ಹೂಜಿಗಳನ್ನು ಕಳವುಗೈದಿದ್ದಾರೆ.
ಕಳವಾದ ಸೊತ್ತುಗಳ ಒಟ್ಟು ವೌಲ್ಯ ಸುಮಾರು 2,48,600 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story