ಇಂದಿನ ಕಾರ್ಯಕ್ರಮ
*ಪತ್ರಿಕಾ ದಿನಾಚರಣೆ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪ್ರೆಸ್ಕ್ಲಬ್ಗಳ ಜಂಟಿ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ. ಸಮಯ: ಬೆಳಗ್ಗೆ 10ರಿಂದ. ಸ್ಥಳ: ಐಎಂಎ ಭವನ, ನಾಯರ್ಕೆರೆ, ಬ್ರಹ್ಮಗಿರಿ ಉಡುಪಿ. *ಹಲಸಿನ ಹಬ್ಬ: ಪರ್ಯಾಯ ಪೇಜಾವರ ಮಠ, ಕೃಷಿ ಮತ್ತು ತೋಟಗಾರಿಕಾ ವಿವಿ ಶಿವಮೊಗ್ಗ, ಸಾಮಾಜಿಕ ಉದ್ಯಮಶೀಲತಾ ಕೇಂದ್ರ ಮಣಿಪಾಲ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಹಲಸಿನ ಹಬ್ಬ ಉದ್ಘಾಟನೆ ಬಳಿಕ ವಿಚಾರ ಗೋಷ್ಠಿ ಹಾಗೂ ಹಲಸಿನ ವೀಡಿಯೊ ಚಿತ್ರ ಪ್ರದರ್ಶನ. ಸಮಯ: ಬೆಳಗ್ಗೆ 10:30ರಿಂದ ಸಂಜೆ 4:30ರವರೆಗೆ. ಸ್ಥಳ: ಶ್ರೀಕೃಷ್ಣ ಮಠದ ರಾಜಾಂಗಣ, ಉಡುಪಿ.
*ನೂತನ ಕಟ್ಟಡ ಉದ್ಘಾಟನೆ: ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಅನುದಾನದಿಂದ ನಿರ್ಮಿಸಲಾದ ಆರು ನೂತನ ತರಗತಿ ಕೊಠಡಿಗಳ ಉದ್ಘಾಟನೆ ಸಚಿವ ಪ್ರಮೋದ್ ಮಧ್ವರಾಜ್ರಿಂದ. ಸಮಯ: ಬೆಳಗ್ಗೆ 10:30ಕ್ಕೆ. ಸ್ಥಳ: ವಳಕಾಡು ಸರಕಾರಿ ಪ್ರೌಢ ಶಾಲೆ ಸಭಾಂಗಣ, ಉಡುಪಿ.
*ರೋಗವಾಹಕ ಆಶ್ರಿತ ರೋಗಗಳ ವಿರೋಧಿ ಮಾಸಾ ಚರಣೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂ ತ್ರಣ ಅಧಿಕಾರಿ ಕಚೇರಿ, ರೋಟರಿ ಕ್ಲಬ್ಗಳ ಸಂಯುಕ್ತ ಆಶ್ರಯದಲ್ಲಿ ರೋಗವಾಹಕ ಆಶ್ರಿತ ರೋಗಗಳ ವಿರೋಧಿ ಮಾಸಾಚರಣೆ. ಸಮಯ: ಬೆಳಗ್ಗೆ 10ಕ್ಕೆ. ಸ್ಥಳ: ಪುರಭವನ, ಅಜ್ಜರಕಾಡು ಉಡುಪಿ.
*ಸಚಿವರಿಗೆ ಅಭಿನಂದನೆ: ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಉಡುಪಿ ಆಶ್ರಯದಲ್ಲಿ ಸಂಸ್ಥೆಯ ಅಧ್ಯಕ್ಷ, ಸಚಿವ ಪ್ರಮೋದ್ ಮಧ್ವರಾಜ್ಗೆ ಅಭಿನಂದನೆ. ಸಮಯ: ಬೆಳಗ್ಗೆ 9:15ಕ್ಕೆ. ಸ್ಥಳ: ಅಜ್ಜರಕಾಡು ಒಳಾಂಗಣ ಕ್ರೀಡಾಂಗಣ, ಉಡುಪಿ.
*ಶ್ರೀಕೃಷ್ಣ ಯಕ್ಷ ಅಷ್ಟಾಹ: ಪರ್ಯಾಯ ಶ್ರೀಪೇಜಾವರ ಅಧೋಕ್ಷಜ ಮಠದ ಆಶ್ರಯದಲ್ಲಿ ಧಾರೇಶ್ವರ ಯಕ್ಷ ಬಳಗ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದಿರುವ ‘ಶ್ರೀಕೃಷ್ಣ ಯಕ್ಷ ಅಷ್ಟಾಹ’ದಲ್ಲಿ ಯಕ್ಷಗಾನ ಪೂತನಿ ಸಂಹಾರ-ಕಂಸ ವಧೆ. ಸಮಯ: ಸಂಜೆ 7ರಿಂದ. ಸ್ಥಳ: ಶ್ರೀಕೃಷ್ಣ ಮಠದ ರಾಜಾಂಗಣ, ಉಡುಪಿ.