Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕೆಲಸಕ್ಕೆ ಪ್ರಾಮಾಣಿಕವಾಗಿರಿ, ಬಾಸ್‌ನ...

ಕೆಲಸಕ್ಕೆ ಪ್ರಾಮಾಣಿಕವಾಗಿರಿ, ಬಾಸ್‌ನ ಗುಲಾಮರಾಗಬೇಡಿ

ಇವುಗಳನ್ನು ನಿಮ್ಮ ಮೇಲಿನವರಿಗೆ ಹೇಳಬೇಡಿ

ವಾರ್ತಾಭಾರತಿವಾರ್ತಾಭಾರತಿ1 July 2016 10:06 AM IST
share
ಕೆಲಸಕ್ಕೆ ಪ್ರಾಮಾಣಿಕವಾಗಿರಿ, ಬಾಸ್‌ನ ಗುಲಾಮರಾಗಬೇಡಿ

ಬಾಸ್ ಜೊತೆಗೆ ಸ್ನೇಹಮಯ ಸಂಬಂಧ ಹೊಂದಿದ್ದೂ ವೃತ್ತಿಪರವಾಗಿ ಅಂತರ ಕಾಯ್ದುಕೊಳ್ಳುವುದು ಸಂಕೀರ್ಣ ವಿಷಯವಾಗುತ್ತದೆ. ಮುಖ್ಯವಾಗಿ ಬಾಸ್ ಸ್ವಲ್ಪ ಮಜಾ ಸ್ವಭಾವದವರಾಗಿದ್ದು ಪ್ರಾಮಾಣಿಕವಾದ ವೈಯಕ್ತಿಕ ಸಂಭಾಷಣೆಯನ್ನು ಮಾಡುವ ಮತ್ತು ಜೋಕ್ ಮಾಡುವ ಸ್ವಭಾವದವರಾಗಿದ್ದರೆ ಇನ್ನೂ ಕಷ್ಟವಾಗುತ್ತದೆ.ಆದರೆ ನೀವೆಷ್ಟೇ ಸ್ನೇಹಮಯವಾಗಿದ್ದರೂ ಅವರು ನಿಮ್ಮ ಬಾಸ್ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಲೇಬೇಕು ಮತ್ತು ಆ ಗೌರವವನ್ನು ಅವರಿಗೆ ಕೊಡಲೇಬೇಕು. ವೃತ್ತಿಪರ ಮತ್ತು ವೈಯಕ್ತಿಕ ಎರಡೂ ಸಮೀಕರಣಗಳೂ ಉಲ್ಟಾ ಹೊಡೆಯದಂತೆ ಗಮನಹರಿಸಬೇಕು. ಬಾಸ್ ಜತೆಗೆ ಸಂಬಂಧ ಕಾಯ್ದುಕೊಳ್ಳುವಾಗ ಈ ಐದು ವಿಷಯಗಳತ್ತ ಗಮನಹರಿಸಬೇಕು.
ನಿಮ್ಮ ಖಾಸಗಿ ಜೀವನ ನಿಮ್ಮದಾಗಿರಲಿ
ನಿಮ್ಮ ಖಾಸಗಿ ಜೀವನದ ಬಗ್ಗೆ ಬಾಸ್ ಜೊತೆಗೆ ಹೆಚ್ಚು ವಿವರಣೆ ಕೊಡಬೇಡಿ. ಖಾಸಗಿ ಬದುಕನ್ನು ಸ್ವಂತಕ್ಕೆ ಇಟ್ಟುಕೊಳ್ಳಬೇಕು. ಆರಂಭದಲ್ಲಿ ಹೆಚ್ಚು ನಷ್ಟವೆನಿಸದೆ ಇರುವುದು ನಂತರ ಅಹಿತಕರವಾಗಿ ಪರಿಣಮಿಸಬಹುದು. ಉದಾಹರಣೆಗೆ ನಿಮ್ಮ ಬಾಸ್ ಅದೇ ಖಾಸಗಿ ಸಮಸ್ಯೆಯನ್ನು ಮತ್ತೊಬ್ಬ ಸಹೋದ್ಯೋಗಿ ಜತೆಗೆ ಚರ್ಚಿಸಬಹುದು. ನಿಮಗೆ ಅದು ಹಿಡಿಸದೆ ಇರಬಹುದು. ಆದರೆ ಬಾಸ್ ಆಗಿರುವ ಕಾರಣ ಅವರನ್ನು ಏನೂ ಹೇಳುವ ಹಾಗಿರುವುದಿಲ್ಲ.
ಎಲ್ಲಾ ಅಭಿಪ್ರಾಯ ಮುಂದಿಡಬೇಡಿ
ಕಾರ್ಯಪರಿಸರದ ಅಭಿಪ್ರಾಯವನ್ನು ಮ್ಯಾನೇಜರ್ ಮುಂದೆ ಇಡುವಾಗ ಏನು ಹೇಳಬೇಕು ಮತ್ತು ಏನು ಹೇಳಬಾರದು ಎಂದು ಗಮನಿಸಬೇಕು. ಹಿರಿಯರನ್ನು ಮುಖ ನೋಡಿ ಅಂದಾಜಿಸಬೇಡಿ. ಪರಿಸ್ಥಿತಿಯನ್ನು ಗಮನಿಸಿ. ಕೆಲವೊಮ್ಮೆ ಇಷ್ಟವಾಗದಿದ್ದರೆ ಟೀಕೆಗಳೂ ಬರಬಹುದು. ಅಂತಹವನ್ನು ಬಾಸ್ ಜೊತೆಗೆ ಹಂಚಿಕೊಳ್ಳಲು ಅವರು ಬಯಸದೆ ಇರಬಹುದು.
ನೇರವಾದ ಸಂಬಂಧ ಬೇಡ
ಮ್ಯಾನೇಜರುಗಳೂ ಮನುಷ್ಯರು. ಎಲ್ಲವನ್ನೂ ನೇರವಾಗಿ ಹೇಳುವುದು ಉತ್ತಮವಲ್ಲ. ಸ್ವಲ್ಪ ಪರೋಕ್ಷವಾಗಿ ವಿಷಯ ಮುಂದಿಡಬೇಕಾಗುತ್ತದೆ. ಶಬ್ದಗಳನ್ನು ಜಾಗರೂಕವಾಗಿ ಆಡಿ. ಉದ್ಯೋಗಿಗೆ ನೇರವಾಗಿ ತಾರತಮ್ಯ ಮಾಡುತ್ತಿದ್ದೀಯ ಎಂದು ಹೇಳಲು ಹೋಗಬೇಡಿ.
ನಿಮ್ಮೆಲ್ಲ ಸಾಮರ್ಥ್ಯ ಖಾಲಿ ಮಾಡಬೇಡಿ
ನಿಮ್ಮ ಪ್ರತಿಭೆ ಸಾಬೀತುಮಾಡುವ ಮಹತ್ವಾಕಾಂಕ್ಷೆ ನಿಮಗೆ ಇರಬಹುದು. ಆದರೆ ಧೀರ್ಘಕಾಲೀನ ಗುರಿ ಮತ್ತು ಉದ್ದೇಶಗಳಿರಲಿ. ನಿಧಾನವಾಗಿ ನಿಮ್ಮ ಕೌಶಲ್ಯವನ್ನು ಮುಂದಿಡಿ. ಕೆಲವೊಮ್ಮೆ ನಿಮಗೇನು ಬೇಕೆಂಬುದೇ ನಿಮಗೆ ತಿಳಿಯದೆ ಇರಬಹುದು. ಎಲ್ಲವನ್ನೂ ಮೊದಲೇ ಹೇಳಿ ಮತ್ತೆ ಬದಲಿಸಬೇಕೆಂದಾಗ ಕಷ್ಟವಾಗಬಹುದು. ವೃತ್ತಿಯಲ್ಲಿ ಒಂದೊಂದೇ ಹೆಜ್ಜೆ ಇಟ್ಟು ಜಾಗರೂಕವಾಗಿ ಮುಂದೆ ಸಾಗಿ.
ಸಹೋದ್ಯೋಗಿಗಳ ಜೊತೆಗೆ ಸೌಹಾರ್ದವಾಗಿರಿ
ನಿಮ್ಮ ಸಹೋದ್ಯೋಗಿಗಳು ವಿಶ್ವಾಸವಿಟ್ಟು ಕೆಲವು ವಿಷಯಗಳನ್ನು ಹೇಳಿರಬಹುದು. ಅಂತಹ ಸಂಬಂಧ ಮತ್ತು ಸಂಭಾಷಣೆಗೆ ಗೌರವ ಕೊಡಿ. ನಿಮ್ಮ ಉದ್ಯೋಗಿ ಹೇಳಿದ್ದೆಲ್ಲವನ್ನೂ ಮುಂದಿಡಬೇಕಾಗಿಲ್ಲ. ಇಂತಹ ಸಂದರ್ಭದಲ್ಲಿ ನೈತಿಕವಾಗಿ ನೋಡಬೇಕೇ ವಿನಾ ವೃತ್ತಿಪರವಾಗಿಯಲ್ಲ.

ಕೃಪೆ:indianexpress.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X