Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಪುನರ್ಜನ್ಮ ಸಾಧ್ಯವೇ ಎಂದು ತಿಳಿಯಲು...

ಪುನರ್ಜನ್ಮ ಸಾಧ್ಯವೇ ಎಂದು ತಿಳಿಯಲು ಟೆಕ್ಸಾಸ್‌ನಲ್ಲಿ ಬೃಹತ್ ಶವಾಗಾರ

50,000 ಮೃತರಿಗೆ ಇಲ್ಲಿ ಅವಕಾಶ !

ವಾರ್ತಾಭಾರತಿವಾರ್ತಾಭಾರತಿ1 July 2016 12:40 PM IST
share
ಪುನರ್ಜನ್ಮ ಸಾಧ್ಯವೇ ಎಂದು ತಿಳಿಯಲು ಟೆಕ್ಸಾಸ್‌ನಲ್ಲಿ ಬೃಹತ್ ಶವಾಗಾರ

ಟೆಕ್ಸಾಸ್,ಜುಲೈ 1: ಮನುಷ್ಯ ಏನೆಲ್ಲ ಸಂಶೋಧನೆಗಳನ್ನು ಹಾಗೂ ಸಾಧನೆಗಳನ್ನು ಮಾಡಿದ್ದರೂ ಸಾವನ್ನು ಗೆಲ್ಲುವುದು ಅವನಿಂದ ಆಗಿಲ್ಲ. ಆದರೆ ಈ ಉದ್ದೇಶದಲ್ಲಿ ಆತನಿಂದ ಆಯಸ್ಸನ್ನು ಗರಿಷ್ಠ ಹೆಚ್ಚಿಸಲಿಕ್ಕಾಗಿ ಉನ್ನತ ಚಿಕಿತ್ಸೆ ಮತ್ತು ಮದ್ದುಗಳನ್ನು ಕಂಡು ಹುಡುಕಲು ಸಾಧ್ಯವಾಗಿದೆ. ಈಗ ಇದೋ ಪುನರ್ಜನ್ಮ ಸಾಧ್ಯವೇ ಎಂದು ತಿಳಿಯಲು ಟೆಕ್ಸಾಸ್‌ನಲ್ಲಿ ಬೃಹತ್ ಶವಾಗಾರ ಬರಲಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಮನುಷ್ಯನ ಪುನರುಜ್ಜೀವೀಕರಣಕ್ಕಾಗಿ 50,000 ಮನುಷ್ಯ ಮೃತದೇಹಗಳನ್ನು ಈ ಶವಾಗಾರದ ಫ್ರೀಝರ್‌ನಲ್ಲಿಟ್ಟು ಜೋಪಾನ ಮಾಡಲಿದ್ದು ಭವಿಷ್ಯದಲ್ಲಿ ಪ್ರಾಣವನ್ನು ಮತ್ತೆ ಪಡೆಯುವ ಸಂಶೋಧನೆಯಲ್ಲಿ ವೈದ್ಯಕೀಯ ಶಾಸ್ತ್ರ ಯಶಸ್ವಿಯಾದರೆ ಅದರ ಮೂಲಕ ಮರು ಜೀವ ಪಡೆದು ಬದುಕಲು ಬಯಸುವವರ ಮೃತದೇಹವನ್ನು ಇಲ್ಲಿ ಕಾದಿರಿಸಲಾಗುತ್ತದೆ.

   ಹಲವಾರು ವರ್ಷಗಳ ಚಿಂತನೆಗಳ ಮೂಲಕ ಇದೀಗ ಮೋರ್ಚರಿಗಾಗಿ ಅಗತ್ಯವಿರುವ ನಿರ್ಮಾಣ ಕಾಮಗಾರಿ ಈಗ ಟೆಕ್ಸಾಸ್‌ನ ಟೈಂಶಿಪ್ ಬಿಲ್ಡಿಂಗ್‌ನಲ್ಲಿ ಆರಂಭವಾಗಿದೆ. ಇಲ್ಲಿ ಕೇವಲ ಶವಾಗಾರವೊಂದನ್ನು ಮಾತ್ರ ಕಟ್ಟುವುದಲ್ಲ,ಬದಲಾಗಿ ಇದು ಜಗತ್ತಿನಲ್ಲಿ ಅತಿದೊಡ್ಡ ಎಕ್ಸ್ಟನ್ಶನ್ ರಿಸರ್ಚ್ ಕ್ರೈಯೋಫ್ರೀಸರವೇಶನ್ ಸೆಂಟರ್ ಕೂಡಾ ಆಗಿರುತ್ತದೆ. ಪ್ರಸಿದ್ಧ ಆರ್ಕಿಟೆಕ್ಟ್ ಸ್ಟೀಫನ್ ಲಾಲೆಂಟೈನ್ ಇದನ್ನು ವಿನ್ಯಾಸ ಮಾಡಿದ್ದಾರೆ. ಜೊತೆಗೆ ಶವಗಳನ್ನು ಇರಿಸುವ ಜಾಗ ಮಾತ್ರ ಇದಾಗಿರುವುದಿಲ್ಲ. ಬದಲಾಗಿ ಕೋಶಗಳು, ಟಿಷ್ಯುಗಳು, ಅವಯವಗಳನ್ನು ಮರುಬಳಕೆಗೆಗಾಗಿ ಅವುಗಳನ್ನು ಸಂಗ್ರಹಿಸುವ ಸೌಕರ್ಯ ಕೂಡಾ ಇಲ್ಲಿರಲಿದೆ. ಇದು ಭವಿಷ್ಯದ ಪೀಳಿಗೆಗಿರುವ ಪ್ರಾಜೆಕ್ಟ್ ಆಗಿದೆ ಎಂದು ವಾಲೆಂಟೈನ್ ಹೇಳುತ್ತಿದ್ದಾರೆ. ಸೆಂಟರ್ ಫಾರ್ ಇಮ್ಮೋರ್ಟಾಲಿಟಿ ಎಂಬ ಹೆಸರಿನಲ್ಲಿ ಟೆಕ್ಸಾಸ್‌ನಲ್ಲಿ ಇದು ಎದ್ದು ನಿಲ್ಲಲಿದೆ. ಫ್ರೀಝಿಂಗ್‌ನ ಹೆಚ್ಚಿನ ತಂತ್ರಜ್ಞಾನದ ವ್ಯವಸ್ಥೆಯನ್ನು ಇಲ್ಲಿ ಮಾಡಿಡಲಾಗುತ್ತದೆ. ಪ್ರಾಕೃತಿಕ ದುರಂತಗಳು ಭಯೋತ್ಪಾದಕರ ದಾಳಿಗಳಿಗೆ ನಾಶವಾಗದ ರೀತಿಯಲ್ಲಿ ಕಟ್ಟಡ ರಚನೆ ಇರಲಿದೆ. ಭೂವೈಜ್ಞಾನಿಕವಾಗಿ ಅತ್ಯಂತ ಸುರಕ್ಷಿತ ಪ್ರದೇಶದಲ್ಲಿ ಶವಾಗಾರ ಸಿದ್ಧಗೊಳ್ಳುತ್ತಿದೆ.

ಇಂತಹ ಫ್ರೀಝರ್ ಮಾಡಿರಿಸಿದ್ದ ಮೊಲದ ಮೆದುಳನ್ನು ಪುನರುಜ್ಜೀವೀಕರಿಸುವ ಪರೀಕ್ಷೆಯಲ್ಲಿ ವಿಜ್ಞಾನಿಗಳು ಇತ್ತೀಚೆಗೆ ಹೆಚ್ಚು ಮುಂದುವರಿದಿದ್ದು ಇದು ಈ ಕ್ಷೇತ್ರದಲ್ಲಿ ಬಹು ನಿರೀಕ್ಷೆಯನ್ನು ಸೃಷ್ಟಿಸಿದೆ ಎನ್ನಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X