Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಈ ಮನೆಯಲ್ಲಿ ಪ್ರತಿದಿನ 4 ಸಾವಿರ ಜನರಿಗೆ...

ಈ ಮನೆಯಲ್ಲಿ ಪ್ರತಿದಿನ 4 ಸಾವಿರ ಜನರಿಗೆ ಉಚಿತ ಬಿರಿಯಾನಿ!

ರಂಝಾನ್ ವಿಶೇಷ

ವಾರ್ತಾಭಾರತಿವಾರ್ತಾಭಾರತಿ1 July 2016 9:34 PM IST
share
ಈ ಮನೆಯಲ್ಲಿ ಪ್ರತಿದಿನ 4 ಸಾವಿರ ಜನರಿಗೆ ಉಚಿತ ಬಿರಿಯಾನಿ!

ಅಬುದಾಬಿ: ಸಂಜೆ 4 ಗಂಟೆಯಾಗುತ್ತಲೇ ಅಬುದಾಬಿ ಕೊರ್ನಿಷೆ ಬಳಿ ಮನೆ ನಂಬರ್ 59ರ ಮುಕ್ತ ಪ್ರದೇಶದಲ್ಲಿ ಜನರು ಗುಂಪುಗೂಡುತ್ತಾರೆ. ಕಟ್ಟಡದ ಒಳಗಿನಿಂದ ವ್ಯಕ್ತಿಯೊಬ್ಬ ಹೊರಗೆ ಬಂದು ಸರತಿ ಸಾಲಿನಲ್ಲಿ ನಿಂತ ಜನರ ಕಡೆಗೆ ಒಮ್ಮೆ ನೋಡುತ್ತಾನೆ. ಕೆಲವೇ ಸೆಕೆಂಡುಗಳಲ್ಲಿ ಬಿಸಿ ಬಿರಿಯಾನಿಗಳು ಮೇಜಿನ ಮೇಲೆ ಸಿದ್ಧವಾಗುತ್ತದೆ. ಭಾರತೀಯ ಮಸಾಲೆಗಳ ವಾಸನೆ ಗಾಳಿಯಲ್ಲಿ ಹರಿದಾಡುತ್ತದೆ. ಸಹಾಯಕರ ತಂಡ ಸರತಿಯಲ್ಲಿ ಪ್ಲಾಸ್ಟಿಕ್ ಬಾಕ್ಸ್, ಲೋಹದ ಪಾತ್ರೆಗಳನ್ನು ಹಿಡಿದು ನಿಂತ ವ್ಯಕ್ತಿಗಳಿಗೆ ರಂಝಾನ್ ವಿಶೇಷ ಬಿರಿಯಾನಿಯನ್ನು ಕೊಡುತ್ತಾರೆ.
ಮನೆಯ ಅಡುಗೆ ಮುಖ್ಯಸ್ಥ ಅಬ್ದುಲ್ ಖಾದರ್ ಹೇಳುವ ಪ್ರಕಾರ ರಂಝಾನ್ ಸಂದರ್ಭ ಇಲ್ಲಿ ಪ್ರತೀ ದಿನ 4000 ಮಂದಿಗೆ ಬಿರಿಯಾನಿ ಸಿದ್ಧವಾಗುತ್ತದೆ. ಮನೆಯಲ್ಲಿ ರಂಝಾನ್‌ಗೆ ಇದು ನಿತ್ಯದ ಸೇವೆ. ಮನೆ ಮಾಲೀಕ ಈ ಕೆಲಸವನ್ನು ಕಳೆದ 10 ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ ಎನ್ನುತ್ತಾರೆ ಕಳೆದ 40 ವರ್ಷದಲ್ಲಿ ಮನೆಯ ಅಡುಗೆಯ ನೇತೃತ್ವ ವಹಿಸಿರುವ ಕೇರಳ ಮೂಲದ ಅಬ್ದುಲ್ ಖಾದರ್. ವಿಶೇಷವಾಗಿ ರಂಝಾನಿಗೆ ಸಿದ್ಧವಾದ ಮನೆಯ ಅಡುಗೆ ಮನೆಯಲ್ಲಿ 25 ಅಡುಗೆಯವರು ಮತ್ತು ಸಹಾಯಕರು ಬಿರಿಯಾನಿ ಸಿದ್ಧಪಡಿಸುತ್ತಾರೆ.

ಅಡುಗೆಮನೆಯನ್ನು ನಿಭಾಯಿಸುವಲ್ಲಿ ಅಬ್ದುಲ್ ಖಾದರ್‌ಗೆ ಅವರ ಪತ್ನಿ ಸಹಾಯ ಮಾಡುತ್ತಾರೆ. ಪ್ರತೀ ನಿತ್ಯ ಇಲ್ಲಿ 450 ಕೇಜಿ ಅಕ್ಕಿ, 400 ಕೇಜಿ ಮಾಂಸ ಮತ್ತು 100 ಕೇಜಿ ತರಕಾರಿಗಳು ಬಳಕೆಯಾಗುತ್ತವೆ. ನಾವು ಬೆಳಗಿನ ಜಾವ 5 ಗಂಟೆಗೇ ಕೆಲಸ ಆರಂಭಿಸುತ್ತೇವೆ. ತರಕಾರಿ ತುಂಡರಿಸುವುದು, ಮಾಂಸ ಶುದ್ಧಮಾಡಿ ಮ್ಯಾರಿನೇಟ್ ಮಾಡುವುದು ಹೀಗೆ ತಂಡಗಳಲ್ಲಿ ಕೆಲಸ ಮಾಡುತ್ತೇವೆ. ಸಂಜೆ 3 ಗಂಟೆಗೆ ಬಿರಿಯಾನಿ ಸಿದ್ಧವಾಗುತ್ತದೆ ಎನ್ನುತ್ತಾರೆ ಖಾದರ್. ಮನೆಯ ಅಡುಗೆಯಾತ ಸಾದಿಕ್ ಉಸ್ತಾದ್ ಪ್ರಕಾರ ಇದೊಂದು ಸಾಂಘಿಕ ಕೆಲಸ ಮತ್ತು ಎಲ್ಲರಿಗೂ ಆಹಾರ ತಯಾರಿಸುವುದರಲ್ಲಿ ಖುಷಿ ಇದೆ. ಈಗ ವಿಶೇಷ ಬಿರಿಯಾನಿ ಸಿದ್ಧಪಡಿಸುವುದು ನಮ್ಮ ರಂಝಾನ್ ಉಪವಾಸದಷ್ಟೇ ಮುಖ್ಯ ಭಾಗವಾಗಿದೆ ಎನ್ನುವ ಉಸ್ತಾದ್ ಈ ಮನೆಯಲ್ಲಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಈ ಉಚಿತ ಬಿರಿಯಾನಿ ಬಹುದೊಡ್ಡ ಪ್ರಚಾರ ಪಡೆದುಕೊಂಡಿದೆ. ನನ್ನ ಸ್ನೇಹಿತನೊಬ್ಬ ಹೇಳಿದ ಮೇಲೆ ಇಲ್ಲಿಗೆ ನಿತ್ಯವೂ ಬರುತ್ತೇನೆ ಎನ್ನುತ್ತಾರೆ ಪಾಕಿಸ್ತಾನಿ ಸೇಲ್ಸ್‌ಮ್ಯಾನ್ ಮೊಹಮ್ಮದ್ ಹನೀಫ್. ಭಾರತೀಯ ಚಾಲಕ ನೌಶದ್ ಕೂಡ ಇಲ್ಲಿಗೆ ನಿತ್ಯವೂ ಬಿರಿಯಾನಿ ಪಾರ್ಸಲ್ ಕೊಂಡು ಹೋಗಲು ಬರುತ್ತಾರೆ. ನಾನು ನಗರಕ್ಕೆ ಹೊಸಬ. ಸ್ನೇಹಿತರೊಬ್ಬರು ಇಲ್ಲಿನ ಬಿರಿಯಾನಿ ಪರಿಚಯಿಸಿದರು. ನಾನು ಕೂಡ ಇದಕ್ಕೆ ಹೊಂದಿಕೊಂಡಿರುವೆ. ಕೆಲಸ ಮುಗಿಸಿ ಮನೆಗೆ ಹೋಗಿ ಅಡುಗೆ ಮಾಡಲು ಸಮಯವಿರುವುದಿಲ್ಲ. ಹೀಗಾಗಿ ಇಲ್ಲೇ ಪ್ಯಾಕ್ ಮಾಡಿಕೊಳ್ಳುತ್ತೇನೆ ಎನ್ನುತ್ತಾರೆ ನೌಶದ್.
ಪಾಕಿಸ್ತಾನ ಮೂಲದ ರಝವುಲ್ಲ ಅಬುದಾಬಿಯ್ಲಲಿ ಉದ್ಯೋಗ ಅರಸುತ್ತಿದ್ದಾರೆ. ರಂಝಾನ್ ಸಂದರ್ಭ ಇಲ್ಲೇ ಬಿರಿಯಾನಿ ಸೇವಿಸುತ್ತಾರೆ. ನನ್ನ ಬಳಿ ಹಣ ಅಥವಾ ಉದ್ಯೋಗ ಎರಡೂ ಇಲ್ಲ. ಹೀಗಾಗಿ ಬಿರಿಯಾನಿ ಬಹಳ ಉಪಯೋಗವಾಗಿದೆ ಎನ್ನುತ್ತಾರೆ ರಝವುಲ್ಲಾ. ಇಲ್ಲಿಂದ ಬಿರಿಯಾನಿ ತೆಗೆದುಕೊಂಡು ಹೋಗುವವರು ಅದರ ರುಚಿಗಾಗಿಯೂ ಮತ್ತೆ ಮತ್ತೆ ಬರುತ್ತಾರೆ. ಇತರ ಹಲವು ಬಿರಿಯಾನಿಗಿಂತ ಇಲ್ಲಿನದು ರುಚಿಯಾಗಿದೆ ಎನ್ನುತ್ತಾರೆ ಬಾಂಗ್ಲಾದೇಶ ಮೂಲದ ಉದ್ಯಾನ ಮಾಲಿ ಅಮಿನುಲ್ಲಾ. ಮನೆ ಮಾಲೀಕ ಹೇಳುವ ಪ್ರಕಾರ ಅವರಿಗೆ ಪ್ರಚಾರದ ಅಗತ್ಯವಿಲ್ಲ. ಸೇವೆಗಾಗಿ ಈ ಕೆಲಸ ಮಾಡುತ್ತಿದ್ದಾರೆ. ಇದು ನಮ್ಮ ಧರ್ಮ. ನಮ್ಮ ನಾಯಕರಾದ ಶೇಖ್ ಝಾಯೆದ ಮೊದಲಾದವರು ಇದನ್ನು ಕಲಿಸಿದ್ದಾರೆ. ಸಹಾಯ ಮಾಡುವುದು ನಮ್ಮ ಕರ್ತವ್ಯ. ಇಲ್ಲಿ ಯಾವ ಧರ್ಮದವರು ಬೇಕಾದರೂ ಬಂದು ಆಹಾರ ಪಡೆಯಬಹುದು. ಧರ್ಮದ ಭೇದ ಭಾವ ನಾವು ಮಾಡುವುದಿಲ್ಲ ಎನ್ನುತ್ತಾರೆ ಅಬುದಾಬಿ ಸರ್ಕಾರದಲ್ಲಿ ಹಿರಿಯ ಅಧಿಕಾರಿಯಾಗಿರುವ ಮನೆ ಮಾಲೀಕ.


ಕೃಪೆ: http://gulfnews.com/xpress

share
ವಾರ್ತಾಭಾರತಿ
ವಾರ್ತಾಭಾರತಿ
Next Story
X