ತಂದೆಯಿಂದ ನದಿಗೆಸೆಯಲ್ಪಟ್ಟ 6ವರ್ಷದ ಹೆಣ್ಣುಮಗು 11 ಗಂಟೆ ಬಳಿಕ ಪಾರು!
![ತಂದೆಯಿಂದ ನದಿಗೆಸೆಯಲ್ಪಟ್ಟ 6ವರ್ಷದ ಹೆಣ್ಣುಮಗು 11 ಗಂಟೆ ಬಳಿಕ ಪಾರು! ತಂದೆಯಿಂದ ನದಿಗೆಸೆಯಲ್ಪಟ್ಟ 6ವರ್ಷದ ಹೆಣ್ಣುಮಗು 11 ಗಂಟೆ ಬಳಿಕ ಪಾರು!](https://www.varthabharati.in/sites/default/files/images/articles/2016/07/2/Girl-rescued.jpg)
ಮುಂಬೈ, ಜುಲೈ 2: ಹೊಳೆಯಕುರುಚಲು ಗಿಡಗಳನ್ನು ಹಿಡಿದು ನಿಂತ ಮಗುವಿನ ಕೂಗನ್ನು ಸಮೀಪದಲ್ಲಿ ಸುತ್ತಾಡುತ್ತಿದ್ದ ಕಟ್ಟಡ ನಿರ್ಮಾಣ ಕಂಪೆನಿಯ ಭದ್ರತಾ ಉದ್ಯೋಗಿ ಕೇಳಿಸಿಕೊಂಡದ್ದರಿಂದ ಮಗು ಪವಾಡ ಸದೃಶ್ಯವಾಗಿ ಪಾರಾಗಿದೆ. ಶೂ ಖರೀದಿಸಿಕೊಡುವೆ ಎಂದು ಹೇಳಿದ ಅಪ್ಪನೊಂದಿಗೆ ಬಂದ ಏಕತಾ ಎಂಬ ಆರು ವಯಸ್ಸಿನ ಮಗುವನ್ನು ನಿರ್ದಯಿ ಅಪ್ಪ ನದಿಗೆಸೆದು ಸುಮ್ಮನೆ ಹೋಗಿದ್ದ. ಹೊಳೆಯಲ್ಲಿದ್ದ ಗಿಡಗಳನ್ನು ಹಿಡಿದು ನಿಂತ ಮಗು ಅಳುತ್ತಿತ್ತು. ಇದನ್ನು ಸಮೀಪದಲ್ಲಿ ಕಟ್ಟಡ ನಿರ್ಮಿಸುತ್ತಿದ್ದ ಕಂಪೆನಿಯ ನೌಕರ ಕೇಳಿಸಿಕೊಂಡಿದ. ಆತ ಕೂಡಲೇ ಕಾರ್ಯಪ್ರವೃತ್ತನಾಗಿ ಅಗ್ನಿಶಾಮಕದಳವನ್ನು ಕರೆಯಿಸಿದ್ದರಿಂದ ಮಗುವನ್ನು ಅವರು ದಡಕ್ಕೆ ತಂದರು. ಬದಲಾಪುರ ವಾಲ್ವಿ ಸೇತುವೆಯಿಂದ ತಂದೆ ತುಳಸೀರಾಮ್ ಸಿಯಾನಿ ಮತ್ತು ಗೆಳೆಯರು ಸೇರಿ ಬುಧವಾರ ರಾತ್ರಿ ಮಗುವನ್ನು ಉಲ್ಲಾಸ್ ನದಿಗೆ ಎಸೆದಿದ್ದರು.
ಮರುದಿವಸ ಆರುಗಂಟೆಗೆ ಹೊಳೆಬದಿಯಲ್ಲಿ ತಿರುಗಾಡಿದ ಕಟ್ಟಡ ಕಂಪೆನಿಯ ನೌಕರ ರಮೇಶ್ಗೆ ಮಗುವಿನ ಅಳು ನದಿಯಿಂದ ಕೇಳಿಸುತ್ತಿತ್ತು. ಇಪ್ಪತ್ತು ನಿಮಿಷದೊಳಗೆ ಬಂದ ಅಗ್ನಿಶಾಮಕದಳದ ಜವಾನರು ಮಗುವನ್ನುರಕ್ಷಿಸಿ ನದಿಯಿಂದ ಮೇಲೆ ತಂದು ಶ್ಲಾಘನೆಗೆ ಪಾತ್ರರಾಗಿದ್ದಾರೆ. ಹೊಳೆ 25 ಅಡಿ ಆಳವಿದ್ದು ನಲ್ವತ್ತು ಅಡಿ ಎತ್ತರದ ಸೇತುವೆಯಿಂದ ಕೆಳಗೆ ಬಂದ ಅಗ್ನಿಶಾಮಕ ದಳದ ಜವಾನರು ಏರ್ ಟ್ಯೂಬ್ನ ಸಹಾಯದಿಂದ ಮಗುವನ್ನು ರಕ್ಷಿಸಿದ್ದಾರೆ. ಏಕತಾ ನಾಪತ್ತೆಯಾಗಿದ್ದಾಳೆ ಎಂದು ಅವಳ ಅಮ್ಮ ಪೊಲೀಸ್ ಗೆ ದೂರು ನೀಡಿದ್ದರು. ತುಳಸೀರಾಮ್ ಮತ್ತು ಗೆಳೆಯನನ್ನುಪೊಲೀಸರು ಹುಡುಕುತ್ತಿದ್ದಾರೆ.