Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಯುರೋ ಕಪ್ ;ವೇಲ್ಸ್‌ಗೆ ಐತಿಹಾಸಿಕ ಜಯ

ಯುರೋ ಕಪ್ ;ವೇಲ್ಸ್‌ಗೆ ಐತಿಹಾಸಿಕ ಜಯ

ಬೆಲ್ಜಿಯಂಗೆ ಆಘಾತ

ವಾರ್ತಾಭಾರತಿವಾರ್ತಾಭಾರತಿ2 July 2016 11:33 PM IST
share
ಯುರೋ  ಕಪ್ ;ವೇಲ್ಸ್‌ಗೆ ಐತಿಹಾಸಿಕ ಜಯ

  ಲಿಲ್ಲೆ, ಜು.2: ವೇಲ್ಸ್ ತಂಡ ಇಲ್ಲಿ ನಡೆದ ಯುರೋ ಕಪ್ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಬೆಲ್ಜಿಯಂ ವಿರುದ್ಧ 3-1 ಅಂತರದಲ್ಲಿ ಜಯ ಗಳಿಸುವುದರೊಂದಿಗೆ ಮೊದಲ ಬಾರಿ ಸೆಮಿಫೈನಲ್ ತಲುಪಿದೆ.
   ಐತಿಹಾಸಿಕ ಸಾಧನೆ ಮಾಡಿರುವ ವೇಲ್ಸ್ ತಂಡ ಸೆಮಿ ಫೈನಲ್‌ನಲ್ಲಿ ಪೋರ್ಚುಗಲ್‌ನ್ನು ಎದುರಿಸಲಿದೆ.
 ಸ್ಟಾರ್ ಆಟಗಾರ ಗೆರಾತ್ ಬೇಲ್ ಅವರು ಯುರೋ ಕಪ್‌ನಲ್ಲಿ ತನ್ನ ತಂಡ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಜೀವಂತವಾಗಿರಿಸಿದ್ದಾರೆ.
ವೇಲ್ಸ್ ತಂಡದ ವಿಲಿಯಮ್ಸನ್(30 ನಿ.), ರಾಬಿನ್ಸನ್ ಕಾನು(55ನಿ.) ಮತ್ತು ವೊಕೆಸ್(85 ನಿ.) ಗೋಲು ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ವೇಲ್ಸ್ ಮೊದಲ ಬಾರಿ ಸೆಮಿಫೈನಲ್ ತಲುಪಿದೆ.
 ಬೆಲ್ಜಿಯಂ ಪರ ರಾಡ್ಜಾ ನೈನ್‌ಗ್ಗೊಲಾನ್ (13ನಿ.) ಏಕೈಕ ಗೋಲು ದಾಖಲಿಸಿದರು.
ಬೆಲ್ಜಿಯಂ ತಂಡದ ನೈನ್ ಗೊಲ್ಗಾನ್ ಆಟದ 13ನೆ ನಿಮಿಷದಲ್ಲಿ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಬಳಿಕ ವೇಲ್ಸ್ ತಂಡದ ವಿಲಿಯಮ್ಸನ್ ಹೆಡರ್ ಮೂಲಕ ತಂಡದ ಖಾತೆಗೆ ಗೋಲು ಜಮೆ ಮಾಡಿ 1-1 ಸಮಬಲ ಸಾಧಿಸಲು ನೆರವಾದರು.
1958ರಲ್ಲಿ ಬ್ರೆಝಿಲ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ವೇಲ್ಸ್ ತಂಡ ಕ್ವಾರ್ಟರ್ ಫೈನಲ್ ತಲುಪಿದ್ದು ವೇಲ್ಸ್ ತಂಡದ ದೊಡ್ಡ ಸಾಧನೆಯಾಗಿತ್ತು. ಆ ಬಳಿಕ ಇದಿಗ ಮೊದಲ ಸಾಧನೆ ಮಾಡಿದರು.
58 ವರ್ಷಗಳ ಇತಿಹಾಸ: ವೆಲ್ಸ್ ತಂಡ ಯಾವುದೇ ಮೇಜರ್ ಟೂರ್ನಮೆಂಟ್‌ನಿಂದ ದೂರ ಸರಿದು 58 ವರ್ಷವಾಗಿದೆ. ಈ ಅನಿರೀಕ್ಷಿತ ಸಾಧನೆ ಮಾಡಿದೆ.
 1958ರಲ್ಲಿ ಹಂಗೇರಿ ವಿರುದ್ಧ ವಿಶ್ವಕಪ್‌ನಲಲಿ 2-1 ಗೆಲುವು, 1991ರಲ್ಲಿ ವಿಶ್ವ ಚಾಂಪಿಯನ್ ಜರ್ಮನಿ ಮತ್ತು 2002ರಲ್ಲಿ ಇಟಲಿ ವಿರುದ್ಧ ಜಯ ಗಳಿಸಿತ್ತು.
2016ರ ತಂಡದ ಯಶಸ್ಸಿನಲ್ಲಿ ಗೆರಾತ್ ಬೇಲ್ ದೊಡ್ಡ ಕೊಡುಗೆ ನೀಡಿದ್ದಾರೆ. ರಿಯಲ್ ಮ್ಯಾಡ್ರಿಡ್‌ನ ಫಾರ್ವರ್ಡ್ ಆಟಗಾರ ಬೇಲ್ ಯೋಜನೆ ಫಲ ನೀಡಿದೆ. ಇಂದಿನ ಪಂದ್ಯದಲ್ಲಿ ತಂಡದ ನಾಯಕ ವಿಲಿಯಮ್ಸನ್ ಅನನ್ಯ ಸಾಧನೆ ಮಾಡಿದ್ದಾರೆ.
 ಆ್ಯರೊನ್ ರಮ್‌ಸೆಯ್ ವೇಲ್ಸ್ ಪರ ಗೋಲು ದಾಖಲಿಸಿದ್ದಾರೆ.ಆದರೆ ಅರ್ಸೆನಲ್‌ನ ಮಿಡ್ ಫೀಲ್ಡರ್ ಬೆನ್ ಡೇವಿಸ್‌ಗೆ ಟೂರ್ನಮೆಂಟ್‌ನಲ್ಲಿ ಎರಡನೆ ಬಾರಿ ಹಳದಿ ಕಾರ್ಡ್‌ನ ದರ್ಶನವಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಸೆಮಿ ಫೈನಲ್‌ನಲ್ಲಿ ಆಡುವ ಅವಕಾಶ ಇಲ್ಲದಾಗಿದೆ.
ಬೇಲ್ -ರೊನಾಲ್ಡೊ : ಸೆಮಿಫೈನಲ್‌ನಲ್ಲಿ ವೇಲ್ಸ್‌ನ ಬೇಲ್ ಮತ್ತು ಮತ್ತು ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ನಡುವಿನ ಹಣಾಹಣಿಯಾಗಿ ಗಮನ ಸೆಳೆದಿದೆ.
90 ನಿಮಿಷಗಳ ಆಟದಲ್ಲಿ ಬೇಲ್ ಮತ್ತು ರೊನಾಲ್ಡೊ ತಮ್ಮ ತಂಡದ ಗೆಲುವಿಗೆ ಯಾವ ರೀತಿ ಶ್ರಮಿಸುತ್ತಾರೆಂದು ಕಾದು ನೋಡಬೇಕಾಗಿದೆ.
ಅಂಕಿ -ಅಂಶ
 *ವೇಲ್ಸ್ ತಂಡ 2016ರ ಯುರೋ ಕಪ್‌ನಲ್ಲಿ 10 ಗೋಲು ಗಳಿಸಿದೆ. ಇದಕ್ಕೆ ಮೊದಲು ಬ್ರಿಟಿಷ್ ತಂಡ ವಿಶ್ವಕಪ್‌ನಲ್ಲಿ 1966ರಲ್ಲಿ 11 ಗೋಲು ಗಳಿಸಿದೆ.
*ಸ್ಯಾಮ್‌ವೋಕ್ಸ್ ವೇಲ್ಸ್ ಪರ 11 ಪಂದ್ಯಗಳಲ್ಲಿ ಮೊದಲ ಗೋಲು ದಾಖಲಿಸಿದರು.

  ‘‘ ನಾವು ಇಲ್ಲಿ ಎಂಜಾಯ್ ಮಾಡಲು ಬಂದಿಲ್ಲ. ಸ್ಪರ್ಧಿಸಲು ಬಂದಿದ್ದೇವೆ.ನಾವು ಸೈನಿಕರಂತೆ ಹೋರಾಡಿ ಗೆದ್ದೆವು :ಕ್ರಿಸ್ ಕೋಲ್ಮೆನ್ , ವೇಲ್ಸ್ ಮ್ಯಾನೇಜರ್
‘‘ ಯುರೋಪಿಯನ್ ಚಾಂಪಿಯನ್‌ಶಿಪ್ ಬಳಿಕ ತನ್ನ ಮುಂದಿನ ನಿರ್ಧಾರ ಕೈಗೊಳ್ಳುವೆ ಒಂದು ಪಂದ್ಯದ ನಂತರ ನಾನು ನಿರ್ಧಾರ ಮಾಡುವುದಿಲ್ಲ :ಮಾರ್ಕ್ ವಿಲ್ಮೊಟ್ಸ್, ಬೆಲ್ಜಿಯಂ ಕೋಚ್.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X