Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ನೋಡಲು ಆಕರ್ಷಕ, ಮೋಜಿಗೆ ಹೇಳಿ ಮಾಡಿಸಿದ...

ನೋಡಲು ಆಕರ್ಷಕ, ಮೋಜಿಗೆ ಹೇಳಿ ಮಾಡಿಸಿದ ತಾಣ ‘ನಾಗರಮಡಿ’

ಮಳೆಗಾಲದಲ್ಲಿ ಹುಟಿ್ಟಕೊಳು್ಳವ ಜಲಪಾತಗಳು

ವಾರ್ತಾಭಾರತಿವಾರ್ತಾಭಾರತಿ3 July 2016 11:15 PM IST
share
ನೋಡಲು ಆಕರ್ಷಕ, ಮೋಜಿಗೆ ಹೇಳಿ ಮಾಡಿಸಿದ ತಾಣ ‘ನಾಗರಮಡಿ’

<ಶ್ರೀನಿವಾಸ ಬಾಡಕರ್

ಕಾರವಾರ, ಜು.3: ಮಳೆಗಾಲ ಆರಂಭವಾದರೆ ಅನೇಕ ಕಡೆಗಳಲ್ಲಿ ಬೆಟ್ಟ ಗುಡ್ಡಗಳ ತಪ್ಪಲಿನಿಂದ ಅಲ್ಲಲ್ಲಿ ಚಿಕ್ಕ-ಪುಟ್ಟ ಜಲಪಾತಗಳು ಹರಿಯುತ್ತವೆೆ. ನೋಡಲು ಆಕರ್ಷಕವಾಗಿರುವ ಇಂತಹ ಜಲಪಾತಗಳಲ್ಲಿ ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದ ಬಳಿ ಇರುವ ನಾಗರಮಡಿ ಎನ್ನುವ ಜಲಪಾತವು ಒಂದಾಗಿದ್ದು ಇದು ವಿಶಿಷ್ಟ ಹಾಗೂ ವಿಭಿನ್ನತೆಯ ರೂಪವಾಗಿದೆ. ಈ ಜಲಾಶಯಗಳು ಕಾಡಿನ ಮಧ್ಯದಲ್ಲಿದ್ದರೂ ನೋಡುಗರಿಗೆ ಆಕರ್ಷನೀಯವಾಗಿದೆ. ಪ್ರತಿನಿತ್ಯ ತಂಡೋಪತಂಡವಾಗಿ ನೂರಾರು ಜನರು ಆಗಮಿಸುತ್ತಿದ್ದು. ಪ್ರಕೃತಿಯ ನಡುವಿನ ಜಲಾಶಯಗಳ ಸವಿಯನ್ನು ಸವಿಯುತ್ತಾ ಮೋಜಿನಲ್ಲಿ ಮಗ್ನರಾಗುತ್ತಾರೆ.

ಕಾಡು ಹತ್ತಿ ಇಳಿಯಬೇಕು: 

ಈ ಜಲಾಶಯದ ಸೌಂದರ್ಯ ಸವಿಯಬೇಕಾದರೆ ತಾಲೂಕಿನ ಚೆಂಡಿಯಾಗೆ ತೆರಳಿ, ಚೆಂಡಿಯಾ ರಸ್ತೆಯಿಂದ ಸುಮಾರು 2 ಕಿ.ಮೀ. ಚಲಿಸಬೇಕು. ಅಲ್ಲಿಂದ ಕಾಲು ಹಾದಿಯಲ್ಲಿ ಸುಮಾರು ಒಂದು ಕಿ.ಮೀ. ನಷ್ಟು ಕಾನನದ ಮಧ್ಯದಿಂದ ಕಾಡು ದಾರಿ ಮೂಲಕ ಹತ್ತಿಳಿಯಬೇಕು. ಅಲ್ಲಿಯೇ ಇರುವ ಬಂಡೆಗಲ್ಲುಗಳ ಮೇಲಿಂದ ನಾಗರಮಡಿ ಎನ್ನುವ ಕಿರು ಜಲಪಾತ ಸುಮಾರು 30 ಅಡಿ ಎತ್ತರದಿಂದ ನೀರು ಧುಮುಕುತ್ತದೆ. ನೋಡಲು ಮನಮೋಹಕವಾಗಿರುವ ಈ ಕಿರು ಜಲಪಾತದಲ್ಲಿ ಸಾರ್ವಜನಿಕರು ಜಲಕ್ರೀಡೆಯಲ್ಲಿ ಮಗ್ನರಾಗಿರುತ್ತಾರೆ. 35 ಅಡಿ ಗಾತ್ರದ ಬಂಡೆಗಲ್ಲು:

ನಾಗರಮಡಿಯಲ್ಲಿ ಇನ್ನೊಂದು ವಿಶಿಷ್ಟತೆ ಇದೆ. ಅದೇ ಸುಮಾರು 35 ಅಡಿಯಷ್ಟು ಎತ್ತರ ಇರುವ ಬೃಹತ್ ಗಾತ್ರದ ಬಂಡೆಗಲ್ಲು. ಅದರ ಮಧ್ಯದಲ್ಲಿ ಇರುವ ಗುಹೆಯಿಂದ ಕಾನನದಿಂದ ಹರಿದು ಬರುವ ಜಲಧಾರೆ ಪ್ರಪಾತಕ್ಕೆ ಧುಮುಕುವುದು ನೋಡುವುದೇ ಒಂದು ರೀತಿಯ ರೋಮಾಂಚನಕಾರಿ ಅನುಭವ ನೀಡುತ್ತದೆ. ರಜಾ ಅವಧಿಯಲ್ಲಿ ನಾಗರಮಡಿಯ ಅನುಭವ ಪಡೆಯಲು ಸಾಕಷ್ಟು ಜನ ಉತ್ಸುಕತೆಯಿಂದ ಕಾಯುತ್ತಿರುತ್ತಾರೆ. ಏನಿದು ನಾಗರಮಡಿ:

ಪ್ರದೇಶದಲ್ಲಿ ನಾಗರಮಡಿ ಎಂದು ನಾಮಾಂಕಿತವಾಗಲು ಒಂದು ಇತಿಹಾಸವೇ ಇದೆ ಎನ್ನುತ್ತಾರೆ ಸ್ಥಳೀಯರು. ಸಾಕಷ್ಟು ವರ್ಷಗಳ ಹಿಂದೆ ಈ ಸ್ಥಳದಲ್ಲಿ ನಾಗರ ಹಾವುಗಳು ಈಜಿ ಬಂದು ನೀರು ಕುಡಿಯಲು ಬರುತ್ತಿದ್ದವು ಎನ್ನುವುದು ಇತಿಹಾಸ. ಇಲ್ಲಿನ ಪ್ರದೇಶದಲ್ಲಿ ಇರುವ ಹೊಂಡಗಳಲ್ಲಿ ಒಂದು ಗುಹೆ ಇದೆ. ಆ ಗುಹೆಯಲ್ಲಿ ಇನ್ನೂ ಹಾವುಗಳ ವಾಸವಾಗಿವೆ ಎನ್ನುವುದು ಜನರ ನಂಬಿಕೆಯಾಗಿದೆ.

        ಇದರಿಂದಾಗಿ ನಾಗ ಎಂದರೆ ನಾಗರಹಾವು ಹಾಗೂ ಸ್ಥಳೀಯ ಭಾಷೆಯ ಪ್ರಕಾರ ಮಡಿ ಎಂದರೆ ಹೊಂಡ ಎಂದರ್ಥ. ಇದರಿಂದಾಗಿ ಈ ಸ್ಥಳಕ್ಕೆ ನಾಗರಮಡಿ ಎಂದು ನಾಮಾಂಕಿತವಾಯಿತು ಎನ್ನಲಾಗಿದೆ. ನಾಗರಮಡಿಯಲ್ಲಿರುವ ಬಂಡೆಕಲ್ಲುಗಳು ಸಹ ಜನರನ್ನು ಆಕರ್ಷಿಸುತ್ತವೆ. ಇದರ ಮಧ್ಯದಿಂದ ಹರಿಯುವ ಜಲಧಾರೆಗೆ ಭೇಟಿ ನೀಡುವ ಪ್ರತಿ ಪ್ರವಾಸಿಗರೂ ನಿರ್ಮಲ ನೀರಿನ ರಾಶಿಯಲ್ಲಿ ಜಲಕ್ರೀಡೆಯಲ್ಲಿ ತೊಡಗಿಕೊಳ್ಳುತ್ತಾರೆ. ರಜಾ ಅವಧಿಯಲ್ಲಿ ಸಾಕಷ್ಟು ಸಾರ್ವಜನಿಕರು ನಾಗರಮಡಿಗೆ ತೆರಳುತ್ತಾರೆ. ಸ್ಥಳೀಯ ಜನರು ಸೇರಿದಂತೆ ಕಾರವಾರ ತಾಲೂಕಿನ ವಿವಿಧ ಪ್ರದೇಶದಿಂದ ಹಾಗೂ ಸೀ ಬರ್ಡ್ ನೌಕಾನೆಲೆಯ ಸಿಬ್ಬಂದಿ, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ರಜೆಯ ಮಜಾವನ್ನು ಈ ಜಲಾಶಯದಲ್ಲಿ ಈಜುತ್ತಾ ದಿನ ಕಳೆಯುತ್ತಾರೆ. ಜಾಗರೂಕತೆ ಅಗತ್ಯ :

              ನಾಗರಮಡಿ ಮಳೆಗಾಲದಲ್ಲಿ ಹುಟ್ಟುವ ಚಿಕ್ಕ ಜಲಪಾತವಾಗಿದ್ದರೂ ಬೆಟ್ಟದ ಮೇಲಿಂದ ಹರಿಯುವ ನೀರು ಶಕ್ತಿಶಾಲಿ ಹಾಗೂ ರಭಸದಿಂದ ಹರಿಯುತ್ತದೆ. ಅಲ್ಲದೆ ನಾಗರಮಡಿಯಲ್ಲಿರುವ ಹೊಂಡವು ಅತೀ ಆಳವಾಗಿದ್ದು ಈಜಲು ಮೇಲಿನಿಂದ ಜಿಗಿಯುವ ವೇಳೆಯಲ್ಲಿ ಅತೀ ಜಾಗರೂಕತೆ ಆವಶ್ಯಕವಾಗಿದೆ. ಇದೇ ಸ್ಥಳದಲ್ಲಿ ಈಜಲು ತೆರಳಿದವರು ಮೃತಪಟ್ಟ ಘಟನೆಯೂ ನಡೆದಿವೆ. ಇದರಿಂದಾಗಿ ಜಾಗರೂಕತೆ ವಹಿಸಬೇಕಿದೆ. -ರವಿ ಗೌಡ, ಚಾರಣ ಪ್ರಿಯ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X