Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. *ಬಿಜೆಪಿಯಲ್ಲಿ ಭಿನ್ನಮತ ಇಲ್ಲ; ಇದ್ದರೂ...

*ಬಿಜೆಪಿಯಲ್ಲಿ ಭಿನ್ನಮತ ಇಲ್ಲ; ಇದ್ದರೂ ರಾಜ್ಯದ ಜನರಿಗಾಗಿ ಮರೆಯಬೇಕು.

ವಾರ್ತಾಭಾರತಿವಾರ್ತಾಭಾರತಿ3 July 2016 11:54 PM IST
share
*ಬಿಜೆಪಿಯಲ್ಲಿ ಭಿನ್ನಮತ ಇಲ್ಲ; ಇದ್ದರೂ ರಾಜ್ಯದ ಜನರಿಗಾಗಿ ಮರೆಯಬೇಕು.

 *ಬಿಜೆಪಿಯಲ್ಲಿ ಭಿನ್ನಮತ ಇಲ್ಲ; ಇದ್ದರೂ ರಾಜ್ಯದ ಜನರಿಗಾಗಿ ಮರೆಯಬೇಕು.

- ಶೋಭಾ ಕರಂದ್ಲಾಜೆ , ಸಂಸದೆ

  ಇದ್ದರೂ ಅಧಿಕಾರ ಪಡೆಯುವವರೆಗೆ ಮರೆಯಬೇಕು ಎಂದರೆ ಚೆನ್ನಾಗಿತ್ತು.

  ---------------------

ನಾವು ಭಿನ್ನರೂ ಅಲ್ಲ , ಅತೃಪ್ತರೂ ಅಲ್ಲ, ನಾವೇ ಪಕ್ಷ ನಿಷ್ಠರು.

- ಸಿ.ಟಿ. ರವಿ, ಶಾಸಕ

  ಅದರರ್ಥ ಯಡಿಯೂರಪ್ಪ ಪಕ್ಷ ನಿಷ್ಠರಲ್ಲ ಎಂದೇ?

   ---------------------

ಯೋಗ ಅಭ್ಯಸಿಸಲು ನೂತನ ವಿದ್ಯಾ ಸಂಸ್ಥೆಗಳನ್ನು ಆರಂಭಿಸಲಾಗುವುದು .

 - ಶ್ರೀಪಾದ್ ನಾಯಕ್, ಕೇಂದ್ರ ಸಚಿವ

ರಾಮ್‌ದೇವ್‌ರನ್ನು ಅದರ ಕುಲಪತಿ ಮಾಡುವ ಹುನ್ನಾರವೂ ಇರಬಹುದು.

  ---------------------

ಸಚಿವ ಸಂಪುಟ ಯಾರ ಸೊತ್ತೂ ಅಲ್ಲ.

- ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ

 ಅದು ಗೊತ್ತಾಗಬೇಕಾದರೆ ತಾವು ಸಚಿವ ಸ್ಥಾನದಿಂದ ಇಳಿಯಬೇಕಾಯಿತು.

---------------------

 ಆಸ್ತಿ ಮತ್ತು ಕಪ್ಪು ಹಣ ಘೋಷಿಸಿಕೊಂಡವರ ರಕ್ಷಣೆಯ ಹೊಣೆ ಸರಕಾರದ್ದು.

-ಅರುಣ್ ಜೇಟ್ಲಿ, ಕೇಂದ್ರ ಸಚಿವ

 ಘೋಷಿಸಿಕೊಳ್ಳದವರ ರಕ್ಷಣೆಯ ಹೊಣೆ ಹೊತ್ತವರಿಗೆ ಇದು ಕಷ್ಟವೇ?

  ---------------------

ಆರೆಸ್ಸೆಸ್ ಮುಸ್ಲಿಮರ ಓಲೈಕೆಗೆ ಕಸರತ್ತು ನಡೆಸುತ್ತಿದೆ.

-ಮನೀಶ್ ಕಯಾಂಡೆ, ಶಿವಸೇನೆ ನಾಯಕ

 ಬಕ್ರೀದ್ ಹಬ್ಬಕ್ಕೆ ಕುರಿಗಳನ್ನು ಹುಡುಕುತ್ತಿದೆಯಂತೆ.

  ---------------------

ಮೀಸಲಾತಿ ಸೌಲಭ್ಯ ಪಡೆಯಲು ದಲಿತರು ಮತಾಂತರಗೊಳ್ಳದೆ ಹಿಂದೂ ಧರ್ಮದಲ್ಲಿಯೇ ಮುಂದುವರಿಯಬೇಕು.

 -ಎಚ್. ಆಂಜನೇಯ, ಸಚಿವ ಅಂದರೆ ಅಸ್ಪಶ್ಯತೆಯನ್ನು ಸಹಿಸಿಕೊಳ್ಳಲೇ ಬೇಕೇ?

  ---------------------

ಮುಸ್ಲಿಂ ಆಗಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ.

-ಮೆಹಬೂಬಾ ಮುಫ್ತಿ , ಕಾಶ್ಮೆರ ಮುಖ್ಯಮಂತ್ರಿ

ಕಾಶ್ಮೀರದ ಎಲ್ಲ ಮುಸ್ಲಿಮರೂ ನಿಮ್ಮ ಕುರಿತಂತೆ ಹೀಗೆಯೇ ನಾಚಿಕೊಂಡಿದ್ದಾರೆ.

---------------------

  ಎಸ್.ಎಂ. ಕೃಷ್ಣ ಭಿನ್ನಮತೀಯ ನಾಯಕರಲ್ಲ.

-ಟಿ.ಬಿ ಜಯಚಂದ್ರ, ಸಚಿವ

 ಅವರದೇನಿದ್ದರೂ ಭಿನ್ನಮತವನ್ನು ಬಿತ್ತುವ ಕೆಲಸ ಅಷ್ಟೇ.

---------------------

 ಭಾರತವನ್ನು ಅಸ್ಥಿರಗೊಳಿಸಲು ಪಾಕ್ ಯತ್ನಿಸುತ್ತಿದೆ.

 - ರಾಜನಾಥ ಸಿಂಗ್, ಕೇಂದ್ರ ಸಚಿವ

ಮತ್ತೆ ಆರೆಸ್ಸೆಸ್, ಸಂಘಪರಿವಾರ, ಸನಾತನ ಸಂಸ್ಥೆಗಳು ಮಾಡುತ್ತಿರುವುದೇನು?

   ---------------------

ತುರ್ತು ಪರಿಸ್ಥಿತಿ ವೇಳೆ ಜೈಲಿನಲ್ಲಿದ್ದ ಪೈಕಿ ಶೇ.99ರಷ್ಟು ಜನ ಸಂಘ ಹಾಗೂ ಆರೆಸ್ಸೆಸ್‌ನವರು.

 -ಡಾ. ಮುರಳಿ ಮನೋಹರ ಜೋಷಿ, ಬಿಜೆಪಿ ನಾಯಕ

 ಸದ್ಯ ಜೈಲಿನಲ್ಲಿರಬೇಕಾದ ಆರೆಸ್ಸೆಸ್, ಬಿಜೆಪಿಯ ಹಲವು ನಾಯಕರು ದೇಶದ ಅತ್ಯುನ್ನತ ಹುದ್ದೆಯಲ್ಲಿರುವುದು ವಿಪರ್ಯಾಸ.

  ---------------------

ಪ್ರಜಾಪ್ರಭುತ್ವ ಬಲಿಷ್ಠ ಭಾರತಕ್ಕೆ ಅಡಿಗಲ್ಲಾಗಿದೆ.

-ನರೇಂದ್ರ ಮೋದಿ, ಪ್ರಧಾನಿ

 ಅಡಿಗಲ್ಲಿನ ಮೇಲೆ ನಿಮ್ಮ ಕಣ್ಣು ಬಿದ್ದಿದೆಯೇ?

---------------------

  ಸರಕಾರ ಜ್ಯೋತಿಷ್ಯ ನಿಷೇಧಕ್ಕೆ ಮುಂದಾಗಿರುವುದು ಸರಿಯಲ್ಲ.

-ವಿಶ್ವೇಶ ತೀರ್ಥ ಸ್ವಾಮೀಜಿ , ಪೇಜಾವರ ಮಠ

 ಜ್ಯೋತಿಷ್ಯದ ಜೊತೆಗೆ ನಿಮ್ಮ ಭವಿಷ್ಯ ತಳಕು ಹಾಕಿಕೊಂಡಿದೆಯೇ?

---------------------

  ಎಚ್.ಡಿ. ಕುಮಾರಸ್ವಾಮಿ ಎಲ್ಲರನ್ನೂ ನಂಬುತ್ತಾರೆ.

-ಬಸವರಾಜ ಹೊರಟ್ಟಿ, ವಿ.ಪ. ಸದಸ್ಯ

ದೇವೇಗೌಡರನ್ನೊಬ್ಬರನ್ನು ಬಿಟ್ಟು.

---------------------

  ಪಕ್ಷಕ್ಕೆ ದ್ರೋಹ ಮಾಡಿದವರನ್ನು ಪಕ್ಷದಲ್ಲಿ ಇರಲು ಬಿಡುವುದಿಲ್ಲ.

-ದೇವೇಗೌಡ ಮಾಜಿ ಪ್ರಧಾನಿ

 ತಮ್ಮನ್ನು ಹೊರ ಹಾಕಲು ಮಕ್ಕಳು ಗುಟ್ಟಾಗಿ ಯೋಜನೆ ರೂಪಿಸುತ್ತಿದ್ದಾರಂತೆ

---------------------

   ಸ್ಮಾರ್ಟ್ ಸಿಟಿ ಗ್ರಾಮ ಕೇಂದ್ರಿತ ಅಭಿವೃದ್ಧಿಯು ಗಾಂಧಿ ತತ್ವಕ್ಕೆ ವಿರುದ್ಧ.

 -ಅಣ್ಣಾ ಹಝಾರೆ, ಸಾಮಾಜಿಕ ಕಾರ್ಯಕರ್ತ ಗಾಂಧಿಗೂ ನಿಮಗೂ ಏನು ಸಂಬಂಧ?

  ---------------------

ಗವರ್ನರ್ ಹುದ್ದೆಗೆ 3 ವರ್ಷಗಳ ಅವಧಿ ಸಾಲದು.

 -ರಘುರಾಮ್ ರಾಜನ್, ಆರ್‌ಬಿಐ ಗವರ್ನರ್

 ಆರ್‌ಬಿಐ ಗವರ್ನರ್‌ಗೆ ವರುಷ, ಮೋದಿಗೆ ನಿಮಿಷ.

  ---------------------

ದಿಲ್ಲಿ ಸರಕಾರದ ಎಲ್ಲ ಇಲಾಖೆಗಳ ಜಾಹೀರಾತಿನ ಒಟ್ಟು ವೆಚ್ಚ ಪ್ರಧಾನಿ ಮೋದಿಯ ಬಟ್ಟೆಯ ಖರ್ಚಿಗಿಂತಲೂ ಕಡಿಮೆ .

-ಅರವಿಂದ್ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ

  ಅವರು ಬಟ್ಟೆ ಹಾಕಿಕೊಂಡು ಓಡಾಡುತ್ತಿದ್ದಾರಲ್ಲ, ಅದಕ್ಕೆ ಸಂತೋಷ ಪಡೋಣ.

---------------------

ನಾಯಕತ್ವ ಬದಲಾವಣೆ ನನ್ನ ಬೇಡಿಕೆಯಲ್ಲ.

 -ಖಮರುಲ್ ಇಸ್ಲಾಂ, ಮಾಜಿ ಸಚಿವ

  ಸಚಿವ ಸ್ಥಾನ ವಜಾ ತೀರ್ಮಾನದಲ್ಲಿ ಬದಲಾವಣೆ ಬೇಕು ಅಷ್ಟೇ.

---------------------

ಜೀವನ ಪೂರ್ತಿ ಸಿದ್ದರಾಮಯ್ಯರ ಮುಖ ನೋಡಲ್ಲ.

- ಶ್ರೆನಿವಾಸ ಪ್ರಸಾದ್, ಮಾಜಿ ಸಚಿವ

 ಅಂದರೆ ಸಾರ್ವಜನಿಕವಾಗಿ ಓಡಾಡುವುದನ್ನೇ ನಿಲ್ಲಿಸುತ್ತೀರಿ ಅಂತಾಯಿತು.

  ---------------------

ನನಗೆ ಅಬಕಾರಿ ಸಚಿವ ಎಂದು ಹೇಳಿಕೊಳ್ಳಲು ಮುಜುಗರವಾಗುತ್ತದೆ.

- ಎಚ್.ವೈ. ಮೇಟಿ, ಅಬಕಾರಿ ಸಚಿವ

  ಅಂಬರೀಷ್ ಅವರಿಗೆ ಈ ಖಾತೆ ಬೇಕೇ ಎಂದು ಕೇಳಿ ನೋಡಿ.

---------------------

ಬಿಜೆಪಿ ಯಾರ ಸ್ವತ್ತೂ ಅಲ್ಲ.

- ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ

 ಈ ಬಾರಿ ನೀವೆಲ್ಲ ಸೇರಿ ಬಿಜೆಪಿಯನ್ನು ಸೋಲಿಸಿ ಯಡಿಯೂರಪ್ಪರಿಗೆ ಪಾಠ ಕಲಿಸಿ.

  ---------------------

ಚುನಾವಣೆಯಲ್ಲಿ ಸ್ಪರ್ಧಿಸುವುದು ಎಂದರೆ ಮನೆ, ಮಠ ಹಾಳು ಮಾಡಿಕೊಂಡಂತೆ.

- ಕಾಗೋಡು ತಿಮ್ಮಪ್ಪ, ಸಚಿವ

 *ಶ್ರೀಸಾಮಾನ್ಯನ ಮೆ, ಮಠ ತಾನೆ. ನಿಮಗೇಕೆ ಚಿಂತೆ?

  

share
ವಾರ್ತಾಭಾರತಿ
ವಾರ್ತಾಭಾರತಿ
Next Story
X