ಐಎಎಸ್ ಬಡ್ತಿಗೆ ತನ್ನ ಪಿಎಸ್ ನ ಪತ್ನಿ, ಸಚಿವರ ಪುತ್ರಿಯ ಹೆಸರು ಸೂಚಿಸಿದ ಹರ್ಯಾಣ ಸಿಎಂ !
ಚಂಡೀಗಢ: ಕುತೂಹಲಕಾರಿ ವಿದ್ಯಮಾನವೊಂದರಲ್ಲಿ ಐಎಎಸ್ ನ ಒಂದು ಹುದ್ದೆಗಾಗಿ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಮ್ಮ ಸರಕಾರದ ಪ್ರಿನ್ಸಿಪಾಲ್ ಸೆಕ್ರಟರಿಯವರ ಪತ್ನಿ ಹಾಗೂ ರಾಜ್ಯ ಸಚಿವರೊಬ್ಬರ ಪುತ್ರಿಯ ಹೆಸರುಗಳನ್ನುತಾವು ಯುಪಿಎಸ್ಸಿಗೆ ಶಿಫಾರಸು ಮಾಡಿದ ಐದು ಮಂದಿಯ ಹೆಸರುಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ. ಈ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಹಕ್ಕು ಯುಪಿಎಸ್ಸಿಗೆ ಮಾತ್ರ ಇದೆ. ನಾನ್-ಹರ್ಯಾಣ ಸಿವಿಲ್ ಸರ್ವಿಸ್ ಅಧಿಕಾರಿಗಳ ಹುದ್ದೆಗಳಲ್ಲಿ ಒಂದು ಹುದ್ದೆಗೆ ಸರಕಾರ ಜನವರಿಯಲ್ಲಿ ಅರ್ಜಿ ಆಹ್ವಾನಿಸಿತ್ತು. ಈ ಹುದ್ದೆಗಳಿಗೆ ಹೆಸರುಗಳನ್ನು ರಾಜ್ಯ ಸರಕಾರ ಶಿಫಾರಸು ಮಾಡಬಹುದಾಗಿದೆ.
ಹರ್ಯಾಣ ಸರಕಾರ ಯುಪಿಎಸ್ಸಿಗೆ ನೀಡಿದ ಪಟ್ಟಿಯಲ್ಲಿಮುಖ್ಯಮಂತ್ರಿಯ ಪ್ರಿನ್ಸಿಪಾಲ್ ಸೆಕ್ರಟರಿ ಆರ್ ಕೆ ಖುಲ್ಲರ್ ಅವರ ಪತ್ನಿ, ಪ್ರಸ್ತುತ ಸ್ಟೇಟ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಎಂಡ್ ಫ್ಯಾಮಿಲಿ ವೆಲ್ಫೇರ್ಇದರ ನಿರ್ದೇಶಕಿಯಾಗಿರುವಡಾ. ಸೋನಿಯಾ ತ್ರಿಖಾಹಾಗೂಶಿಕ್ಷಣ ಸಚಿವ ರಾಮ್ ಬಿಲಾಸ್ ಶರ್ಮ ಆವರ ಪುತ್ರಿ, ಪ್ರಸ್ತುತ ಚಂಡೀಗಢದಲ್ಲಿರುವ ಎಂಎಲ್ಎ ಹಾಸ್ಟೆಲ್ ಡಿಸ್ಪೆನ್ಸರಿಯಲ್ಲಿ ಕಾರ್ಯನಿರ್ವಹಿಸುತ್ತಿರುವಡಾ. ಆಶಾ ಶರ್ಮ ಸೇರಿದ್ದಾರೆ. ಎಂಬಿಬಿಎಸ್ ಪದವೀಧರೆಯಾಗಿರುವ ಆಶಾ ಅವರಿಗೆ 20 ವರ್ಷಗಳ ಸೇವಾನುಭವವಿದೆ. ಅತ್ತ ಡಾ. ಸೋನಿಯಾ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯಲ್ಲಿ ಯೋಜನಾ ನಿರ್ದೇಶಕಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ರಾಜ್ಯ ಸರಕಾರ ಶಿಫಾರಸು ಮಾಡಿದ ಹೆಸರುಗಳಲ್ಲಿಹರ್ಯಾಣ ರಾಜಭವನದ ಹಿರಿಯ ವೈದ್ಯಕೀಯ ನಿರ್ದೇಶಕರಾಗಿರುವ ಡಾ. ರಾಕೇಶ್ ತಲವಾರ್ ಅವರ ಹೆಸರೂ ಸೇರಿದೆ.
ರಾಜ್ಯ ಸರಕಾರ ಜನವರಿ ತಿಂಗಳಲ್ಲಿಅರ್ಜಿ ಆಹ್ವಾನಿಸಿದ ನಂತರ ಒಟ್ಟು 16 ಮಂದಿ ಅರ್ಜಿ ಸಲ್ಲಿಸಿದ್ದು ಅವರಲ್ಲಿ ಐದು ಮಂದಿಯ ಹೆಸರುಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಈ ಐವರೂ ಯುಪಿಎಸ್ಸಿ ಎದುರು ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ.