ಅಮಾವಾಸ್ಯೆ ರಾತ್ರಿಯಲ್ಲಿ ಅರಳಿತು ಬ್ರಹ್ಮಕಮಲ

ಉಡುಪಿ, ಜು.5: ಪರ್ಕಳ ಅಚ್ಚುತನಗರ ಗ್ಯಾಟ್ಸನ್ ಕಾಲೋನಿಯಲ್ಲಿ ಮಹೇಶ್ ಎಂಬವರ ಮನೆಯ ಹೂವಿನ ಕುಂಡದಲ್ಲಿ ಜು.4ರಂದು ರಾತ್ರಿ ಸುಮಾರು ಆರು ಬೃಹತ್ ಗಾತ್ರದ ಬ್ರಹ್ಮ ಕಮಲ ಹೂವುಗಳು ಅರಳಿವೆ.
ರಾತ್ರಿ ಹೊತ್ತು ಅರಳಿ ಮುಂಜಾವಿನ ವೇಳೆ ಬಾಡುವ ಈ ಹೂವು ಅರಳುವ ಹೊತ್ತಿನಲ್ಲಿ ಇಡೀ ಪರಿಸರವನ್ನು ಪರಿಮಳವನ್ನಾಗಿಸುತ್ತದೆ. ಈ ಸಂದರ್ಭಕ್ಕೆ ಮನೆಯ ಮಾಲಕ ಮಹೇಶ್, ಸುಗುಣ ಹಾಗೂ ಸೂರಪ್ಪ ಪೂಜಾರಿ ಸಾಕ್ಷಿಗಳಾದರು.
Next Story





