ಅಪಘಾತದಲ್ಲಿ ಜಮಾ ಅತೇ ಇಸ್ಲಾಮೀ ಹಿಂದ್ನ ಗೋವಾ ರಾಜ್ಯ ಕಾರ್ಯದರ್ಶಿ ಸರ್ಫರಾಝ್ ಮೃತ್ಯು
![ಅಪಘಾತದಲ್ಲಿ ಜಮಾ ಅತೇ ಇಸ್ಲಾಮೀ ಹಿಂದ್ನ ಗೋವಾ ರಾಜ್ಯ ಕಾರ್ಯದರ್ಶಿ ಸರ್ಫರಾಝ್ ಮೃತ್ಯು ಅಪಘಾತದಲ್ಲಿ ಜಮಾ ಅತೇ ಇಸ್ಲಾಮೀ ಹಿಂದ್ನ ಗೋವಾ ರಾಜ್ಯ ಕಾರ್ಯದರ್ಶಿ ಸರ್ಫರಾಝ್ ಮೃತ್ಯು](https://www.varthabharati.in/sites/default/files/images/articles/2016/07/6/IMG-20160706-WA0041.jpg)
ಮಂಗಳೂರು, ಜು.6: ನಗರದ ಮೋತಿಮಹಲ್ ಸಮೀಪ ಸ್ಕೂಟರ್ಗೆ ಬಸ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಜಮಾಅತೇ ಇಸ್ಲಾಮೀ ಹಿಂದ್ನ ಗೋವಾ ರಾಜ್ಯ ಕಾರ್ಯದರ್ಶಿ ಸರ್ಫರಾಝ್ ಬಾವ ಮೃತಪಟ್ಟಿದ್ದಾರೆ.
ಗೋವಾದ ಉದ್ಯಮಿ ಯು.ಎಂ. ಬಾವ ಅವರ ಪುತ್ರ ಸರ್ಫರಾಝ್ ಗೋವಾದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈದ್ ಹಿನ್ನೆಲೆಯಲ್ಲಿ ಮಂಗಳೂರಿನ ಬಜಾಲ್ ಪಕ್ಕಲಡ್ಕದಲ್ಲಿರುವ ತಮ್ಮ ಮಾವನ ಮನೆಗೆ ಆಗಮಿಸಿದ್ದರು. ಪಾರ್ಸೆಲ್ ತರಲೆಂದು ನಗರಕ್ಕೆ ಆಗಮಿಸಿದ್ದ ವೇಳೆ ಮೋತಿಮಹಲ್ ಸಮೀಪ ಬಸ್ ಢಿಕ್ಕಿ ಹೊಡೆದಿತ್ತು. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತದೇಹವನ್ನು ಅಂತಿಮ ದರ್ಶನಕ್ಕಾಗಿ ಉಳ್ಳಾಲದ ಕೋಟೆಪುರದಲ್ಲಿರುವ ಸರ್ಫರಾಝ್ ಅವರ ಸಂಬಂಧಿ ಸಿ.ಎಚ್. ಸಿರಾಜ್ ಹಾಜಿ ಅವರ ಮನೆಯಲ್ಲಿ ಇಡಲಾಗಿದ್ದು, ಗುರುವಾರ ಬೆಳಗ್ಗೆ 6 ಗಂಟೆಗೆ ಕೋಟೆಪುರ ಮಸೀದಿಯಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.
Next Story