ಯುವಕನಿಗೆ ಇರಿತ ಪ್ರಕರಣದ ಆರೋಪಿ ಸೆರೆ
ಮಂಜೇಶ್ವರ, ಜು.7: ಕಾರಿನಲ್ಲಿ ಬಂದ ತಂಡವೊಂದು ಕುಂಜತ್ತೂರು ಪದವು ನಿವಾಸಿ ಪೊಡಿಯ ಎಂಬವರ ಪುತ್ರ ನವಾಝ್ (25)ಎಂಬಾತನಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ತೂಮಿನಾಡು ಜಂಕ್ಷನ್ನಲ್ಲಿ ಬುಧವಾರ ರಾತ್ರಿ 12:30ಕ್ಕೆ ಸಂಭವಿಸಿದೆ. ಇರಿತಕ್ಕೊಳಗಾದ ನವಾಝ್ರ ಕಣ್ಣಿಗೆ ಹಾಗೂ ಹಣೆಯ ಭಾಗ, ಕಾಲಿಗೆ ಗಾಯಗಳಾಗಿವೆ. ಈತನನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈದ್ ಪ್ರಯುಕ್ತ ಅಳವಡಿಸಲಾದ ಫ್ಲೆಕ್ಸೃ್ಗೆ ಸಂಬಂಧಿಸಿ ಉಂಟಾದ ವಿವಾದ ಇರಿತಕ್ಕೆ ಕಾರಣ ಎನ್ನಲಾಗಿದೆ. ನವಾಝ್ನ ಜತೆಗಿದ್ದ ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಕುಂಜತ್ತೂರು ಪದವು ನಿವಾಸಿ ಮಹ್ಮೂದ್ರ ಪುತ್ರ ರಿಯಾಝ್(26)ನನ್ನು ಬಂಧಿಸಿದ್ದಾರೆ. ಉಳಿದ ಅರೋಪಿಗಳಾದ ಬಂಧಿತನ ತಮ್ಮ ಅನ್ಸಾರ್ (23), ಚಿಕ್ಕಪ್ಪ ಅಬ್ದುಲ್ಲ ಹಾಗೂ ಸಿದ್ದೀಕ್ರಿಗಾಗಿ ಪ್ರಕರಣ ದಾಖಲಿಸಿರುವ ಮಂಜೇಶ್ವರ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Next Story