ಮಾಧ್ಯಮಗಳಲ್ಲಿ ಡಾ.ಝಾಕೀರ್ ನಾಯ್ಕ್ ವಿರುದ್ಧದ ಅಪಪ್ರಚಾರ ನಿಲ್ಲಿಸಿ
ಪ್ರೆಸ್ಸ್ ಕೌನ್ಸಿಲ್ಗೆ change.org ಮನವಿ ಅಭಿಯಾನಕ್ಕೆ ಸಾವಿರಾರು ಮಂದಿಯಿಂದ ಸಹಿ

ಬಾಂಗ್ಲಾದೇಶದಲ್ಲಿ ನಡೆದ ಅಮಾನವೀಯ ಭಯೋತ್ಫಾದಕ ದಾಳಿ ಘಟನೆಯ ಹಿನ್ನೆಲೆಯಲ್ಲಿ, ದಾಳಿಕೋರರು ಡಾ.ಝಾಕೀರ್ ನಾಯ್ಕ್ ಅವರ ಅನುಯಾಯಿಗಳು ಎಂಬ ಅರ್ಥದಲ್ಲಿ ಭಾರತೀಯ ಮಾಧ್ಯಮಗಳು ಬಿಂಬಿಸುತ್ತಿರುವ ಹಿನ್ನೆಲೆಯಲ್ಲಿ ಆ ಅಪಪ್ರಚಾರ ತಡೆಯುವಂತೆ ಆಗ್ರಹಿಸಿ ಪತ್ರಿಕಾ ಮಂಡಳಿಗೆ ಮನವಿ ಸಲ್ಲಿಸುವ ಅಭಿಯಾನವೊಂದು ಖ್ಯಾತ ಅಭಿಯಾನ ವೆಬ್ ಸೈಟ್ change.org ನಲ್ಲಿ ಪ್ರಾರಂಭವಾಗಿದ್ದು ಈಗಾಗಲೇ 32 ಸಾವಿರ ಮಂದಿ ಸಹಿ ಮಾಡಿದ್ದಾರೆ.
ಡಾ.ಝಾಕೀರ್ ನಾಯ್ಕ್ ಅವರು ತಮ್ಮ ಉಪನ್ಯಾಸಗಳಲ್ಲಿ, ಮುಸ್ಲಿಮರು ಭಯೋತ್ಪಾದಕರಾಗಬೇಕು ಎಂದು ಕರೆ ನೀಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಮಾಡುತ್ತಿವೆ. ಇವರು ಬಾಂಗ್ಲಾ ದಾಳಿಕೋರರಿಗೆ ಸ್ಫೂರ್ತಿಯಾಗಿದ್ದರು ಎಂದು ಮಾಧ್ಯಮಗಳು ಆಪಾದಿಸುತ್ತಿವೆ. ಝಾಕೀರ್ ನಾಯ್ಕ್ ಅವರ ಉಲ್ಲೇಖಗಳನ್ನು ಭಯೋತ್ಪಾದಕರು ಫೇಸ್ಬುಕ್ನಲ್ಲಿ ಷೇರ್ ಮಾಡಿದ್ದರು ಎಂದೂ ಆಪಾದಿಸಲಾಗಿದೆ
ಹೀಗೆ ವರದಿ ಮಾಡುವಾಗ ಝಾಕಿರ್ ನಾಯ್ಕ್ ಅವರ ’ಭಯೋತ್ಪಾದನ ಕುರಿತು ಹೇಳಿಕೆಗಳನ್ನು ತಿರುಚಿ,ತಮಗೆ ಸರಿಕಂಡಂತೆ ಬಳಸಿಕೊಳ್ಳಲಾಗುತ್ತಿದೆ ಎಂದು ಈ ಅಭಿಯಾನದ ಮನವಿಯಲ್ಲಿ ದೂರಲಾಗಿದೆ
ಡಾ.ಝಾಕೀರ್ ನಾಯ್ಕ್ ಅವರು ವಿಶ್ವವಿಖ್ಯಾತ ಇಸ್ಲಾಮಿಕ್ ಚಿಂತಕ ಹಾಗೂ ವಾಗ್ಮಿಯಾಗಿದ್ದು, ವೈದ್ಯಕೀಯ ಶಿಕ್ಷಣ ಪಡೆದವರು. ಎರಡು ದಶಕಗಳಿಂದ ಇವರು ಉಪನ್ಯಾಸಗಳನ್ನು ನೀಡುತ್ತಿದ್ದಾರೆ.
ಝಾಕೀರ್ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ಅಪಪ್ರಚಾರದ ಹಿಂದಿನ ಕಾರ್ಯಸೂಚಿಯ ಬಗ್ಗೆ ತನಿಖೆ ನಡೆಸುವಂತೆ ಪತ್ರಿಕಾ ಮಂಡಳಿಗೆ ಮನವಿ ಸಲ್ಲಿಸಲಾಗಿದೆ. ಜತೆಗೆ ಝಾಕೀರ್ ಅವರ ಕ್ಷಮೆ ಯಾಚಿಸಬೇಕು ಎಂದೂ ಆಗ್ರಹಿಸಲಾಗಿದೆ
ಅಭಿಯಾನದ ಲಿಂಕ್ ಇಲ್ಲಿದೆ :
https://www.change.org/p/press-council-of-india-indian-media-stop-the-vilification-campaign-against-dr-zakir-naik







