Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನೆಲೆಯೇ ಇಲ್ಲದವರು ಶೌಚಾಲಯ...

ನೆಲೆಯೇ ಇಲ್ಲದವರು ಶೌಚಾಲಯ ಕಟ್ಟಿಕೊಳ್ಳುವುದೆಲ್ಲಿ?

ಕಳಕೇಶ ಗೊರವರ, ರಾಜೂರಕಳಕೇಶ ಗೊರವರ, ರಾಜೂರ8 July 2016 11:24 PM IST
share

ಮಾನ್ಯರೆ,
ಇರಲು ಒಂದು ಶಾಶ್ವತ ನೆಲೆಯೇ ಇಲ್ಲದಿದ್ದಾಗ, ಪಂಚಾಯತ್‌ನಿಂದ ದುಡ್ಡು ಬರುತ್ತದೆ ಪಾಯಿಖಾನೆ ಕಟ್ಟಿಸಿಕೊಳ್ಳಿ ಬಯಲು ಶೌಚಮುಕ್ತ ಭಾರತ ನಮ್ಮ ಕನಸು ಎನ್ನುವುದು ಎಂತಹ ಹಾಸ್ಯಾಸ್ಪದವೆನಿಸುತ್ತದೆ ಅಲ್ಲವೇ?
ಊರ ಅಂಚಲ್ಲಿ ಒಂದು ಬೀಳು ಬಯಲು, ಅಲ್ಲಿ ಬೀದಿ ದೀಪಗಳೂ ಇಲ್ಲದ ಏಳೆಂಟು ಸಾಲು ಗುಡಿಸಲುಗಳು ಬೀಡು ಬಿಟ್ಟಿರುತ್ತವೆ. ಬಿಸಿಲಿಗೆ ಬೆಂದು, ಮಳೆಗೆ ತೋಯ್ದು ಅವರ ಚರ್ಮ ಮಡುಗಟ್ಟಿದೆ. ಎದ್ದು ನಿಲ್ಲಲು ಆಗದ, ಕಾಲು ಚಾಚಲು ಬಾರದ ಈ ಗುಡಿಸಲುಗಳಲ್ಲಿ ಮಳೆ ಬಂದರೆ ಹೊರಗೂ ಒಳಗೂ ಒಂದೇ ಬಗೆಯ ಜಿನುಗುವಿಕೆ. ಗುಡಿಸಲ ತುಂಬ ಹಸಿವ ನೀಗಲು ಅಂಡಲೆದು ದಣಿದ ದೇಹಗಳ ಅಸಹಾಯಕತೆಯ ನಿಟ್ಟುಸಿರು. ಇವತ್ತಿನ ಹಸಿವು ಹೇಗೋ ನೀಗಿತ್ತೆನ್ನುವಾಗ ನಾಳೆಯ ಚಿಂತೆ ಕಾದು ಕುಳಿತಿರುತ್ತದೆ. ಇಲ್ಲಿನ ಮಕ್ಕಳ ವಯೋಸಹಜ ಓದುವ ಕನಸು ಭಗ್ನಗೊಂಡಿವೆ. ಹೀಗೆ ಅವರ ಬದುಕ ಬವಣೆ ಅಗೆಯತ್ತಾ ಹೋದರೆ ಆಳ ಹೆಚ್ಚುತ್ತದೆ. ಇದು ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳ ಸಾಮಾನ್ಯ ಚಿತ್ರಣ.
ಹಾಗಂತ ಇಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರು ಇಲ್ಲವೆಂದೇನಲ್ಲ. ಸರಕಾರದಿಂದ ನಿವೇಶನಗಳು ಬರುತ್ತವೆನ್ನುವುದು ಕೂಡ ನಿಜ. ಆದರೆ ನಿಜವಾದ ಫಲಾನುಭವಿಗಳಿಗೆ ತಲುಪುತ್ತವೆ ಎನ್ನುವುದು ಮಾತ್ರ ಅವಾಸ್ತವ. ಪಂಚಾಯತ್ ರಾಜಕೀಯ ರಾಜ್ಯದ ರಾಜಕೀಯಕ್ಕಿಂತ ತೀರಾ ಹದಗೆಟ್ಟಿದೆ. ನಿವೇಶನಗಳ ಹಂಚಿಕೆಯಲ್ಲಿ ಲಂಚಗುಳಿತನ ರಾಜಾರೋಷವಾಗಿಯೇ ನಡೆಯುತ್ತದೆ.
ಎಂದೋ ಬರಲಿರುವ ಚುನಾವಣೆಗೆ ಭಿನ್ನಮತ, ಸಚಿವ ಸ್ಥಾನಕ್ಕಾಗಿ ಕಚ್ಚಾಡುತ್ತಿರುವವರೇ ನಿಮಗೆ ಈ ಐಶಾರಾಮಿ ಬದುಕ ಕರುಣಿಸಿದವರಿಗೆ ಕೊನೆಯ ಪಕ್ಷ ಮೂಲ ಸೌಕರ್ಯವನ್ನಾದರೂ ಕಲ್ಪಿಸಿ. ಇರಲು ಸರಿಯಾಗಿ ಒಂದು ಸೂರೂ ಇಲ್ಲದೆ ತಲೆಮಾರುಗಳು ಸುಮ್ಮನೆ ಸರಿಯುತ್ತಿವೆ. ಸ್ಥಳೀಯ ರಾಜಕೀಯ ಧುರೀಣರೇ ತುಸು ಮನುಷ್ಯರಂತೆ ಆಲೋಚಿಸಿ. ಬದುಕುವ ಹಕ್ಕು ಅವರ ಪಾಲಿಗೂ ಇದೆಯಲ್ಲವೇ?.
ಆದ್ದರಿಂದ ಮೊದಲು ಅವರಿಗೊಂದು ಶಾಶ್ವತ ನೆಲೆ ಒದಗಿಸಿ, ನಂತರ ಶೌಚಾಲಯದ ಮಾತು ಬರಬೇಕಲ್ಲವೇ?
 

share
ಕಳಕೇಶ ಗೊರವರ, ರಾಜೂರ
ಕಳಕೇಶ ಗೊರವರ, ರಾಜೂರ
Next Story
X