ಗುಜರಾತ್: ದಲಿತ ರಾಮನನ್ನು ಕೊಚ್ಚಿಕೊಂದ ಮೇಲ್ಜಾತಿಯ ಗುಂಪು
![ಗುಜರಾತ್: ದಲಿತ ರಾಮನನ್ನು ಕೊಚ್ಚಿಕೊಂದ ಮೇಲ್ಜಾತಿಯ ಗುಂಪು ಗುಜರಾತ್: ದಲಿತ ರಾಮನನ್ನು ಕೊಚ್ಚಿಕೊಂದ ಮೇಲ್ಜಾತಿಯ ಗುಂಪು](https://www.varthabharati.in/sites/default/files/images/articles/2016/07/9/48840_1468044143.jpg)
ಪೋರ್ಬಂದರ್,ಜುಲೈ 9: ದಲಿತ ವಿಷಯಗಳಲ್ಲಿ ಮೋದಿ ಸಚಿವ ಸಂಪುಕ್ಕೆ ತಲೆನೋವು ಸೃಷ್ಟಿಸುತ್ತಿರುವಾಗ ಗುಜರಾತ್ನಿಂದ ಮತ್ತೊಂದು ನಡುಕ ಹುಟ್ಟಿಸುವ ಘಟನೆ ವರದಿಯಾಗಿದೆ. ದಲಿತ ರೈತನನ್ನು ಮೇಲ್ಜಾತಿಯ ತಂಡವೊಂದು ಹೊಡೆದು ಕೊಂದು ಹಾಕಿದೆ. ಗುಜರಾತ್ನ ಸೋದಾನಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ನಲ್ವತ್ತಾರು ಮಂದಿ ಸೇರಿ ದಲಿತ ರೈತನನ್ನು ಕೊಂದು ಹಾಕಿದ್ದಾರೆ. ಉನ್ನತ ಮೇರ್ ಜಾತಿಗೆ ಸೇರಿದ ಗುಂಪು ರಾಮಸಿಂಗ್ರೋಹಿ(42)ಯನ್ನು ಕ್ರೂರವಾಗಿ ಕೊಲೆಗೈದಿದೆ. ಗದ್ದೆಬಿತ್ತುವ ಸಂದರ್ಭದಲ್ಲಿ ಈ ದಾಳಿ ನಡೆಸಲಾಗಿದ್ದು. ದಂಡಗಳಿಂದ ಹೊಡೆದು, ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಗುಂಪು ಕೊಲೆಗೈದಿದೆ.
ಕೊಲೆಪಾತಕಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಪರ್ಬತ್ ಕಾವಾದ್ರಾ.ಲಂಗುಮೇರ್, ನಿಲೇಶ್ ಬಾಬಾರ್ ಬಂಧಿಸಲಾಗಿರುವ ಆರೋಪಿಗಳಾಗಿದ್ದಾರೆ. ಭೂಗತನಾಗಿರುವ ಗ್ರಾಮ ಮುಖಂಡ ಹರ್ಬಂ ಕರಾವಾದ್ರ ರಾಮನನ್ನು ಆಕ್ರಮಿಸಿದ ತಂಡಕ್ಕೆ ನೇತೃತ್ವ ನೀಡಿದ ವ್ಯಕ್ತಿಯಾಗಿದ್ದಾನೆ. ಮೇರ್ವಿಭಾಗ ರಾಮ ಬಿತ್ತನೆನಡೆಸುತ್ತಿರುವ ಸ್ಥಳ ಜಾನುವಾರುಗಳು ಮೇಯುವ ಸ್ಥಳವೆಂದು ಹೇಳುತ್ತಿತ್ತು. ರಾಮ ಬಿತ್ತನೆಗಾಗಿ ಕರೆಸಿಕೊಂಡ ಇತರರನ್ನು ಗುಂಪು ಮಾರಣಾಂತಿಕವಾಗಿ ಥಳಿಸಿದೆ.ರಾಮ ಹದಿನೈದು ವರ್ಷಗಳಿಂದ ಬಿತ್ತನೆ ನಡೆಸುತ್ತಿರುವ ಸ್ಥಳಕ್ಕೆ ಮೇಲ್ಜಾತಿಯವರು ಹವಣಿಸುತ್ತಿರುವುದರಿಂದ ವಿವಾದ ಸೃಷ್ಟಿಯಾಗಿತ್ತು.
ರಾಮನ ಮೃತದೇಹವವನ್ನು ಕೊಂದ ಸ್ಥಳದಲ್ಲಿಯೇ ದಫನ ಮಾಡಬೇಕೆಂದು ಕುಟುಂಬ ಪೋರ್ಬಂದರ್ ಪೊಲೀಸ್ಠಾಣೆಯಲ್ಲಿ ಧರಣಿ ನಡೆಸಿದ್ದಾರೆ. ಆದರೆ ಅಲ್ಲಿ ದೇವಸ್ಥಾನ ಕಟ್ಟುವುದು ನಮ್ಮ ಉದ್ದೇಶ ಎಂದು ಮೇರ್ ಜಾತಿಯ ವ್ಯಕ್ತಿಯೊಬ್ಬ ತಿಳಿಸಿದ್ದಾನೆ. ಆದ್ದರಿಂದ ರಾಮನ ಮೃತದೇಹವನ್ನು ದಲಿತರನ್ನು ದಫನಗೈಯ್ಯುವಲ್ಲಿ ದಫನ ಮಾಡಬೇಕೆಂದು ಅವನು ಅಭಿಪ್ರಾಯವ್ಯಕ್ತಪಡಿಸಿದ್ದಾನೆ.