ಕಡಬ ತಾಲೂಕು ಅನುಷ್ಠಾನ ಶೀಘ್ರದಲ್ಲಿ ನಡೆಯಲಿದೆ : ಸಚಿವ ಬಿ.ರಮನಾಥ ರೈ ಭರವಸೆ
![ಕಡಬ ತಾಲೂಕು ಅನುಷ್ಠಾನ ಶೀಘ್ರದಲ್ಲಿ ನಡೆಯಲಿದೆ : ಸಚಿವ ಬಿ.ರಮನಾಥ ರೈ ಭರವಸೆ ಕಡಬ ತಾಲೂಕು ಅನುಷ್ಠಾನ ಶೀಘ್ರದಲ್ಲಿ ನಡೆಯಲಿದೆ : ಸಚಿವ ಬಿ.ರಮನಾಥ ರೈ ಭರವಸೆ](https://www.varthabharati.in/sites/default/files/images/articles/2016/07/10/10kdb_july.10_1.jpg)
ಕಡಬ,ಜು.10 : ಕಡಬ ತಾಲೂಕು ಅನುಷ್ಠಾನ ಶೀಘ್ರದಲ್ಲಿ ನಡೆಯಲಿದೆ ಎಂದು ಸಚಿವ ಬಿ.ರಮನಾಥ ರೈ ಭರವಸೆ ನೀಡಿದರು.
ಅವರು ಭಾನುವಾರ ಸಾಯಂಕಾಲ ಕಡಬದ ಅನುಗ್ರಹ ಸಭಾಭವನದಲ್ಲಿ ಕಂದಾಯ ಇಲಾಖೆ ವಿಶೇಷ ತಹಶಿಲ್ದಾರ್ ಕಛೇರಿ ಆಶ್ರಯದಲ್ಲಿ ನಡೆದ 94 ಸಿ ಹಕ್ಕುಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಹಕ್ಕುಪತ್ರ ವಿತರಣೆ ಮಾಡಿ ಮಾತನಾಡಿದರು.
ಕಡಬ ತಾಲೂಕಿಗೆ ಪೂರಕವಾದ ಹಲವಾರು ವ್ಯವಸ್ಥೆಯನ್ನು ಈಗಾಗಲೇ ಸರಕಾರದ ವತಿಯಿಂದ ಅನುಷ್ಠಾನ ಮಾಡಲಾಗಿದೆ. ಘೋಷಣೆಯಾಗಿರುವ ತಾಲೂಕನ್ನು ಪೂರ್ಣಪ್ರಮಾಣದಲ್ಲಿ ಅನುಷ್ಟಾನ ಮಾಡುವುದಾಗಿ ನೀಡಿರುವ ಭರವಸೆಯನ್ನು ಸರಕಾರ ಈಡೇರಿಸಲಿದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಹೆಚ್ಚು ಜನ ಭೂಮಿಯ ಒಡೆಯರಾಗಲು ಅಂದಿನ ಆಡಳಿತ ವ್ಯವಸ್ಥೆ ಕಾರಣವಾಗಿದೆ, ಭೂಮಸೂದೆ ಕಾನೂನು ಜಾರಿಗೆ ತಂದಿರುವುದರಿಂದ ಬಡವ ಕೂಡಾ ಭೂಮಿಯ ಒಡೆಯನಾಗಲು ಸಾಧ್ಯವಾಗಿದೆ. ಸ್ವಾಬಿಮಾನಿ ಬದುಕು ಕಟ್ಟಿಕೊಳ್ಳಲ
ು ಸರಕಾರ ಅವಕಾಶ ಕಲ್ಪಿಸಿಕೊಟ್ಟಿದೆ ಎಂದರು. ಕಡಬದಲ್ಲಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗಾಗಿ ಈಗಾಗಲೇ ಪ್ರೌಢ ಶಾಲಾ ವಿಭಾಗದಿಂದ ಭೂಮಿ ನೀಡಲು ನಿರ್ಧರಿಸಲಾಗಿದೆ. ತಕ್ಷಣ ಕಾಲೇಜು ಪ್ರಾರಂಭಿಸಲು ಸರಕಾರ ಅನುಮತಿ ನೀಡಬೇಕು. ಕಡಬ ಸರಕಾರಿ ಆಸ್ಪತ್ರೆಯ ನೂತನ ಕಟ್ಟಡಕ್ಕಾಗಿ ನಬಾರ್ಡ್ ಯೋಜನೆಯಡಿ 4.85 ಕೋಟಿ ರೂ ಬಿಡುಗಡೆಯಾಗಿದೆ ತಕ್ಷಣ ಶಿಲನ್ಯಾಸ ನೆರವೇರಿಸಬೇಕಿದೆ ಎಂದರು.
ಕಡಬ ಸರಕಾರಿ ಆಸ್ಪತ್ರೆ ಕಟ್ಟಡ ಶಿನ್ಯಾಸಕ್ಕೆ ಶೀಘ್ರ ದಿನ ನಿಗದಿಪಡಿಸಲಾಗುವುದು, ಅರಣ್ಯ ಗಡಿಯಿಂದ 100 ಮೀಟರ್ ದೂರದಲ್ಲಿ ವಾಸಿಸುವ ಜನತೆಗೆ ಹಕ್ಕು ಪತ್ರ ನೀಡುವ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ತರಲಾಗುವುದು, ಡೀಮ್ಡ್ ಅರಣ್ಯ ಸಮಸ್ಯೆ ಪರಿಹರಿಸರಿಸುವ ನಿಟ್ಟಿನಲ್ಲಿ ಜಂಟಿ ರ್ವೆ ನಡೆಸಲಾಗುವುದು ಎಂದರು.
ಅಧ್ಯಕ್ಷತೆವಹಿಸಿದ್ದ ಸುಳ್ಯ ಶಾಸಕ ಎಸ್.ಅಂಗಾರ ಮಾತನಾಡಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಕ್ತಿ ಮೀರಿ ಕೆಲಸ ಮಾಡಿದಾಗ ಜನ ಗುರುತಿಸುತ್ತಾರೆ, ಕಂದಾಯ ಇಲಾಖೆಯವರು ಹಕ್ಕುಪತ್ರ ನೀಡುವ ಒಟ್ಟೊಟ್ಟಿಗೆ ಪಹಣಿಪತ್ರವನ್ನೂ ವಿತರಿಸುವ ಕೆಲಸ ಮಾಡಬೇಕು, ಹಾಗಾದಾಗ ಬಡಜನತೆಗೆ ಪ್ರಯೋಜನವಾಗುತ್ತದೆಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ರಾದ ಪಿ.ಪಿ.ವರ್ಗೀಸ್ , ಸರ್ವೋತ್ತಮ ಗೌಡ, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ತಾಲೂಕು ಪಂಚಾಯಿತಿ ಸದಸ್ಯರಾದ ಪಿ.ವೈ.ಕುಸುಮಾ. ಫಝಲ್ ಕೋಡಿಂಬಾಳ, ಗಣೇಶ್ ಕೈಕುರೆ, ಆಶಾ ಲಕ್ಷ್ಮಣ, ಕೆ.ಟಿ.ವಲ್ಸಮ್ಮ, ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬು ಮುಗೇರ, ಬಿಳಿನಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ, ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾರಘು ಮೊದಲಾದವರು ಉಪಸ್ಥಿತರಿದ್ದರು.
ಕಡಬ ವಿಶೇಷ ತಹಶಿಲ್ದಾರ್ ಬಿ. ಲಿಂಗಯ್ಯ ಪ್ರಸ್ತಾವನೆಗೈದರು. ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ಸ್ವಾಗತಿಸಿದರು. ಕಂದಾಯ ಇಲಾಖೆ ಸಿಬಂದಿ ಉದಯಕುಮಾರ್ ಪಿ.ಆರ್ ಹರೀಶ್ ಬೆದ್ರಾಜೆ ಕಾರ್ಯಕ್ರಮ ನಿರೂಪಿಸಿದರು.