Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ನಾನು ಈ ಹಿಂದೆ ಮೋದಿಗೆ ಸಹಾಯ...

ನಾನು ಈ ಹಿಂದೆ ಮೋದಿಗೆ ಸಹಾಯ ಮಾಡಿದ್ದಕ್ಕೆ ಅಪರಾಧಿ ಭಾವನೆ ಕಾಡುತ್ತಿದೆ.

ವಾರ್ತಾಭಾರತಿವಾರ್ತಾಭಾರತಿ10 July 2016 11:59 PM IST
share
ನಾನು ಈ ಹಿಂದೆ ಮೋದಿಗೆ ಸಹಾಯ ಮಾಡಿದ್ದಕ್ಕೆ ಅಪರಾಧಿ ಭಾವನೆ ಕಾಡುತ್ತಿದೆ.

ನಾನು ಈ ಹಿಂದೆ ಮೋದಿಗೆ ಸಹಾಯ ಮಾಡಿದ್ದಕ್ಕೆ ಅಪರಾಧಿ ಭಾವನೆ ಕಾಡುತ್ತಿದೆ.

-ರಾಮ್ ಜೇಠ್ಮಲಾನಿ, ಸಂಸದ

  ವಯಸ್ಸಾದ ಮೇಲೆ ಎಲ್ಲಾ ವೇಶ್ಯೆಯರೂ ಗರತಿಯರೇ ಆಗಿರುತ್ತಾರಂತೆ.

 ---------------------

   ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾಗದಿದ್ದರೆ ಜನರೇ ಬದಲಿಸ್ತಾರೆ.

- ಎಚ್.ವಿಶ್ವನಾಥ್, ಕಾಂಗ್ರೆಸ್ ಮುಖಂಡ

  ಸದ್ಯಕ್ಕಂತೂ ನಿಮ್ಮ ಸ್ಥಿತಿ ಬದಲಾಗುವ ಲಕ್ಷಣಗಳಿಲ್ಲ.

 ---------------------

  ಎಲ್ಲರೂ ಪಕ್ಷಕ್ಕೆ ಬಂದು ಅಧಿಕಾರ ಅನುಭವಿಸಿ ಹೋಗುವವರೇ ಆದರೆ ಪಕ್ಷ ಉಳಿಯುವುದಿಲ್ಲ.

- ಜಾಫರ್ ಶರೀಫ್, ಕಾಂಗ್ರೆಸ್ ಮುಖಂಡ

  ಅಧಿಕಾರ ಅನುಭವಿಸಿ ಹೋದವರು, ಇದೀಗ ಪಕ್ಷದ ವಿರುದ್ಧ ಕೆಲಸ ಮಾಡಲು ನಿಂತರೆ ಇನ್ನೇನಾದೀತು?

 ---------------------

  ಗೋಮಾತೆಗೆ ಮೀಸಲಿರುವ ಭೂಮಾತೆಯ ದುರುಪಯೋಗ ಸಲ್ಲದು.

- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

   ಗೋಮಾತೆಗೆ ಮೀಸಲಿರುವ ಕಸಾಯಿ ಖಾನೆಗಳ ಸದ್ಬಳಕೆಯಾದರೆ, ದಫನ ಮಾಡಲು ಭೂಮಾತೆಯ ಅಗತ್ಯ ಬರುವುದಿಲ್ಲ.

---------------------

  ನಮ್ಮ ಸರಕಾರ ಅತ್ಯಂತ ಪಾರದರ್ಶಕ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

   ಹೌದು. ಬಟ್ಟೆಯೇ ಇಲ್ಲ.

---------------------

  ಯಡಿಯೂರಪ್ಪ ನಮ್ಮ ನಾಯಕ.

- ಈಶ್ವರಪ್ಪ, ವಿ.ಪ. ವಿಪಕ್ಷ ನಾಯಕ

   ಆದರೆ ತಮ್ಮ ನಾಯಕರಾಗಲು ಯಡಿಯೂರಪ್ಪ ಒಪ್ಪಬೇಕಲ್ಲ?

---------------------

  ನನಗೂ ಜನ, ಪಕ್ಷ, ಹೈಕಮಾಂಡ್ ಇದೆ.

- ಅಂಬರೀಷ್, ಮಾಜಿ ಸಚಿವ

ಮತ್ತೇಕೆ ತಡ, ಹೊಸ ಸಿನೆಮಾ ಶುರು ಮಾಡಿ.

---------------------

   ರಾಜ್ಯದ ಜನತೆ ಕಾಂಗ್ರೆಸ್ ದುರಾಡಳಿತದಿಂದ ಕಂಗಾಲಾಗಿದ್ದಾರೆ.

- ಅನಂತ್ ಕುಮಾರ್, ಕೇಂದ್ರ ಸಚಿವ

   ಬಿಜೆಪಿಯ ದುರಾಡಳಿತನವನ್ನು ನೆನೆದು ಒಂದಿಷ್ಟು ನೆಮ್ಮದಿಯಿಂದಿದ್ದಾರೆ.

---------------------

  ಜನ ನನ್ನನ್ನು ಎರಡನೆ ಬಸವಲಿಂಗಪ್ಪ ಅಂತಾರೆ.

- ಎಚ್.ಆಂಜನೇಯ, ಸಚಿವ

 ಬಸವಲಿಂಗಪ್ಪ ಅವರ ಬೂಸ ಹೇಳಿಕೆ ನೆನಪಾಗಿರಬೇಕು.

---------------------

  ರಾಜಕಾರಣಿಗಳು ಜನಸೇವಕರು ಎಂಬ ಭಾವನೆ ಸಾರ್ವಜನಿಕರಲ್ಲಿ ಬೆಳೆಸುವಂತೆ ನಮ್ಮ ನಡೆ ಇರಬೇಕು.

- ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

  ವಿಮಾನದಲ್ಲೇ ಓಡಾಡುವ ನರೇಂದ್ರ ಮೋದಿಗೆ ನಡೆ-ದಾಡುವ ಅವಕಾಶವೇ ಇಲ್ಲವಲ್ಲ?

 ---------------------

  ಭಾರತ ಹಾಗೂ ಅಮೆರಿಕ ನಡುವಿನ ಬಾಂಧವ್ಯದ ಬಗ್ಗೆ ಪಾಕಿಸ್ತಾನ ತಲೆಕೆಡಿಸಿಕೊಳ್ಳುವುದಿಲ್ಲ.

-ಸರ್ತಾಝ್ ಅಝೀಝ್, ಪಾಕ್ ಪ್ರಧಾನಿಯ ವಿದೇಶಾಂಗ ಸಲಹೆಗಾರ

 ತಲೆಯಿದ್ದವರಿಗಷ್ಟೇ ಕೆಡಿಸಿಕೊಳ್ಳುವ ಸಮಸ್ಯೆ ಇರುವುದು.

---------------------

  ರಾಜ್ಯದ ಹಿತಾಸಕ್ತಿ ಕಾಯಲು ಪ್ರಬಲ ಪ್ರಾದೇಶಿಕ ಪಕ್ಷವೊಂದರ ಅಗತ್ಯವಿದೆ.

-ದೇವೇಗೌಡ, ಮಾಜಿ ಪ್ರಧಾನಿ

 ನಿಮ್ಮದು ಗ್ರಾಮಾಂತರ ಪಕ್ಷವಾಗಿರುವುದರಿಂದ ಆ ಹೊಣೆಗಾರಿಕೆಯ ಭಯ ಬೇಡ.

--------------------

  ತೆರಿಗೆ ಸಂಗ್ರಹಿಸಲು ಜನರಿಗೆ ಕುಡಿಸಿದರೆ ಕರ್ನಾಟಕ ‘ಕುಡುಕರ ರಾಜ್ಯ’ವಾಗುತ್ತದೆ.

-ಯು.ಬಿ.ಬಣಕಾರ್, ಬಿಜೆಪಿ ಶಾಸಕ

  ಹೊಸ ತೆರಿಗೆಯ ವಿಷಯ ಕುಡಿಸುವುದಕ್ಕಿಂತ ಮದ್ಯ ಕುಡಿಸುವುದು ವಾಸಿ ಎನ್ನುತ್ತಾರೆ ಸಿದ್ದರಾಮಯ್ಯ.

 ---------------------

  ನಾನು ಹುಚ್ಚು ನಾಯಿಯಲ್ಲ. ಸರಕಾರದ ತಪ್ಪುಗಳನ್ನು ಕಂಡು ಹಿಡಿಯುವ ಕಾವಲು ನಾಯಿ.

- ಈಶ್ವರಪ್ಪ, ವಿ.ಪ. ವಿಪಕ್ಷ ನಾಯಕ

ಸರಕಾರಕ್ಕಿಂತ ಮನೆಯವರಿಗೆ ಕಚ್ಚಿದ್ದೇ ಹೆಚ್ಚು.

---------------------

  ಖಾತೆ ಬದಲಾವಣೆ ಆಗಿರುವುದರಿಂದ ನನಗೆ ಪ್ರಮೋಷನ್ ಸಿಕ್ಕಂತಾಗಿದೆ.

- ಯು.ಟಿ.ಖಾದರ್, ಸಚಿವ

ಅಂತೂ ನಾಟಕ ರಂಗದಿಂದ ಸಿನೆಮಾರಂಗಕ್ಕೆ ಪ್ರಮೋಶನ್ ಸಿಕ್ಕಂತೆ.

---------------------

   ಸಮಾಜ ಒಟ್ಟಾಗಿ ನಿಂತರೆ ಗೋವು ಮತ್ತು ಸಂತರಿಗೆ ಯಾವುದೇ ಭಯವಿಲ್ಲ.

- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ

ಭಯ ಏನಿದ್ದರೂ ಅಬಲೆ ಮಹಿಳೆಗೆ ಮಾತ್ರ.

--------------------

  ಭಯೋತ್ಪಾದನೆಯೇ ಪ್ರಪಂಚಕ್ಕೆ ದೊಡ್ಡ ಬೆದರಿಕೆ.

- ನರೇಂದ್ರ ಮೋದಿ, ಪ್ರಧಾನಿ

ನೀವು ಪ್ರಪಂಚ ತಿರುಗಾಡುತ್ತಿರುವುದನ್ನು ನೋಡಿದರೆ ಅದು ನಿಜ ಅನ್ನಿಸುತ್ತದೆ.

---------------------

  ವಿದ್ಯಾರ್ಥಿಗಳು ಸಿಡಿದೇಳಬೇಕು.

- ಪ್ರಕಾಶ್ ಜಾವ್ಡೇಕರ್, ಕೇಂದ್ರ ಸಚಿವ

  ನಿಮ್ಮ ಕೂಗು ಕೇಳಿಯೇ ಕನ್ಹಯ್ಯ ಮತ್ತು ಅವರ ಗೆಳೆಯರು ಸಿಡಿದೆದ್ದದ್ದು.

---------------------

  ಬಾಲಿವುಡ್ ಸಿನೆಮಾಗಳಲ್ಲಿ ಮಹಿಳೆ ಈಗ ಬರಿ ಕಣ್ತಂಪು ಮಾಡುವ ಪ್ರದರ್ಶನದ ಬೊಂಬೆಯಾಗಿ ಉಳಿದಿಲ್ಲ.

- ಮಾಧುರಿ ಧೀಕ್ಷಿತ್, ಬಾಲಿವುಡ್ ನಟಿ

ಪ್ರದರ್ಶನದ ಬೊಂಬೆಗೀಗ ವಯಸ್ಸಾಗಿದೆ.

---------------------

  ರಾಜ್ಯ ಸರಕಾರವನ್ನು ಜನರೇ ನೇಣು ಹಾಕುವ ಕಾಲ ಬಂದಿದೆ.

- ಶೋಭಾ ಕರಂದ್ಲಾಜೆ, ಸಂಸದೆ

  ಬಿಜೆಪಿಯ ಕೆಲ ನಾಯಕರು ನೇಣು ಹಗ್ಗದ ಜೊತೆಗೆ ಹೊಂಚು ಹಾಕುತ್ತಿರುವುದು ನೋಡಿದರೆ, ಬೇರೇನೋ ಸಂಭವಿಸಲಿದೆ.

---------------------

  ನಾನು ಅಂಬೇಡ್ಕರ್ ಚಿಂತನೆಯ ಹಿನ್ನೆಲೆಯಿಂದ ಬಂದವನು.

- ರಾಮದಾಸ್ ಅಠವಳೆ, ಕೇಂದ್ರ ಸಚಿವ

  ತಮ್ಮ ಹೆಸರಲ್ಲಿ ರಾಮನಿರುವುದನ್ನು ಕಂಡು ಬಿಜೆಪಿ ಮೋಸ ಹೋಗಿರಬೇಕು ಅಂತೀರಾ?

---------------------

   ರಾಮ ಮಂದಿರ ನಿರ್ಮಾಣ ರಾಜಕೀಯ ವಿಷಯ ಅಲ್ಲ.

- ಸಾಧ್ವಿ ನಿರಂಜನ್, ಕೇಂದ್ರ ಸಚಿವೆ

  ಅದು ಹೊಟ್ಟೆ ಪಾಡಿನ ವಿಷಯ ಅಂತೀರಾ?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X