ಕಾಶ್ಮೀರ ವಿಮಾನಗಳಿಗೆ ಟಿಕೆಟ್ ರದ್ದತಿ ಮರು ನಿಗದಿ ಶುಲ್ಕ ಮನ್ನಾಕ್ಕೆ ಎಐ ನಿರ್ಧಾರ
ಹೊಸದಿಲ್ಲಿ, ಜು.10: ಹಿಂಸಾಚಾರ ಗ್ರಸ್ತ ಕಾಶ್ಮೀರಕ್ಕೆ ಹಾಗೂ ಕಾಶ್ಮೀರದಿಂದ ಪ್ರಯಾಣದ ಟಿಕೆಟ್ ರದ್ದತಿ ಅಥವಾ ಬೇರೆ ದಿನಾಂಕಕ್ಕೆ ನಿಗದಿಗಾಗಿ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲವೆಂದು ಏರ್ ಇಂಡಿಯಾ ರವಿವಾರ ಹೇಳಿದೆ.
ಕಾಶ್ಮೀರದಲ್ಲಿ ಈಗಿರುವ ಪರಿಸ್ಥಿತಿಯ ಕಾರಣ, ಅಲ್ಲಿಗೆ ಆಗಮಿಸುವ ಹಾಗೂ ಅಲ್ಲಿಂದ ನಿರ್ಗಮಿಸುವ ಟಿಕೆಟ್ಗಳನ್ನು ಬುಕ್ ಮಾಡಿರುವ ಗ್ರಾಹಕರಿಂದ ರದ್ದತಿ ಹಾಗೂ ನೋ-ಶೋ ಶುಲ್ಕ ಸಂಗ್ರಹವನ್ನು ಮನ್ನಾ ಮೊದಲು ಎಐ ನಿರ್ಧರಿಸಿದೆಯೆಂದು ವಿಮಾನ ಸಂಸ್ಥೆಯ ವಕ್ತಾರರೊಬ್ಬರು ಇಂದಿಲ್ಲಿ ತಿಳಿಸಿದ್ದಾರೆ.
ಮೊದಲೇ ಬುಕ್ ಮಾಡಿದ್ದ ವಿಮಾನಗಳ ರೀಶೆಡ್ಯುಲಿಂಗ್ಗೆ ಕೂಡ ಯಾವುದೇ ಶುಲ್ಕವನ್ನು ವಿಮಾನ ಸಂಸ್ಥೆ ವಸೂಲು ಮಾಡುವುದಿಲ್ಲವೆಂದೂ ಅವರು ಹೇಳಿದ್ದಾರೆ.
ಶ್ರೀನಗರಕ್ಕೆ ಹೋಗುವ ಮತ್ತು ಅಲ್ಲಿಂದ ಹೊರಡುವ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಿಗೆ ಜು.11ರ ವರೆಗೆ ಪ್ರಯಾಣಿಸಲು ಜು.9ರ ಮೊದಲು ಬುಕ್ ಮಾಡಲಾದ ಟಿಕೆಟ್ಗಳಿಗೆ ಈ ನಿಯಮ ಸಡಿಲಿಕೆ ಅನ್ವಯವಾಗುತ್ತದೆ.
ಪ್ರಸ್ತುತ ಎಲ್ಲ ಸ್ಥಳೀಯ ವಿಮಾನ ಸಂಸ್ಥೆಗಳು ಟಿಕೆಟ್ ರದ್ದತಿ ಹಾಗೂ ಮರುನಿಗದಿಗಾಗಿ ರೂ.2 ಸಾವಿರದ ವರೆಗೆ ಭಾರೀ ಶುಲ್ಕವನ್ನು ಪ್ರಯಾಣಿಕರಿಗೆ ವಿಧಿಸುತ್ತಿವೆ.
ಜೆಟ್ ಏರ್ವೇಸ್ ಸಹ, ಕಣಿವೆಯ ಹಾಲಿ ಪರಿಸ್ಥಿತಿಯನ್ನು ಅನುಲಕ್ಷಿಸಿ ತನ್ನ ಗ್ರಾಹಕರಿಗೆ ಯಾವುದೇ ಶುಲ್ಕ ವಿಧಿಸದೆ ಟಿಕೆಟ್ಗಳನ್ನು ರೀ-ಬುಕಿಂಗ್ ಮಾಡುವುದೆಂದು ಘೋಷಿಸಿದೆ.