ಮೂಡುಬಿದಿರೆ: ನಿವೃತ್ತ ಸಿಬ್ಬಂದಿಗೆ ಸನ್ಮಾನ
ಮೂಡುಬಿದಿರೆ, ಜು.10: ಕಡಂದಲೆ ಶ್ರೀಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಗುಮಾಸ್ತರಾಗಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ನಾರಾಯಣ ಮಡಿವಾಳರನ್ನು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕವೃಂದದಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಶಾಲಾ ಸಂಚಾಲಕ ಸುದರ್ಶನ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ವಾದಿರಾಜ ಎಂ. ಶಂಕರನಾರಾಯಣ ರಾವ್ ಕೆ., ಸದಾಶಿವ ರೈ, ಮಂಡಳಿ ಸದಸ್ಯರಾದ ಜಯಶೀಲ ಭಟ್, ರಾಮಕೃಷ್ಣ ಶೆಟ್ಟಿ, ಪ್ರಸಾದ್ ಶೆಟ್ಟಿ, ವೆಂಕಟೇಶ್ ಭಟ್, ಸುಧಾಕರ ಅಂಚನ್, ಜಯಲಕ್ಷ್ಮೀ ಶೆಟ್ಟಿ ಶುಭ ಹಾರೈಸಿದರು.
ಶಿಕ್ಷಕ ಸುಧಾಕರ ಪೊಸ್ರಾಲು ಸನ್ಮಾನ ಪತ್ರವಾಚಿಸಿದರು. ಶಿಕ್ಷಕರಾದ ಸದಾಶಿವ ಉಪಾಧ್ಯಾಯ, ಸೌಮ್ಯಾ, ಶಿಕ್ಷಕೇತರರಾದ ರಾಮ, ವಿದ್ಯಾ, ವಿನೋದ ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕಿ ಗಾಯತ್ರಿ ಎಸ್. ಉಡುಪ ಸ್ವಾಗತಿಸಿದರು. ದಿನಕರ ಕುಂಬಾಸಿ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ್ ಬಿ. ವಂದಿಸಿದರು.
Next Story