ಮಧುಮೇಹದ ತಪಾಸಣಾ ಶಿಬಿರ
ಮಣಿಪಾಲ, ಜು.10: ಇಲ್ಲಿನ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಆಸ್ಪತ್ರೆಯಲ್ಲಿ ಮಧುಮೇಹ ರೋಗದ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಕಾಲೇಜಿನ ಪ್ರಾಂಶುಪಾಲ ಡಾ.ಸತ್ಯನಾರಾಯಣ ಶಿಬಿರವನ್ನು ಉದ್ಘಾಟಿಸಿದರು. ವೈದ್ಯರಾದ ಡಾ.ಶ್ರೀಪತಿ ಆಚಾರ್ಯ, ಡಾ.ಹರಿಪ್ರಸಾದ ಶೆಟ್ಟಿ, ಡಾ. ಸೀತಾರಾಮ ಮಿತ್ತಂತಾಯ, ಡಾ.ಅಜಿತ್ ಕೆ.ಎಸ್., ಡಾ.ರವಿಶಂಕರ ಶೆಣೈ, ಡಾ.ಸಿಜಾ, ಡಾ.ವಿಷ್ಣುಮೋಹನ್, ಡಾ.ದೀಪಾಲಿ ಸ್ವಾಮಿ ಈ ಸಂದರ್ಭ ಉಪಸ್ಥಿತರಿದ್ದರು.
Next Story