Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸೋಷಿಯಲ್ ಮೀಡಿಯಾ
  3. ಗೋಪ್ರೇಮ ಹೇಳೋಕೆ, ಕಸಾಯಿಖಾನೆ ಡೆವಲಪ್...

ಗೋಪ್ರೇಮ ಹೇಳೋಕೆ, ಕಸಾಯಿಖಾನೆ ಡೆವಲಪ್ ಮಾಡೋಕೆ

ದೇಶಭಕ್ತರ ಸರಕಾರದ ತೆರೆಮರೆಯ ಕಳ್ಳಾಟಗಳ ಪುಟ್ಟ ಸ್ಯಾಂಪಲ್

ಟಿ.ಕೆ. ದಯಾನಂದಟಿ.ಕೆ. ದಯಾನಂದ11 July 2016 12:02 PM IST
share
ಗೋಪ್ರೇಮ ಹೇಳೋಕೆ, ಕಸಾಯಿಖಾನೆ ಡೆವಲಪ್ ಮಾಡೋಕೆ

ಇದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ಕೇಂದ್ರದ ಬಿಜೆಪಿ ಸರಕಾರ ಇಡೀ ದೇಶವನ್ನೇ ಜಾನುವಾರುಗಳನ್ನು ಕೊಲ್ಲುವ ಕಸಾಯಿಖಾನೆಗಳಿಂದ ತುಂಬಿಸಲು ಹೊರಟಿದೆ. ಕಳೆದ ಡಿಸೆಂಬರ್‌ನಲ್ಲಿ ಇಂಥದೊಂದು ‘ ಸರಕಾರಿ ಕಸಾಯಿಖಾನೆ ಅಭಿವೃದ್ಧಿ ಯೋಜನೆ‘ಗೆ ಕೇಂದ್ರದ ಫುಡ್ ಪ್ರೊಸೆಸಿಂಗ್ ಇಂಡಸ್ಟ್ರಿ ಇಲಾಖೆಯ ರಾಜ್ಯಮಂತ್ರಿ ಸಾಧ್ವಿ ನಿರಂಜನ ಜ್ಯೋತಿ 783 ಕೋಟಿ ರೂ.ಗಳನ್ನು ಸುರಿಯಲು ಹೊರಟಿದ್ದಾರೆ.

ಬಂಗಾಳ, ಉತ್ತರಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಸಿಕ್ಕಿಂ, ರಾಜಸ್ಥಾನ್, ಪಂಜಾಬ್, ಕೇರಳ, ನಾಗಾಲ್ಯಾಂಡ್, ಮಿಜೋರಾಂ, ಮಹಾರಾಷ್ಟ್ರ, ಜಾರ್ಖಂಡ್, ಜಮ್ಮುಕಾಶ್ಮೀರ, ಹಿಮಾಚಲಪ್ರದೇಶ, ಹರಿಯಾಣ, ಗೋವಾ, ಛತ್ತೀಸ್ ಗಡ, ಅರುಣಾಚಲಪ್ರದೇಶ ಮತ್ತು ಕರ್ನಾಟಕದ ಮೈಸೂರು, ಹೊಸಪೇಟೆ, ಚಾಮರಾಜನಗರ, ಚಿತ್ರದುರ್ಗಗಳಲ್ಲಿ ಮುನಿಸಿಪಲ್ ಅಡ್ಮಿನಿಸ್ಟ್ರೇಷನ್/ಸಿಟಿ ಕಾರ್ಪೊರೇಷನ್ ಕಡೆಯಿಂದ ನಿರ್ಮಾಣಗೊಂಡ ಸರ್ಕಾರಿ ಕಸಾಯಿಖಾನೆಗಳನ್ನು ಅಭಿವೃದ್ಧಿಪಡಿಸುವುದು, ಹೊಸದಾಗಿ ಅಲ್ಟ್ರಾಮಾಡನರ್ ಯಂತ್ರೋಪಕರಣದಿಂದ ಪ್ರಾಣಿವಧೆ, ಜಾನುವಾರು ಹತ್ಯೆಗಳನ್ನು ಎಸಗಲು ಪ್ರೋತ್ಸಾಹಿಸುವುದು ಫುಡ್ ಪ್ರೊಸೆಸಿಂಗ್ ಇಂಡಸ್ಟ್ರಿ ಸಚಿವೆಯ ಸದ್ಯದ ಮಹದೋದ್ದೇಶ.

ಇವಿಷ್ಟು ರಾಜ್ಯಗಳ ಮಹಾನಗರಗಳಲ್ಲಿ ಕಸಾಯಿಖಾನೆಗಳನ್ನು ಅಭಿವೃದ್ಧಿಪಡಿಸಲು ಹೊರಟಿರುವ ಸರಕಾರ ಮತ್ತದರ ಸಾಧ್ವಿ ಸಚಿವೆ ಆ ಕಸಾಯಿಖಾನೆಗಳಲ್ಲಿ ದಿನಕ್ಕೆ ಎಷ್ಟು ಪ್ರಾಣಿಗಳನ್ನು ಹತ್ಯೆ ಮಾಡಲಾಗುತ್ತದೆಂಬ ಲೆಕ್ಕವನ್ನೂ ಕೊಟ್ಟಿದ್ದಾರೆ. ಎಲ್ಲಿಯೂ ಜಾನುವಾರುಗಳ ಉಲ್ಲೇಖವಿಲ್ಲ. ಜಾಣತನದಿಂದ ‘ಲಾರ್ಜ್ ಅನಿಮಲ್ಸ್ ಎಂದು ತೇಲಿಸಲಾಗಿದೆ. ‘ಲಾರ್ಜ್ ಅನಿಮಲ್ಸ್‘ ಅಂದರೆ ಜಿರಾಫೆ ಒಂಟೆಗಳಲ್ಲ, ಡೈನೋಸಾರುಗಳೂ ಅಲ್ಲ, ಅವು ಎತ್ತು, ದನ, ಹಸುಗಳೆಂದರ್ಥ.

ಸರಕಾರಗಳು ನಡೆಸೋ ಈ ಕಸಾಯಿಖಾನೆಗಳಲ್ಲಿ ಎಮ್ಮೆ, ಕೋಣಗಳನ್ನಷ್ಟೇ ಹತ್ಯೆಗೈಯಲಾಗುತ್ತದೆ, ಹಸು, ಕರುಗಳನ್ನ ಕೊಲ್ಲುವುದಿಲ್ಲ ಎನ್ನುವುದು ನಿಮ್ಮ ಅನಿಸಿಕೆಯಾಗಿದ್ದರೆ ಕ್ಷಮಿಸಿ, ನಿಮ್ಮ ಎಣಿಕೆ ತಪ್ಪು. ಲೆಕ್ಕದಲ್ಲಿ ಎಮ್ಮೆ, ಕೋಣಗಳನ್ನು ತೋರಿಸುವ ಕಸಾಯಿಖಾನೆಗಳಲ್ಲಿ ಕೊಲ್ಲುವುದು ಹಸು, ದನಗಳನ್ನೇ. ಹೀಗಂತ ‘ಧರ್ಮ ಜನಜಾಗೃತಿ ಸಮಿತಿ‘ಯ ಲೇಖನವೊಂದು ಹೇಳುತ್ತದೆ. ಕಸಾಯಿಖಾನೆಗಳ ಕುರಿತಾದ ಫ್ಯಾಕ್ಟ್ ಫೈಂಡಿಂಗ್ ರಿಪೋರ್ಟುಗಳೂ ಹೇಳುತ್ತವೆ.

ಸದ್ಯಕ್ಕೆ ಪಶು ಜಾನುವಾರುಗಳನ್ನು ಕತ್ತಿಯಿಂದ ಕಡಿಯುವುದು ಬೇಡ, ಅಲ್ಟ್ರಾ ಮಾಡರ್ನ್ ಯಂತ್ರೋಪಕರಣಗಳಿಂದ ವೈಜ್ಞಾನಿಕವಾಗಿ ಕೊಲ್ಲಿ ಅಂತ ಕೇಂದ್ರ ಸರಕಾರ ಮತ್ತು ಸಾಧ್ವಿ ನಿರಂಜನರ ಮಹದಾಸೆ. ಸಾಧ್ವಿ ಸನ್ಯಾಸಿಯಾಗಿದ್ದುಕೊಂಡು ಪ್ರಾಣಿವಧೆ, ಜಾನುವಾರು ಹತ್ಯೆಯನ್ನು ಅಭಿವೃದ್ಧಿಪಡಿಸಲು ಹೊರಟಿರುವ ಕೇಂದ್ರಮಂತ್ರಿಯ ಧೈರ್ಯ ಮೆಚ್ಚಬೇಕಾದ್ದೇ. ಬಹಳಷ್ಟು ರಾಜ್ಯಗಳಲ್ಲಿ ಗೋಹತ್ಯೆ ನಿಷೇಧಗೊಂಡಿದ್ದರೂ, ಅಂಥ ರಾಜ್ಯಗಳಲ್ಲಿ ವಯಸ್ಸಾದ, ದುರ್ಬಲಗೊಂಡ ಹಸು, ದನಗಳನ್ನು ಸಿಟಿ ಕಾರ್ಪೊರೇಷನ್ಗಳಿಂದ ‘ಫಿಟ್ ಫಾರ್ ಸ್ಲಾಟರ್‘ ಸರ್ಟಿಫಿಕೇಟ್ ಪಡೆದು ಸರಕಾರಿ ಕಸಾಯಿಖಾನೆಗಳಲ್ಲಿ ಕೊಲ್ಲುವ ಸಡಲಿಕೆಯನ್ನೂ ಸರಕಾರ ದಯಪಾಲಿಸಿರುವುದು ದುರಂತ. ಗೋ ಪ್ರೇಮ ಹೇಳೋಕೆ, ಕಸಾಯಿಖಾನೆ ಡೆವಲಪ್ ಮಾಡೋಕೆ. ಇದು ದೇಶಭಕ್ತರ ಸರಕಾರದ ತೆರೆಮರೆಯ ಕಳ್ಳಾಟಗಳ ಪುಟ್ಟ ಸ್ಯಾಂಪಲ್.

ಪೂರಕ ಲಿಂಕ್ ಗಳು 
Press Information Bureau Government of india
http://pib.nic.in/newsite/PrintRelease.aspx?relid=133994

State Wise Details of Abattoirs Project Assisted by MoFPI
http://www.mofpi.nic.in/H_Dwld.aspx…

ANNUAL REPORT 2014-2015 - PAGE 66
http://www.mofpi.nic.in/H_Dwld.aspx…

share
ಟಿ.ಕೆ. ದಯಾನಂದ
ಟಿ.ಕೆ. ದಯಾನಂದ
Next Story
X