ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಸಿಬಿಐ ತನಿಖೆಗೆ ಎಸ್ಡಿಪಿಐ ಒತ್ತಾಯ
ಮಂಗಳೂರು, ಜು.11: ಡಿವೈಎಸ್ಪಿ ಗಣಪತಿ ಕರ್ತವ್ಯದಲ್ಲೇ ಆತ್ಮಹತ್ಯೆಗೈದಿರುವುದು ಮತ್ತು ಈ ಮಧ್ಯೆ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ದ.ಕ. ಜಿಲ್ಲಾ ಎಸ್ಡಿಪಿಐ ಸಂಶಯ ವ್ಯಕ್ತಪಡಿಸಿದ್ದು, ತನಿಖೆಯನ್ನು ನ್ಯಾಯಾಂಗ ಅಥವಾ ಸಿಬಿಐಗೆ ವರ್ಗಾಯಿಸುವಂತೆ ಒತ್ತಾಯಿಸಿದೆ.
ರಾಜಕೀಯ ಪ್ರಭಾವ, ಹಿರಿಯ ಅಧಿಕಾರಿಗಳ ಕಿರು ಕುಳ ದಂತಹ ಸಮಸ್ಯೆಗಳ ಒತ್ತಡದಿಂದ ಪರಿತಪಿಸುತ್ತಿರುವ ದಕ್ಷ ಅಧಿಕಾರಿಗಳು ಆತ್ಮಹತ್ಯೆಯಂತಹ ಸ್ವಯಂ ಕೃತ್ಯಕ್ಕೆ ಶರ ಣಾಗಬಾರದು. ತಮ್ಮ ಕರ್ತವ್ಯ ಸೇವಾ ಮನೋಭಾವಕ್ಕೆ ಧಕ್ಕೆಯುಂಟಾದಾಗ ವಿಷಯವನ್ನು ಸಮಾಜದ ಮುಂದಿಟ್ಟು ನ್ಯಾಯ ಯುತ ಪರಿಹಾರದಂತಹ ಹೋರಾಟಕ್ಕೆ ಮುಂದಡಿ ಇಡುವಂತೆ ಒತ್ತಾಯಿಸಿದೆ.
Next Story