ಬಿಜೆಪಿ ನಾಯಕನ ಹತ್ಯೆಗೆ ರಾಜಕೀಯ ದ್ವೇಷವೇ ಕಾರಣ: ಪಿಣರಾಯಿ ವಿಜಯನ್
![ಬಿಜೆಪಿ ನಾಯಕನ ಹತ್ಯೆಗೆ ರಾಜಕೀಯ ದ್ವೇಷವೇ ಕಾರಣ: ಪಿಣರಾಯಿ ವಿಜಯನ್ ಬಿಜೆಪಿ ನಾಯಕನ ಹತ್ಯೆಗೆ ರಾಜಕೀಯ ದ್ವೇಷವೇ ಕಾರಣ: ಪಿಣರಾಯಿ ವಿಜಯನ್](https://www.varthabharati.in/sites/default/files/images/articles/2016/07/13/pinarayi-vijayan22.jpg)
ತಿರುವನಂತಪುರಂ,ಜುಲೈ 13: ಕಣ್ಣೂರಿನಬಿಜೆಪಿ ಕಾರ್ಯಕರ್ತನ ಹತ್ಯೆಗೆ ಸಿಪಿಐಎಂ ಕಾರ್ಯಕರ್ತ ಧನರಾಜ್ ಹತ್ಯೆಯ ದ್ವೇಷವೇ ಕಾರಣವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆಂದು ವರದಿಯಾಗಿದೆ. ಸಿಪಿಐಎಂ ಕಾರ್ಯಕರ್ತ ಧನರಾಜ್ರನ್ನು ಹತ್ತು ಮಂದಿ ಬಿಜೆಪಿ ಕಾರ್ಯಕರ್ತರು ಸೇರಿ ಕೊಲೆಗೈದಿದ್ದಾರೆ. ಈ ದ್ವೇಷವೇ ನಂತರ ಬಿಜೆಪಿ ಕಾರ್ಯಕರ್ತ ರಾಮಚಂದ್ರನ್ ಹತ್ಯೆಗೆ ಕಾರಣವಾಗಿದೆ. ಎರಡು ಪ್ರಕರಣಗಳ ತನಿಖೆಯೂ ಸುಸೂತ್ರವಾಗಿ ನಡೆಯುತ್ತಿದ್ದು ಪೊಲೀಸರು ಸಮರ್ಥವಾಗಿ ಮಧ್ಯಪ್ರವೇಶಿಸಿದ್ದರಿಂದ ಈಗ ಪರಿಸ್ಥಿತಿ ಶಾಂತವಾಗಿದೆ ಎಂದು ಮುಖ್ಯಮಂತ್ರಿ ವಿಧಾನಸಭೆಗೆತಿಳಿಸಿದ್ದಾರೆ ಎಂದು ವರದಿಯಾಗಿದೆ.
ಕಣ್ಣೂರಿನ ರಕ್ತಸಿಕ್ತರಾಜಕೀಯವನ್ನು ವಿಧಾನಸಭೆ ಕಾರ್ಯಕಲಾಪ ನಿಲ್ಲಿಸಿ ತುರ್ತಾಗಿ ಚರ್ಚಿಸಬೇಕೆಂದು ಪ್ರತಿಪಕ್ಷಗಳು ಮುಂದಿಟ್ಟ ಬೇಡಿಕೆಗೆ ಮುಖ್ಯಮಂತ್ರಿ ಪ್ರತಿಕ್ರಿಯಿಸುತ್ತಿದ್ದರು. ಕಾಂಗ್ರೆಸ್ ನಾಯಕ ಕೆ.ಮುರಳೀಧರನ್ ಈ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು. ಕಣ್ಣೂರಿನಲ್ಲಿನಡೆದರಾಜಕೀಯ ಕೊಲೆಪಾತಕ ಸಹಿತ ರಾಜ್ಯದಲ್ಲಿ ಕಳೆದ ಒಂದು ತಿಂಗಳಲ್ಲಿ ನಡೆದಿರುವ ಅಹಿತಕರ ಘಟನೆಗಳನ್ನು ಚರ್ಚಿಸಬೇಕೆಂದು ಪ್ರತಿಪಕ್ಷಗಳ ಬೇಡಿಕೆಯಾಗಿದೆ ಎಂದು ವರದಿ ತಿಳಿಸಿದೆ.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಪತ್ರಕರ್ತರ ಮೇಲೆಯೂ ದಾಳಿಯಾಗಿದೆ ಎಂದು ಕೆ. ಮುರಳೀಧರನ್ ಈ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಸೋಮವಾರ ರಾತ್ರಿ ಹತ್ತು ಗಂಟೆಗೆ ಸಿಪಿಐಎಂ ಕಾರ್ಯಕರ್ತ ಧನರಾಜ್ ಹತ್ಯೆಯಾಗಿತ್ತು,ಆನಂತರ ರಾತ್ರಿ ಹನ್ನೆರಡೂವರೆಗಂಟೆಗೆ ಮೂವತ್ತು ಮಂದಿಯ ತಂಡ ಬಿಎಂಎಸ್ ಕಾರ್ಯಕರ್ತ ರಾಮಚಂದ್ರನ್ರನ್ನು ಹತೈಗೈದಿತ್ತು.